<p>‘ಪಕ್ಷದ ನಾಯಕರು ‘ನಾನೂ ಸಿಎಂ ಆಕಾಂಕ್ಷಿ’ ಅಭಿಯಾನ ಆರಂಭಿಸಿ ಸಿಎಂ ಕುರ್ಚಿ ಮೇಲೆ ಟವೆಲ್ ಹಾಕ್ತಿದ್ದಾರೆ, ನಾನೂ ಒಂದು ಟವೆಲ್ ಹಾಕಿದ್ದೇನೆ...’ ಬೆಳಿಗ್ಗೆ ಉಪಾಹಾರ ಸೇವಿಸುತ್ತಾ ಪತ್ನಿಗೆ ಮಂತ್ರಿ ಹೇಳಿದರು.</p>.<p>‘ಟವೆಲ್ ಹಾಕಿದವರೆಲ್ಲಾ ಸಿಎಂ ಆಗಲ್ಲ. ಹೈಕಮಾಂಡ್ ಕೃಪೆ, ಶಾಸಕರ ಬೆಂಬಲ ಇರಬೇಕು. ನಿಮ್ಮ ಖಾತೆಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ, ಇಲಾಖೆಯ ಸೌಲಭ್ಯ ಹಂಚುತ್ತಿಲ್ಲ ಅಂತ ಶಾಸಕರು ನಿಮ್ಮ ವಿರುದ್ಧ ತಿರುಗಿಬಿದ್ದಿದ್ದಾರೆ, ಮೊದಲು ಮಂತ್ರಿ ಸ್ಥಾನ ಉಳಿಸಿಕೊಳ್ಳಿ’ ಅಂದರು ಪತ್ನಿ.</p>.<p>‘ಕೊಡಬೇಕಾದ್ದನ್ನು ಕೊಟ್ಟು ಶಾಸಕರನ್ನು ಬುಟ್ಟಿಗೆ ಹಾಕಿಕೊಂಡು, ಅವರ ಸಹಿ ಸಂಗ್ರಹಿಸಿ, ಹೈಕಮಾಂಡ್ ಎದುರು ಶಾಸಕರ ಬೆಂಬಲ ತೋರಿಸ್ತೀನಿ. ಅದೃಷ್ಟ ಮತ್ತು ಹೈಕಮಾಂಡ್ ಕೃಪೆ ಇದ್ದರೆ ಶಾಸಕರ ಬೆಂಬಲವಿಲ್ಲದಿದ್ದರೂ ಸಿಎಂ ಆಗಿಬಿಡಬಹುದು!’</p>.<p>‘ಅದೃಷ್ಟದ ಜೊತೆ ಅರ್ಹತೆಯೂ ಇರಬೇಕು’.</p>.<p>‘ಪಕ್ಷದಲ್ಲಿ ನನಗೆ ಸೀನಿಯಾರಿಟಿ, ಸಿನ್ಸಿಯಾರಿಟಿ ಎರಡೂ ಇದೆ. ಪಕ್ಷಕ್ಕೆ, ಸಂಸಾರಕ್ಕೆ ಸಾಕಷ್ಟು ದುಡಿದಿದ್ದೇನೆ. ಸಿಎಂ ಆಗಲು ಇಷ್ಟು ಅರ್ಹತೆ ಸಾಲದೆ?’ ಎಂದರು ಮಂತ್ರಿ.</p>.<p>‘ನಿಮಗೆ ಮೈತುಂಬಾ ಕಾಯಿಲೆ. ಕಾರು ಹತ್ತಲು, ಇಳಿಯಲು, ವೇದಿಕೆ ಹತ್ತಿಹೋಗಿ ಭಾಷಣ ಮಾಡಲು ಇನ್ನೊಬ್ಬರ ಸಹಾಯಬೇಕು...’</p>.<p>‘ನಮ್ಮ ಫ್ಯಾಮಿಲಿ ಡಾಕ್ಟರರಿಂದ ಹೆಲ್ತ್ ಸರ್ಟಿಫಿಕೆಟ್, ಫಿಟ್ನೆಸ್ ಸರ್ಟಿಫಿಕೆಟ್ ಕೊಟ್ಟರಾಯಿತು’.</p>.<p>‘ಹಾಗಲ್ಲ ರೀ, ಸಿಎಂ ಕುರ್ಚಿ ಮೇಲೆ ಕೆಮ್ಮಿಕೊಂಡು, ಜೂಗರಿಸಿಕೊಂಡು ಬೆಡ್ಶೀಟ್ ಹೊದ್ದು ಕುಳಿತು ರಾಜ್ಯಭಾರ ಮಾಡಲಾಗುತ್ತಾ? ಸಿಎಂ ಆಸೆ ಬಿಟ್ಟುಬಿಡಿ...’</p>.<p>‘ಹೋಗಲಿ, ನಿನ್ನ ಆಸೆ ಏನು?’</p>.<p>‘ಪಿತ್ರಾರ್ಜಿತ ಆಸ್ತಿ ಸಾಕಷ್ಟಿದೆ. ಪುತ್ರಾರ್ಜಿತ ಆಸ್ತಿ ಬಗ್ಗೆ ನೀವು ಗಮನ ಹರಿಸಿಲ್ಲ...’</p>.<p>‘ಅಂದರೆ?’</p>.<p>‘ಮಗನಿಗೊಂದು ಕ್ಷೇತ್ರ ಹುಡುಕಿಕೊಡಿ, ಇಲ್ಲವೇ ನಿಮ್ಮ ಕ್ಷೇತ್ರವನ್ನೇ ಬಿಟ್ಟುಕೊಡಿ, ಮುಂದಿನ ಚುನಾವಣೆ ಗೆದ್ದು ಮಗ ಅಸೆಂಬ್ಲಿಗೆ ಹೋಗಲೇಬೇಕು...’ ಖಡಕ್ಕಾಗಿ ಹೇಳಿದ ಪತ್ನಿಯ ಮಾತಿಗೆ, ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡಂತೆ ಚಡಪಡಿಸತೊಡಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಪಕ್ಷದ ನಾಯಕರು ‘ನಾನೂ ಸಿಎಂ ಆಕಾಂಕ್ಷಿ’ ಅಭಿಯಾನ ಆರಂಭಿಸಿ ಸಿಎಂ ಕುರ್ಚಿ ಮೇಲೆ ಟವೆಲ್ ಹಾಕ್ತಿದ್ದಾರೆ, ನಾನೂ ಒಂದು ಟವೆಲ್ ಹಾಕಿದ್ದೇನೆ...’ ಬೆಳಿಗ್ಗೆ ಉಪಾಹಾರ ಸೇವಿಸುತ್ತಾ ಪತ್ನಿಗೆ ಮಂತ್ರಿ ಹೇಳಿದರು.</p>.<p>‘ಟವೆಲ್ ಹಾಕಿದವರೆಲ್ಲಾ ಸಿಎಂ ಆಗಲ್ಲ. ಹೈಕಮಾಂಡ್ ಕೃಪೆ, ಶಾಸಕರ ಬೆಂಬಲ ಇರಬೇಕು. ನಿಮ್ಮ ಖಾತೆಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ, ಇಲಾಖೆಯ ಸೌಲಭ್ಯ ಹಂಚುತ್ತಿಲ್ಲ ಅಂತ ಶಾಸಕರು ನಿಮ್ಮ ವಿರುದ್ಧ ತಿರುಗಿಬಿದ್ದಿದ್ದಾರೆ, ಮೊದಲು ಮಂತ್ರಿ ಸ್ಥಾನ ಉಳಿಸಿಕೊಳ್ಳಿ’ ಅಂದರು ಪತ್ನಿ.</p>.<p>‘ಕೊಡಬೇಕಾದ್ದನ್ನು ಕೊಟ್ಟು ಶಾಸಕರನ್ನು ಬುಟ್ಟಿಗೆ ಹಾಕಿಕೊಂಡು, ಅವರ ಸಹಿ ಸಂಗ್ರಹಿಸಿ, ಹೈಕಮಾಂಡ್ ಎದುರು ಶಾಸಕರ ಬೆಂಬಲ ತೋರಿಸ್ತೀನಿ. ಅದೃಷ್ಟ ಮತ್ತು ಹೈಕಮಾಂಡ್ ಕೃಪೆ ಇದ್ದರೆ ಶಾಸಕರ ಬೆಂಬಲವಿಲ್ಲದಿದ್ದರೂ ಸಿಎಂ ಆಗಿಬಿಡಬಹುದು!’</p>.<p>‘ಅದೃಷ್ಟದ ಜೊತೆ ಅರ್ಹತೆಯೂ ಇರಬೇಕು’.</p>.<p>‘ಪಕ್ಷದಲ್ಲಿ ನನಗೆ ಸೀನಿಯಾರಿಟಿ, ಸಿನ್ಸಿಯಾರಿಟಿ ಎರಡೂ ಇದೆ. ಪಕ್ಷಕ್ಕೆ, ಸಂಸಾರಕ್ಕೆ ಸಾಕಷ್ಟು ದುಡಿದಿದ್ದೇನೆ. ಸಿಎಂ ಆಗಲು ಇಷ್ಟು ಅರ್ಹತೆ ಸಾಲದೆ?’ ಎಂದರು ಮಂತ್ರಿ.</p>.<p>‘ನಿಮಗೆ ಮೈತುಂಬಾ ಕಾಯಿಲೆ. ಕಾರು ಹತ್ತಲು, ಇಳಿಯಲು, ವೇದಿಕೆ ಹತ್ತಿಹೋಗಿ ಭಾಷಣ ಮಾಡಲು ಇನ್ನೊಬ್ಬರ ಸಹಾಯಬೇಕು...’</p>.<p>‘ನಮ್ಮ ಫ್ಯಾಮಿಲಿ ಡಾಕ್ಟರರಿಂದ ಹೆಲ್ತ್ ಸರ್ಟಿಫಿಕೆಟ್, ಫಿಟ್ನೆಸ್ ಸರ್ಟಿಫಿಕೆಟ್ ಕೊಟ್ಟರಾಯಿತು’.</p>.<p>‘ಹಾಗಲ್ಲ ರೀ, ಸಿಎಂ ಕುರ್ಚಿ ಮೇಲೆ ಕೆಮ್ಮಿಕೊಂಡು, ಜೂಗರಿಸಿಕೊಂಡು ಬೆಡ್ಶೀಟ್ ಹೊದ್ದು ಕುಳಿತು ರಾಜ್ಯಭಾರ ಮಾಡಲಾಗುತ್ತಾ? ಸಿಎಂ ಆಸೆ ಬಿಟ್ಟುಬಿಡಿ...’</p>.<p>‘ಹೋಗಲಿ, ನಿನ್ನ ಆಸೆ ಏನು?’</p>.<p>‘ಪಿತ್ರಾರ್ಜಿತ ಆಸ್ತಿ ಸಾಕಷ್ಟಿದೆ. ಪುತ್ರಾರ್ಜಿತ ಆಸ್ತಿ ಬಗ್ಗೆ ನೀವು ಗಮನ ಹರಿಸಿಲ್ಲ...’</p>.<p>‘ಅಂದರೆ?’</p>.<p>‘ಮಗನಿಗೊಂದು ಕ್ಷೇತ್ರ ಹುಡುಕಿಕೊಡಿ, ಇಲ್ಲವೇ ನಿಮ್ಮ ಕ್ಷೇತ್ರವನ್ನೇ ಬಿಟ್ಟುಕೊಡಿ, ಮುಂದಿನ ಚುನಾವಣೆ ಗೆದ್ದು ಮಗ ಅಸೆಂಬ್ಲಿಗೆ ಹೋಗಲೇಬೇಕು...’ ಖಡಕ್ಕಾಗಿ ಹೇಳಿದ ಪತ್ನಿಯ ಮಾತಿಗೆ, ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡಂತೆ ಚಡಪಡಿಸತೊಡಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>