ನವದೆಹಲಿ, ಡಿ. 4– ಕೇಂದ್ರ ರೇಷ್ಮೆ ಮಂಡಳಿಯ ಕೇಂದ್ರ ಕಚೇರಿಯನ್ನು ಬೆಂಗಳೂರಿಗೆ ವರ್ಗಾಯಿಸುವ ವಿಷಯದಲ್ಲಿ ವಿದೇಶ ವಾಣಿಜ್ಯ ಉಪಸಚಿವರಾದ ಚೌಧುರಿ ರಾಮಸೇವಕ್ ಯಾದವ್ ಅವರು ಯಾವುದೇ ಅಧಿಕೃತ ಹೇಳಿಕೆ ನೀಡಲು ನಿರಾಕರಿಸಿದ ಕಾರಣ ಮೈಸೂರಿನ ಮೂವರು ಪಾರ್ಲಿಮೆಂಟ್ ಸದಸ್ಯರಾದ ಎಸ್.ಎಂ. ಕೃಷ್ಣ ಮತ್ತು ಕೆ. ಲಕ್ಕಪ್ಪ (ಇಬ್ಬರೂ ಪಿ.ಎಸ್.ಪಿ.), ಜೆ.ಎಚ್. ಪಟೇಲ್ (ಎಸ್.ಎಸ್.ಪಿ.) ಅವರು ಇಂದು ಲೋಕಸಭಾತ್ಯಾಗ ಮಾಡಿದರು.