<p><strong>ಎರಡು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಗಿರವಿ ವ್ಯವಹಾರ</strong></p>.<p><strong>ಮದ್ರಾಸ್, ಅ. 5– </strong>ಸಣ್ಣಪುಟ್ಟ ಸಾಲಗಳ ನೀಡಿಕೆಗೆ ರಾಷ್ಟ್ರೀಕೃತ ಕೆನರಾ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್ ಗಿರವಿ ವ್ಯವಹಾರ ಆರಂಭಿಸಬಹುದು.</p>.<p>ಖಾಸಗಿ ಗಿರವಿ ವ್ಯಾಪಾರಿಗಳು ಶೋಷಿಸುತ್ತಿರುವುದರ ಬಗ್ಗೆ ತಮಿಳುನಾಡು ಆಡಳಿತ ಕಾಂಗ್ರೆಸ್ ನಾಯಕರು ಕೇಂದ್ರ ಹಣಕಾಸು ಸಚಿವ ಚವಾಣರ ಗಮನಕ್ಕೆ ತಂದಾಗ ಅವರು ಈ ವಿಷಯವನ್ನು ತಿಳಿಸಿದರೆಂದು ತಮಿಳುನಾಡು ಆಡಳಿತ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೋಸಲರಾಮ್ ಇಂದು ಇಲ್ಲಿ ಹೇಳಿದರು.</p>.<p>ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳಲ್ಲೂ ಸಾರ್ವಜನಿಕ ಸಂಪರ್ಕ ಅಧಿಕಾರಿಗಳನ್ನು ನೇಮಿಸಬೇಕೆಂದು ಈ ನಾಯಕರು ಒತ್ತಾಯ ಮಾಡಿದರೆಂದು ಅವರು ಹೇಳಿದರು. ಸಾಲದ ಅರ್ಜಿಗಳನ್ನು ಪಡೆಯಲು ಹಾಗೂ ಸಲ್ಲಿಸಲು ಜನ<br />ಎದುರಿಸುತ್ತಿರುವ ಕಷ್ಟಗಳನ್ನು ಸಚಿವರ ಗಮನಕ್ಕೆ ತರಲಾಯಿತು.</p>.<p><strong>ಆಯುರ್ವೇದ ಸುಧಾರಣಾ ಸಲಹೆಗಳ ಪರಿಶೀಲನೆಗೆ ತಜ್ಞರ ಸಮಿತಿ ನೇಮಕ ಸಂಭವ</strong></p>.<p><strong>ಶಿಡ್ಲಘಟ್ಟ, ಅ. 5– </strong>ಆಯುರ್ವೇದ ವೈದ್ಯ ಕ್ರಮಗಳ ಸುಧಾರಣೆಗೆ ಸಂಬಂಧಿಸಿದ ಸಲಹೆಗಳನ್ನು ಪರಿಶೀಲಿಸಲು ತಜ್ಞರ ಸಮಿತಿಯೊಂದನ್ನು ನೇಮಿಸುವ ಪ್ರಶ್ನೆಯನ್ನು ರಾಜ್ಯ ಸರ್ಕಾರ ಪರಿಶೀಲಿಸುತ್ತಿದೆಯೆಂದು ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಇಂದು ಇಲ್ಲಿ ತಿಳಿಸಿದರು.</p>.<p>ಶಿಡ್ಲಘಟ್ಟ ಕಂಬೈನ್ಡ್ ಡಿಸ್ಪೆನ್ಸರಿ ಆವರಣದಲ್ಲಿ ಡಾ. ಎಸ್ಆರ್ಎನ್ ಮೂರ್ತಿ ರಾವ್ ಹಾಗೂ ಶ್ರೀಮತಿ ಮಹಾಲಕ್ಷ್ಮಮ್ಮ ಅವರು ದಾನವಾಗಿ ನೀಡಿದ ನಿಧಿಯಿಂದ ನಿರ್ಮಿಸಲಾಗುವ ಹೆರಿಗೆ ಆಸ್ಪತ್ರೆಯ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿಗಳು ನೆರವೇರಿಸಿ ಮಾತನಾಡಿದರು. ವಿಧಾನಸಭಾ ಸದಸ್ಯ ಬಿ. ವೆಂಕಟರಾಯಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಎರಡು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಗಿರವಿ ವ್ಯವಹಾರ</strong></p>.<p><strong>ಮದ್ರಾಸ್, ಅ. 5– </strong>ಸಣ್ಣಪುಟ್ಟ ಸಾಲಗಳ ನೀಡಿಕೆಗೆ ರಾಷ್ಟ್ರೀಕೃತ ಕೆನರಾ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್ ಗಿರವಿ ವ್ಯವಹಾರ ಆರಂಭಿಸಬಹುದು.</p>.<p>ಖಾಸಗಿ ಗಿರವಿ ವ್ಯಾಪಾರಿಗಳು ಶೋಷಿಸುತ್ತಿರುವುದರ ಬಗ್ಗೆ ತಮಿಳುನಾಡು ಆಡಳಿತ ಕಾಂಗ್ರೆಸ್ ನಾಯಕರು ಕೇಂದ್ರ ಹಣಕಾಸು ಸಚಿವ ಚವಾಣರ ಗಮನಕ್ಕೆ ತಂದಾಗ ಅವರು ಈ ವಿಷಯವನ್ನು ತಿಳಿಸಿದರೆಂದು ತಮಿಳುನಾಡು ಆಡಳಿತ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೋಸಲರಾಮ್ ಇಂದು ಇಲ್ಲಿ ಹೇಳಿದರು.</p>.<p>ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳಲ್ಲೂ ಸಾರ್ವಜನಿಕ ಸಂಪರ್ಕ ಅಧಿಕಾರಿಗಳನ್ನು ನೇಮಿಸಬೇಕೆಂದು ಈ ನಾಯಕರು ಒತ್ತಾಯ ಮಾಡಿದರೆಂದು ಅವರು ಹೇಳಿದರು. ಸಾಲದ ಅರ್ಜಿಗಳನ್ನು ಪಡೆಯಲು ಹಾಗೂ ಸಲ್ಲಿಸಲು ಜನ<br />ಎದುರಿಸುತ್ತಿರುವ ಕಷ್ಟಗಳನ್ನು ಸಚಿವರ ಗಮನಕ್ಕೆ ತರಲಾಯಿತು.</p>.<p><strong>ಆಯುರ್ವೇದ ಸುಧಾರಣಾ ಸಲಹೆಗಳ ಪರಿಶೀಲನೆಗೆ ತಜ್ಞರ ಸಮಿತಿ ನೇಮಕ ಸಂಭವ</strong></p>.<p><strong>ಶಿಡ್ಲಘಟ್ಟ, ಅ. 5– </strong>ಆಯುರ್ವೇದ ವೈದ್ಯ ಕ್ರಮಗಳ ಸುಧಾರಣೆಗೆ ಸಂಬಂಧಿಸಿದ ಸಲಹೆಗಳನ್ನು ಪರಿಶೀಲಿಸಲು ತಜ್ಞರ ಸಮಿತಿಯೊಂದನ್ನು ನೇಮಿಸುವ ಪ್ರಶ್ನೆಯನ್ನು ರಾಜ್ಯ ಸರ್ಕಾರ ಪರಿಶೀಲಿಸುತ್ತಿದೆಯೆಂದು ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಇಂದು ಇಲ್ಲಿ ತಿಳಿಸಿದರು.</p>.<p>ಶಿಡ್ಲಘಟ್ಟ ಕಂಬೈನ್ಡ್ ಡಿಸ್ಪೆನ್ಸರಿ ಆವರಣದಲ್ಲಿ ಡಾ. ಎಸ್ಆರ್ಎನ್ ಮೂರ್ತಿ ರಾವ್ ಹಾಗೂ ಶ್ರೀಮತಿ ಮಹಾಲಕ್ಷ್ಮಮ್ಮ ಅವರು ದಾನವಾಗಿ ನೀಡಿದ ನಿಧಿಯಿಂದ ನಿರ್ಮಿಸಲಾಗುವ ಹೆರಿಗೆ ಆಸ್ಪತ್ರೆಯ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿಗಳು ನೆರವೇರಿಸಿ ಮಾತನಾಡಿದರು. ವಿಧಾನಸಭಾ ಸದಸ್ಯ ಬಿ. ವೆಂಕಟರಾಯಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>