<p>ಕಾದಂಬರಿಯೊಂದರಲ್ಲಿ ಬರುವ ಗೀತೆಯೊಂದು 150 ವರ್ಷಗಳ ನಂತರವೂ ಪ್ರಸ್ತುತವಾಗಿದ್ದು, ಅದು ವಾದ–ವಿವಾದಗಳಿಗೆ ಕಾರಣವಾಗುತ್ತದೆ ಎನ್ನುವುದೇ ಸಾಹಿತ್ಯಲೋಕದಲ್ಲಿ ಒಂದು ಅದ್ಭುತ. ಇಷ್ಟೇ ಅಲ್ಲದೆ, ಆ ಗೀತೆಯ 150ನೇ ವಾರ್ಷಿಕೋತ್ಸವದ ಉದ್ಘಾಟನೆ ಪ್ರಧಾನಮಂತ್ರಿಗಳಿಂದ ಆಗುತ್ತದೆ; ಮತ್ತು ಪ್ರಧಾನಮಂತ್ರಿಗಳು ಈ ಗೀತೆ ವರ್ಷವಿಡೀ ಎಲ್ಲಾ ಶಾಲೆಗಳಲ್ಲಿಯೂ ಹಾಡಲ್ಪಡಬೇಕು ಎಂದು ಹೇಳುತ್ತಾರೆ. ಹೀಗೆ ವಿಶೇಷ ಗೌರವವನ್ನು ಪಡೆಯುವ ಆ ಗೀತೆ ಭಾರತದಲ್ಲಿ ಚಿರಪರಿಚಿತವಾದ ‘ವಂದೇ ಮಾತರಂ’. </p>.<p>ಸ್ವಾತಂತ್ರ್ಯ ಪೂರ್ವದಲ್ಲಿ ಬಂಕಿಮಚಂದ್ರ ಚಟರ್ಜಿಯವರು ಬಂಗಾಳದಲ್ಲಿ ಬಹು ವಿಜೃಂಭಣೆಯಿಂದ ನಡೆಯುವ ದುರ್ಗಾಪೂಜೆಯಿಂದ ಪ್ರಭಾವಿತರಾಗಿ, ನವೆಂಬರ್ 7, 1875ರಲ್ಲಿ ಈ ಹಾಡನ್ನು ಬರೆದರು; ನಂತರ ಅದು ಅವರ ‘ಆನಂದಮಠ’ ಎಂಬ ಕಾದಂಬರಿಯಲ್ಲಿ ಬಳಕೆಯಾಯಿತು. ಕಾದಂಬರಿಯ ಕೊನೆಯಲ್ಲಿ ಈ ಗೀತೆ ಸನ್ಯಾಸಿಗಳಿಂದ ಹಾಡಲ್ಪಡುತ್ತದೆ.</p>.<p>ಆರು ಚರಣಗಳಿರುವ ‘ವಂದೇ ಮಾತರಂ’ ಗೀತೆಯು ದೇಶವನ್ನು ತಾಯಿಯಂತೆ ಕಾಣುತ್ತದೆ. ಮೊದಲ ಎರಡು ಚರಣಗಳು ಆ ತಾಯಿಯ ಪ್ರಾಕೃತಿಕ ಸೌಂದರ್ಯವನ್ನು ಮನೋಜ್ಞವಾಗಿ ವರ್ಣಿಸಿದರೆ, ಮೂರನೆಯ ಚರಣವು ಅವಳ ಮಕ್ಕಳ ಅಗಾಧ ಸಂಖ್ಯೆಯನ್ನು ಹಾಗೂ ಶೌರ್ಯವನ್ನು ಭಾವಪೂರ್ಣವಾಗಿ ವರ್ಣಿಸುತ್ತದೆ (‘ನೀನು ಅಬಲೆಯಲ್ಲ; ನಿನ್ನನ್ನು ರಕ್ಷಿಸಲು 70 ದಶಲಕ್ಷ ಕೈಗಳು ಕತ್ತಿ ಹಿಡಿದು ಮೇಲೇಳುತ್ತವೆ’). ನಾಲ್ಕನೆಯ ಚರಣವು ಜ್ಞಾನ, ಧರ್ಮ ಮತ್ತು ಕಲೆಗಳು ತಾಯಿನಾಡಿನಲ್ಲಿಯೇ ನೆಲೆಗೊಂಡಿವೆ ಮತ್ತು ಎಲ್ಲ ದೇವಾಲಯಗಳಲ್ಲಿ ಪೂಜಿಸಲ್ಪಡುವುದು ಆ ತಾಯಿಯ ಮೂರ್ತಿಯೇ ಎಂದು ಮಂಡಿಸುತ್ತದೆ. ಕೊನೆಯಲ್ಲಿ ತಾಯಿನಾಡೇ ದುರ್ಗೆ, ಲಕ್ಷ್ಮಿ ಮತ್ತು ಸರಸ್ವತಿ; ಅಥವಾ ಧರ್ಮ, ಹೃದಯ, ಮತ್ತು ಪ್ರಾಣ ಎಂದು ಕೊಂಡಾಡುತ್ತದೆ. ಒಟ್ಟಾರೆಯಾಗಿ ಹೇಳಬೇಕಾದರೆ, ಬಂಕಿಮರ ದೃಷ್ಟಿಯಲ್ಲಿ, ಬಹುಮುಖೀ ಪರಾಕ್ರಮದ ಹಾಗೂ ದೈವಿಕಗುಣಗಳಿರುವ ಶಕ್ತಿಯೇ ತಾಯಿನಾಡು. </p>.<p>ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಇಡೀ ದೇಶದ ಸರಿಸುಮಾರು ಎಲ್ಲಾ ಕಾರ್ಯಕ್ರಮಗಳ ಪ್ರಾರಂಭದಲ್ಲಿ ಈ ಗೀತೆ ಹಾಡಲ್ಪಡುತ್ತಿತ್ತು. ಇದರಲ್ಲಿ ಬರುವ ‘ರಿಪು’ (ಶತ್ರು) ಅಂದು ಈ ದೇಶವನ್ನು ಆಳುತ್ತಿದ್ದ ಬ್ರಿಟಿಷರಿಗೆ ಅನ್ವಯವಾಗುತ್ತಿತ್ತು. ಆದರೆ, ಆರು ಭಾಗಗಳಿರುವ ಈ ಗೀತೆಯಲ್ಲಿ ‘ಮೂರನೆಯ ಭಾಗದಿಂದ ಕೊನೆಯವರೆಗೂ ಒಂದು ಧರ್ಮದ (ಹಿಂದೂ ಧರ್ಮದ) ಪ್ರತಿಮೆ–ಪ್ರತೀಕಗಳು ಬರುತ್ತವೆ (ದುರ್ಗೆಯ ಪ್ರತಿಮೆ; ಮಾತೃಭೂಮಿಯನ್ನು ‘ನೀನೇ ಲಕ್ಷ್ಮಿ; ನೀನೇ ಸರಸ್ವತಿ’ ಎಂಬ ವರ್ಣನೆ; ಇತ್ಯಾದಿ); ಒಟ್ಟಾರೆಯಾಗಿ, ಈ ಗೀತೆ ವಿಗ್ರಹಾರಾಧನೆಯನ್ನು ಪ್ರೋತ್ಸಾಹಿಸುತ್ತದೆ ಹಾಗೂ ಇದು ‘ಪ್ರಚ್ಛನ್ನವಾಗಿ’ ಹಿಂದೂ ರಾಷ್ಟ್ರೀಯತೆಯನ್ನು ದೇಶಪ್ರೇಮದ ಹೆಸರಿನಲ್ಲಿ ಹರಡುತ್ತಿದೆ– ಎಂಬ ಕಾರಣವನ್ನು ಕೊಟ್ಟು ಮುಸ್ಲಿಮರು ಈ ಗೀತೆಯನ್ನು ಹಾಡಕೂಡದು ಎಂದು ಮುಸ್ಲಿಂ ಲೀಗ್ 1937ರಲ್ಲಿ, ತನ್ನ ಲಕ್ನೋ ಅಧಿವೇಶನದಲ್ಲಿ ಠರಾವು ಹೊರಡಿಸಿತು. ಹಿಂದೂಗಳಲ್ಲದ ಸ್ವಾತಂತ್ರ್ಯ ಹೋರಾಟಗಾರರಿಗೆ ಈ ಗೀತೆಯನ್ನು ಸಾರ್ವಜನಿಕವಾಗಿ ಪ್ರಸ್ತುತಪಡಿಸುವುದು ಮುಜುಗರ ಉಂಟು ಮಾಡುತ್ತದೆ’ ಎಂದು ಅನೇಕ ಹಿಂದೂ ನಾಯಕರಿಗೂ ಅನಿಸುತ್ತಿತ್ತು. ಪರಿಣಾಮತಃ, 1937ರಲ್ಲಿ ನಡೆದ ಕಾಂಗ್ರೆಸ್ ವರ್ಕಿಂಗ್ ಕಮಿಟಿಯಲ್ಲಿ, ಟ್ಯಾಗೋರರ ಸಲಹೆಯಂತೆ, ಸಾರ್ವಜನಿಕ ಸಭೆ–ಸಮಾರಂಭಗಳಲ್ಲಿ ಈ ಕವನದ ಮೊದಲ ಎರಡು ಭಾಗಗಳನ್ನು ಮಾತ್ರ ಹಾಡಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು. ಅಂದಿನಿಂದ ‘ವಂದೇ ಮಾತರಂ’ ಗೀತೆಯು ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿತು ಹಾಗೂ ಅದು ‘ಹಿಂದೂಗಳ/ ಹಿಂದೂ ಧರ್ಮಕ್ಕೆ ಸೇರಿದ ಗೀತೆ’ ಎಂಬ ಭಾವನೆ ಎಲ್ಲೆಡೆ ಹರಡಿತು.</p>.<p>ರಾಜಕೀಯ ಸ್ಪರ್ಶದಿಂದಾಗಿ, ಈ ಗೀತೆ ಸ್ವಾತಂತ್ರ್ಯ ಹೋರಾಟವನ್ನೇ ಇಬ್ಭಾಗ ಮಾಡಿತು: ಸ್ವಾತಂತ್ರ್ಯ ನಿಕಟಪೂರ್ವದಲ್ಲಿ ಹಾಗೂ ಸ್ವಾತಂತ್ರ್ಯಾನಂತರ ನಡೆಯುತ್ತಿದ್ದ ಹಿಂದೂ-ಮುಸ್ಲಿಂ ಕೋಮುಗಲಭೆಗಳಲ್ಲಿ, ಒಂದು ಕೋಮಿನವರು ಮತ್ತೊಂದು ಕೋಮಿನವರನ್ನು ಪುರಸ್ಕರಿಸಲು ಅಥವಾ ತಿರಸ್ಕರಿಸಲು ಈ ಗೀತೆಯನ್ನು ಹಾಡುತ್ತಿದ್ದರು ಅಥವಾ ಹಾಡುವುದನ್ನು ನಿಷೇಧಿಸುತ್ತಿದ್ದರು. ಈ ನೆನಪುಗಳ ಕಾರಣದಿಂದ, ಸ್ವಾತಂತ್ರ್ಯಾನಂತರ ಈ ಗೀತೆಯನ್ನು ‘ನ್ಯಾಷನಲ್ ಸಾಂಗ್’ ಎಂದು ಗೌರವಿಸಿದರೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಡುವುದು ಕಡ್ಡಾಯವಾಗಲಿಲ್ಲ; ಆ ಗೌರವ ‘ಜನಗಣಮನ’ ಗೀತೆಗೆ ಸಂದಿತು; ಹಾಗೂ ‘ವಂದೇ ಮಾತರಂ’ ಗೀತೆಯನ್ನು ಪ್ರಸ್ತುತಪಡಿಸುವುದು ಅಥವಾ ಬಿಡುವುದು ಕಾರ್ಯಕ್ರಮವನ್ನು ಆಯೋಜಿಸಿದ್ದವರ ಆಯ್ಕೆಗೆ ಬಿಡಲಾಯಿತು. ಇಂದೂ ಕೂಡ ಆಳುವವರಿಗೆ ಈ ಗೀತೆಯನ್ನು ಕುರಿತು ಒಂದು ಬಗೆಯ ಅಳುಕು ಇದ್ದೇ ಇದೆ ಎಂದು ಕಾಣುತ್ತದೆ; ಪ್ರಾಯಃ, ಈ ಕಾರಣದಿಂದಲೇ ಗೀತೆಯ 150ನೇ ವರ್ಷದ ಸಂಭ್ರಮವನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಯಾವ ಸಾರ್ವಜನಿಕ ಕಾರ್ಯಕ್ರಮದ ಮೂಲಕವೂ ತೋರಿಸಲಿಲ್ಲ. </p>.<p>ಸುಶ್ರಾವ್ಯವಾಗಿ ಹಾಡಲು ಅನುವಾಗುವ, ಬೆಂಗಾಲಿ–ಸಂಸ್ಕೃತ ಭಾಷೆಯಲ್ಲಿರುವ, ಪ್ರಾರಂಭದಿಂದ ಕೊನೆಯ<br>ವರೆಗೂ ಎದ್ದು ಕಾಣುವ ಮೆಚ್ಚುಗೆ–ಗೌರವ–ಪ್ರೀತಿ ಭಾವನೆಗಳ ಸಂಗಮವಾಗಿರುವ, ಗಾಂಧೀಜಿಯವರಿಗೆ ತುಂಬಾ ಆಪ್ತವಾಗಿದ್ದ ಹಾಗೂ ಒಂದು ಸಫಲ ಕಾಣ್ಕೆಯಾಗಿರುವ ‘ವಂದೇ ಮಾತರಂ’ ಗೀತೆಗೆ ರಾಜಕೀಯ ಕಾರಣಗಳಿಗಾಗಿ ಮತೀಯ ಬಣ್ಣ ಬಂದದ್ದು ದುರದೃಷ್ಟಕರ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾದಂಬರಿಯೊಂದರಲ್ಲಿ ಬರುವ ಗೀತೆಯೊಂದು 150 ವರ್ಷಗಳ ನಂತರವೂ ಪ್ರಸ್ತುತವಾಗಿದ್ದು, ಅದು ವಾದ–ವಿವಾದಗಳಿಗೆ ಕಾರಣವಾಗುತ್ತದೆ ಎನ್ನುವುದೇ ಸಾಹಿತ್ಯಲೋಕದಲ್ಲಿ ಒಂದು ಅದ್ಭುತ. ಇಷ್ಟೇ ಅಲ್ಲದೆ, ಆ ಗೀತೆಯ 150ನೇ ವಾರ್ಷಿಕೋತ್ಸವದ ಉದ್ಘಾಟನೆ ಪ್ರಧಾನಮಂತ್ರಿಗಳಿಂದ ಆಗುತ್ತದೆ; ಮತ್ತು ಪ್ರಧಾನಮಂತ್ರಿಗಳು ಈ ಗೀತೆ ವರ್ಷವಿಡೀ ಎಲ್ಲಾ ಶಾಲೆಗಳಲ್ಲಿಯೂ ಹಾಡಲ್ಪಡಬೇಕು ಎಂದು ಹೇಳುತ್ತಾರೆ. ಹೀಗೆ ವಿಶೇಷ ಗೌರವವನ್ನು ಪಡೆಯುವ ಆ ಗೀತೆ ಭಾರತದಲ್ಲಿ ಚಿರಪರಿಚಿತವಾದ ‘ವಂದೇ ಮಾತರಂ’. </p>.<p>ಸ್ವಾತಂತ್ರ್ಯ ಪೂರ್ವದಲ್ಲಿ ಬಂಕಿಮಚಂದ್ರ ಚಟರ್ಜಿಯವರು ಬಂಗಾಳದಲ್ಲಿ ಬಹು ವಿಜೃಂಭಣೆಯಿಂದ ನಡೆಯುವ ದುರ್ಗಾಪೂಜೆಯಿಂದ ಪ್ರಭಾವಿತರಾಗಿ, ನವೆಂಬರ್ 7, 1875ರಲ್ಲಿ ಈ ಹಾಡನ್ನು ಬರೆದರು; ನಂತರ ಅದು ಅವರ ‘ಆನಂದಮಠ’ ಎಂಬ ಕಾದಂಬರಿಯಲ್ಲಿ ಬಳಕೆಯಾಯಿತು. ಕಾದಂಬರಿಯ ಕೊನೆಯಲ್ಲಿ ಈ ಗೀತೆ ಸನ್ಯಾಸಿಗಳಿಂದ ಹಾಡಲ್ಪಡುತ್ತದೆ.</p>.<p>ಆರು ಚರಣಗಳಿರುವ ‘ವಂದೇ ಮಾತರಂ’ ಗೀತೆಯು ದೇಶವನ್ನು ತಾಯಿಯಂತೆ ಕಾಣುತ್ತದೆ. ಮೊದಲ ಎರಡು ಚರಣಗಳು ಆ ತಾಯಿಯ ಪ್ರಾಕೃತಿಕ ಸೌಂದರ್ಯವನ್ನು ಮನೋಜ್ಞವಾಗಿ ವರ್ಣಿಸಿದರೆ, ಮೂರನೆಯ ಚರಣವು ಅವಳ ಮಕ್ಕಳ ಅಗಾಧ ಸಂಖ್ಯೆಯನ್ನು ಹಾಗೂ ಶೌರ್ಯವನ್ನು ಭಾವಪೂರ್ಣವಾಗಿ ವರ್ಣಿಸುತ್ತದೆ (‘ನೀನು ಅಬಲೆಯಲ್ಲ; ನಿನ್ನನ್ನು ರಕ್ಷಿಸಲು 70 ದಶಲಕ್ಷ ಕೈಗಳು ಕತ್ತಿ ಹಿಡಿದು ಮೇಲೇಳುತ್ತವೆ’). ನಾಲ್ಕನೆಯ ಚರಣವು ಜ್ಞಾನ, ಧರ್ಮ ಮತ್ತು ಕಲೆಗಳು ತಾಯಿನಾಡಿನಲ್ಲಿಯೇ ನೆಲೆಗೊಂಡಿವೆ ಮತ್ತು ಎಲ್ಲ ದೇವಾಲಯಗಳಲ್ಲಿ ಪೂಜಿಸಲ್ಪಡುವುದು ಆ ತಾಯಿಯ ಮೂರ್ತಿಯೇ ಎಂದು ಮಂಡಿಸುತ್ತದೆ. ಕೊನೆಯಲ್ಲಿ ತಾಯಿನಾಡೇ ದುರ್ಗೆ, ಲಕ್ಷ್ಮಿ ಮತ್ತು ಸರಸ್ವತಿ; ಅಥವಾ ಧರ್ಮ, ಹೃದಯ, ಮತ್ತು ಪ್ರಾಣ ಎಂದು ಕೊಂಡಾಡುತ್ತದೆ. ಒಟ್ಟಾರೆಯಾಗಿ ಹೇಳಬೇಕಾದರೆ, ಬಂಕಿಮರ ದೃಷ್ಟಿಯಲ್ಲಿ, ಬಹುಮುಖೀ ಪರಾಕ್ರಮದ ಹಾಗೂ ದೈವಿಕಗುಣಗಳಿರುವ ಶಕ್ತಿಯೇ ತಾಯಿನಾಡು. </p>.<p>ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಇಡೀ ದೇಶದ ಸರಿಸುಮಾರು ಎಲ್ಲಾ ಕಾರ್ಯಕ್ರಮಗಳ ಪ್ರಾರಂಭದಲ್ಲಿ ಈ ಗೀತೆ ಹಾಡಲ್ಪಡುತ್ತಿತ್ತು. ಇದರಲ್ಲಿ ಬರುವ ‘ರಿಪು’ (ಶತ್ರು) ಅಂದು ಈ ದೇಶವನ್ನು ಆಳುತ್ತಿದ್ದ ಬ್ರಿಟಿಷರಿಗೆ ಅನ್ವಯವಾಗುತ್ತಿತ್ತು. ಆದರೆ, ಆರು ಭಾಗಗಳಿರುವ ಈ ಗೀತೆಯಲ್ಲಿ ‘ಮೂರನೆಯ ಭಾಗದಿಂದ ಕೊನೆಯವರೆಗೂ ಒಂದು ಧರ್ಮದ (ಹಿಂದೂ ಧರ್ಮದ) ಪ್ರತಿಮೆ–ಪ್ರತೀಕಗಳು ಬರುತ್ತವೆ (ದುರ್ಗೆಯ ಪ್ರತಿಮೆ; ಮಾತೃಭೂಮಿಯನ್ನು ‘ನೀನೇ ಲಕ್ಷ್ಮಿ; ನೀನೇ ಸರಸ್ವತಿ’ ಎಂಬ ವರ್ಣನೆ; ಇತ್ಯಾದಿ); ಒಟ್ಟಾರೆಯಾಗಿ, ಈ ಗೀತೆ ವಿಗ್ರಹಾರಾಧನೆಯನ್ನು ಪ್ರೋತ್ಸಾಹಿಸುತ್ತದೆ ಹಾಗೂ ಇದು ‘ಪ್ರಚ್ಛನ್ನವಾಗಿ’ ಹಿಂದೂ ರಾಷ್ಟ್ರೀಯತೆಯನ್ನು ದೇಶಪ್ರೇಮದ ಹೆಸರಿನಲ್ಲಿ ಹರಡುತ್ತಿದೆ– ಎಂಬ ಕಾರಣವನ್ನು ಕೊಟ್ಟು ಮುಸ್ಲಿಮರು ಈ ಗೀತೆಯನ್ನು ಹಾಡಕೂಡದು ಎಂದು ಮುಸ್ಲಿಂ ಲೀಗ್ 1937ರಲ್ಲಿ, ತನ್ನ ಲಕ್ನೋ ಅಧಿವೇಶನದಲ್ಲಿ ಠರಾವು ಹೊರಡಿಸಿತು. ಹಿಂದೂಗಳಲ್ಲದ ಸ್ವಾತಂತ್ರ್ಯ ಹೋರಾಟಗಾರರಿಗೆ ಈ ಗೀತೆಯನ್ನು ಸಾರ್ವಜನಿಕವಾಗಿ ಪ್ರಸ್ತುತಪಡಿಸುವುದು ಮುಜುಗರ ಉಂಟು ಮಾಡುತ್ತದೆ’ ಎಂದು ಅನೇಕ ಹಿಂದೂ ನಾಯಕರಿಗೂ ಅನಿಸುತ್ತಿತ್ತು. ಪರಿಣಾಮತಃ, 1937ರಲ್ಲಿ ನಡೆದ ಕಾಂಗ್ರೆಸ್ ವರ್ಕಿಂಗ್ ಕಮಿಟಿಯಲ್ಲಿ, ಟ್ಯಾಗೋರರ ಸಲಹೆಯಂತೆ, ಸಾರ್ವಜನಿಕ ಸಭೆ–ಸಮಾರಂಭಗಳಲ್ಲಿ ಈ ಕವನದ ಮೊದಲ ಎರಡು ಭಾಗಗಳನ್ನು ಮಾತ್ರ ಹಾಡಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು. ಅಂದಿನಿಂದ ‘ವಂದೇ ಮಾತರಂ’ ಗೀತೆಯು ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿತು ಹಾಗೂ ಅದು ‘ಹಿಂದೂಗಳ/ ಹಿಂದೂ ಧರ್ಮಕ್ಕೆ ಸೇರಿದ ಗೀತೆ’ ಎಂಬ ಭಾವನೆ ಎಲ್ಲೆಡೆ ಹರಡಿತು.</p>.<p>ರಾಜಕೀಯ ಸ್ಪರ್ಶದಿಂದಾಗಿ, ಈ ಗೀತೆ ಸ್ವಾತಂತ್ರ್ಯ ಹೋರಾಟವನ್ನೇ ಇಬ್ಭಾಗ ಮಾಡಿತು: ಸ್ವಾತಂತ್ರ್ಯ ನಿಕಟಪೂರ್ವದಲ್ಲಿ ಹಾಗೂ ಸ್ವಾತಂತ್ರ್ಯಾನಂತರ ನಡೆಯುತ್ತಿದ್ದ ಹಿಂದೂ-ಮುಸ್ಲಿಂ ಕೋಮುಗಲಭೆಗಳಲ್ಲಿ, ಒಂದು ಕೋಮಿನವರು ಮತ್ತೊಂದು ಕೋಮಿನವರನ್ನು ಪುರಸ್ಕರಿಸಲು ಅಥವಾ ತಿರಸ್ಕರಿಸಲು ಈ ಗೀತೆಯನ್ನು ಹಾಡುತ್ತಿದ್ದರು ಅಥವಾ ಹಾಡುವುದನ್ನು ನಿಷೇಧಿಸುತ್ತಿದ್ದರು. ಈ ನೆನಪುಗಳ ಕಾರಣದಿಂದ, ಸ್ವಾತಂತ್ರ್ಯಾನಂತರ ಈ ಗೀತೆಯನ್ನು ‘ನ್ಯಾಷನಲ್ ಸಾಂಗ್’ ಎಂದು ಗೌರವಿಸಿದರೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಡುವುದು ಕಡ್ಡಾಯವಾಗಲಿಲ್ಲ; ಆ ಗೌರವ ‘ಜನಗಣಮನ’ ಗೀತೆಗೆ ಸಂದಿತು; ಹಾಗೂ ‘ವಂದೇ ಮಾತರಂ’ ಗೀತೆಯನ್ನು ಪ್ರಸ್ತುತಪಡಿಸುವುದು ಅಥವಾ ಬಿಡುವುದು ಕಾರ್ಯಕ್ರಮವನ್ನು ಆಯೋಜಿಸಿದ್ದವರ ಆಯ್ಕೆಗೆ ಬಿಡಲಾಯಿತು. ಇಂದೂ ಕೂಡ ಆಳುವವರಿಗೆ ಈ ಗೀತೆಯನ್ನು ಕುರಿತು ಒಂದು ಬಗೆಯ ಅಳುಕು ಇದ್ದೇ ಇದೆ ಎಂದು ಕಾಣುತ್ತದೆ; ಪ್ರಾಯಃ, ಈ ಕಾರಣದಿಂದಲೇ ಗೀತೆಯ 150ನೇ ವರ್ಷದ ಸಂಭ್ರಮವನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಯಾವ ಸಾರ್ವಜನಿಕ ಕಾರ್ಯಕ್ರಮದ ಮೂಲಕವೂ ತೋರಿಸಲಿಲ್ಲ. </p>.<p>ಸುಶ್ರಾವ್ಯವಾಗಿ ಹಾಡಲು ಅನುವಾಗುವ, ಬೆಂಗಾಲಿ–ಸಂಸ್ಕೃತ ಭಾಷೆಯಲ್ಲಿರುವ, ಪ್ರಾರಂಭದಿಂದ ಕೊನೆಯ<br>ವರೆಗೂ ಎದ್ದು ಕಾಣುವ ಮೆಚ್ಚುಗೆ–ಗೌರವ–ಪ್ರೀತಿ ಭಾವನೆಗಳ ಸಂಗಮವಾಗಿರುವ, ಗಾಂಧೀಜಿಯವರಿಗೆ ತುಂಬಾ ಆಪ್ತವಾಗಿದ್ದ ಹಾಗೂ ಒಂದು ಸಫಲ ಕಾಣ್ಕೆಯಾಗಿರುವ ‘ವಂದೇ ಮಾತರಂ’ ಗೀತೆಗೆ ರಾಜಕೀಯ ಕಾರಣಗಳಿಗಾಗಿ ಮತೀಯ ಬಣ್ಣ ಬಂದದ್ದು ದುರದೃಷ್ಟಕರ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>