‘ಇಷ್ಟು ದಿನ ಬದುಕು ಕೊಟ್ಟ ಬೆಂದಕಾಳೂರು ಈಗ ನೊಂದಕಾಳೂರು ಆಗಿಬಿಟ್ಟಿತಲ್ಲಾ ಅಂತ ನಮಗೂ ನೋವಿದೆ’ ಸುಮಿಗೆ ಸಂಕಟ.
‘ಬೆಂಗಳೂರಿನಲ್ಲಿ ಈಗ ಯಾರ ಬೇಳೆಯೂ ಬೇಯುತ್ತಿಲ್ಲ. ಸಿನಿಮಾ ನಟರ ಕಟೌಟ್ ರಾರಾಜಿಸುತ್ತಿಲ್ಲ. ಹೋರಾಟಗಾರರು ಮನೆಯಿಂದ ಹೊರಬರುತ್ತಿಲ್ಲ. ರಾಜಕಾರಣಿಗಳು ಶಕ್ತಿಪ್ರದರ್ಶನದ ಸಮಾವೇಶ ಏರ್ಪಡಿಸಿ ಟ್ರಾಫಿಕ್ ಜಾಮ್ ಮಾಡ್ತಿಲ್ಲ. ಹಿಂದಿನಂತೆ ದುಡ್ಡು-ದೌಲತ್ತು ಇಲ್ಲ. ಈ ಸಮಸ್ಯೆಗಳು ನಿವಾರಣೆಯಾಗುವವರೆಗೂ ಇತ್ತ ತಲೆ ಹಾಕುವುದಿಲ್ಲ’ ಅಂದ ಶಂಕ್ರಿ.