<p>ಕೊರೊನಾಗೆ ಹೆದರಿ ಬೆಂಗಳೂರಿನ ಮನೆ ಖಾಲಿ ಮಾಡಿಕೊಂಡು, ಹೆಂಡ್ತಿ-ಮಕ್ಕಳ ಜೊತೆ ಲಗೇಜ್ ತುಂಬಿಕೊಂಡು ಶಂಕ್ರಿ ತನ್ನ ಹಳ್ಳಿಗೆ ಹೊರಟಿದ್ದ.</p>.<p>‘ಬಡಪಾಯಿ ಬೆಂಗಳೂರು ನಿಮಗೆ ಬೇಡವಾಯಿತೇ?’</p>.<p>‘ಕೊರೊನಾ ಕಾಟದಲ್ಲಿ ಉದ್ಯೋಗವಿಲ್ಲ, ವ್ಯವಹಾರವಿಲ್ಲ, ದಿನಬೆಳಗಾದರೆ ಏರಿಯಾಏರಿಯಾಗಳು ಸೀಲ್ಡೌನ್ ಆಗ್ತಿವೆ. ಇನ್ನೇನು ಮಾಡೋದು, ಕೆಟ್ಟು ಪಟ್ಟಣ ಸೇರಿದ್ದೆ, ಈಗ ಕಂಗೆಟ್ಟು ವಾಪಸ್ ಹಳ್ಳಿ ಸೇರ್ತಿದ್ದೀನಿ’ ನಿಷ್ಠುರವಾಗೇ ಹೇಳಿದ ಶಂಕ್ರಿ.</p>.<p>‘ಬೆಂಗಳೂರು ಮೊದಲಿನಂತಿಲ್ಲ, ಮಾಲುಮಳಿಗೆಯಲ್ಲಿ ವ್ಯವಹಾರವಿಲ್ಲ, ಸಿನಿಮಾ ಥಿಯೇಟರ್ಗಳಿಲ್ಲ, ಯಾವ ಸಡಗರಕ್ಕೆ ಈ ಊರಲ್ಲಿ ಇರಬೇಕು?’ ಶಂಕ್ರಿ ಹೆಂಡ್ತಿ ಸುಮಿಗೂ ಬೇಸರ.</p>.<p>‘ದುಡಿಮೆ ಇಲ್ಲ, ಸಾಲದ್ದಕ್ಕೆ ಮನೆ ಬಾಡಿಗೆ ದುಬಾರಿ, ಮಕ್ಕಳ ಸ್ಕೂಲ್ ಫೀಸು ರಾಬರಿ, ಜೀವನ ಗಾಬರಿ ಅಂತ ಬೆಂಗಳೂರು ಬಿಡ್ತಿದ್ದೀರಾ?’</p>.<p>‘ಹೌದು, ಕೆಂಪೇಗೌಡರು ಕಟ್ಟಿಸಿದ ಬೆಂಗಳೂರಲ್ಲಿ ಕೊರೊನಾ ವಕ್ಕರಿಸಿ ಉಸಿರುಕಟ್ಟಿಸುತ್ತಿದೆ’ ಅಂದ ಶಂಕ್ರಿ.</p>.<p>‘ಇಷ್ಟು ದಿನ ಬದುಕು ಕೊಟ್ಟ ಬೆಂದಕಾಳೂರು ಈಗ ನೊಂದಕಾಳೂರು ಆಗಿಬಿಟ್ಟಿತಲ್ಲಾ ಅಂತ ನಮಗೂ ನೋವಿದೆ’ ಸುಮಿಗೆ ಸಂಕಟ.</p>.<p>‘ಬೆಂಗಳೂರಿನಲ್ಲಿ ಈಗ ಯಾರ ಬೇಳೆಯೂ ಬೇಯುತ್ತಿಲ್ಲ. ಸಿನಿಮಾ ನಟರ ಕಟೌಟ್ ರಾರಾಜಿಸುತ್ತಿಲ್ಲ. ಹೋರಾಟಗಾರರು ಮನೆಯಿಂದ ಹೊರಬರುತ್ತಿಲ್ಲ. ರಾಜಕಾರಣಿಗಳು ಶಕ್ತಿಪ್ರದರ್ಶನದ ಸಮಾವೇಶ ಏರ್ಪಡಿಸಿ ಟ್ರಾಫಿಕ್ ಜಾಮ್ ಮಾಡ್ತಿಲ್ಲ. ಹಿಂದಿನಂತೆ ದುಡ್ಡು-ದೌಲತ್ತು ಇಲ್ಲ. ಈ ಸಮಸ್ಯೆಗಳು ನಿವಾರಣೆಯಾಗುವವರೆಗೂ ಇತ್ತ ತಲೆ ಹಾಕುವುದಿಲ್ಲ’ ಅಂದ ಶಂಕ್ರಿ.</p>.<p>‘ಸರಿ ಹಾಗಾದ್ರೆ... ಬೆಂಗಳೂರಿನಿಂದ ಬರುವವರು ಕೊರೊನಾ ತರ್ತಾರೆ, ಊರಿಗೆ ಬಿಟ್ಟುಕೊಳ್ಳೋದಿಲ್ಲ ಅಂತ ಹಳ್ಳಿ ಹಳ್ಳಿಗಳಲ್ಲಿ ರಸ್ತೆಗೆ ಬೇಲಿ ಹಾಕಿದ್ದಾರಂತೆ... ನಿಮ್ಮನ್ನು ಊರಿಗೆ ಸೇರಿಸ್ತಾರೋ ಇಲ್ವೋ ಯೋಚ್ನೆ ಮಾಡಿದ್ದೀರಾ?’</p>.<p>ಈ ಬಗ್ಗೆ ಯೋಚನೆಯನ್ನೇ ಮಾಡಿರದಿದ್ದ ಶಂಕ್ರಿ– ಸುಮಿ ಮುಖಮುಖ ನೋಡಿಕೊಂಡು ಪೆಚ್ಚಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊರೊನಾಗೆ ಹೆದರಿ ಬೆಂಗಳೂರಿನ ಮನೆ ಖಾಲಿ ಮಾಡಿಕೊಂಡು, ಹೆಂಡ್ತಿ-ಮಕ್ಕಳ ಜೊತೆ ಲಗೇಜ್ ತುಂಬಿಕೊಂಡು ಶಂಕ್ರಿ ತನ್ನ ಹಳ್ಳಿಗೆ ಹೊರಟಿದ್ದ.</p>.<p>‘ಬಡಪಾಯಿ ಬೆಂಗಳೂರು ನಿಮಗೆ ಬೇಡವಾಯಿತೇ?’</p>.<p>‘ಕೊರೊನಾ ಕಾಟದಲ್ಲಿ ಉದ್ಯೋಗವಿಲ್ಲ, ವ್ಯವಹಾರವಿಲ್ಲ, ದಿನಬೆಳಗಾದರೆ ಏರಿಯಾಏರಿಯಾಗಳು ಸೀಲ್ಡೌನ್ ಆಗ್ತಿವೆ. ಇನ್ನೇನು ಮಾಡೋದು, ಕೆಟ್ಟು ಪಟ್ಟಣ ಸೇರಿದ್ದೆ, ಈಗ ಕಂಗೆಟ್ಟು ವಾಪಸ್ ಹಳ್ಳಿ ಸೇರ್ತಿದ್ದೀನಿ’ ನಿಷ್ಠುರವಾಗೇ ಹೇಳಿದ ಶಂಕ್ರಿ.</p>.<p>‘ಬೆಂಗಳೂರು ಮೊದಲಿನಂತಿಲ್ಲ, ಮಾಲುಮಳಿಗೆಯಲ್ಲಿ ವ್ಯವಹಾರವಿಲ್ಲ, ಸಿನಿಮಾ ಥಿಯೇಟರ್ಗಳಿಲ್ಲ, ಯಾವ ಸಡಗರಕ್ಕೆ ಈ ಊರಲ್ಲಿ ಇರಬೇಕು?’ ಶಂಕ್ರಿ ಹೆಂಡ್ತಿ ಸುಮಿಗೂ ಬೇಸರ.</p>.<p>‘ದುಡಿಮೆ ಇಲ್ಲ, ಸಾಲದ್ದಕ್ಕೆ ಮನೆ ಬಾಡಿಗೆ ದುಬಾರಿ, ಮಕ್ಕಳ ಸ್ಕೂಲ್ ಫೀಸು ರಾಬರಿ, ಜೀವನ ಗಾಬರಿ ಅಂತ ಬೆಂಗಳೂರು ಬಿಡ್ತಿದ್ದೀರಾ?’</p>.<p>‘ಹೌದು, ಕೆಂಪೇಗೌಡರು ಕಟ್ಟಿಸಿದ ಬೆಂಗಳೂರಲ್ಲಿ ಕೊರೊನಾ ವಕ್ಕರಿಸಿ ಉಸಿರುಕಟ್ಟಿಸುತ್ತಿದೆ’ ಅಂದ ಶಂಕ್ರಿ.</p>.<p>‘ಇಷ್ಟು ದಿನ ಬದುಕು ಕೊಟ್ಟ ಬೆಂದಕಾಳೂರು ಈಗ ನೊಂದಕಾಳೂರು ಆಗಿಬಿಟ್ಟಿತಲ್ಲಾ ಅಂತ ನಮಗೂ ನೋವಿದೆ’ ಸುಮಿಗೆ ಸಂಕಟ.</p>.<p>‘ಬೆಂಗಳೂರಿನಲ್ಲಿ ಈಗ ಯಾರ ಬೇಳೆಯೂ ಬೇಯುತ್ತಿಲ್ಲ. ಸಿನಿಮಾ ನಟರ ಕಟೌಟ್ ರಾರಾಜಿಸುತ್ತಿಲ್ಲ. ಹೋರಾಟಗಾರರು ಮನೆಯಿಂದ ಹೊರಬರುತ್ತಿಲ್ಲ. ರಾಜಕಾರಣಿಗಳು ಶಕ್ತಿಪ್ರದರ್ಶನದ ಸಮಾವೇಶ ಏರ್ಪಡಿಸಿ ಟ್ರಾಫಿಕ್ ಜಾಮ್ ಮಾಡ್ತಿಲ್ಲ. ಹಿಂದಿನಂತೆ ದುಡ್ಡು-ದೌಲತ್ತು ಇಲ್ಲ. ಈ ಸಮಸ್ಯೆಗಳು ನಿವಾರಣೆಯಾಗುವವರೆಗೂ ಇತ್ತ ತಲೆ ಹಾಕುವುದಿಲ್ಲ’ ಅಂದ ಶಂಕ್ರಿ.</p>.<p>‘ಸರಿ ಹಾಗಾದ್ರೆ... ಬೆಂಗಳೂರಿನಿಂದ ಬರುವವರು ಕೊರೊನಾ ತರ್ತಾರೆ, ಊರಿಗೆ ಬಿಟ್ಟುಕೊಳ್ಳೋದಿಲ್ಲ ಅಂತ ಹಳ್ಳಿ ಹಳ್ಳಿಗಳಲ್ಲಿ ರಸ್ತೆಗೆ ಬೇಲಿ ಹಾಕಿದ್ದಾರಂತೆ... ನಿಮ್ಮನ್ನು ಊರಿಗೆ ಸೇರಿಸ್ತಾರೋ ಇಲ್ವೋ ಯೋಚ್ನೆ ಮಾಡಿದ್ದೀರಾ?’</p>.<p>ಈ ಬಗ್ಗೆ ಯೋಚನೆಯನ್ನೇ ಮಾಡಿರದಿದ್ದ ಶಂಕ್ರಿ– ಸುಮಿ ಮುಖಮುಖ ನೋಡಿಕೊಂಡು ಪೆಚ್ಚಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>