<p><strong>ಬೆಂಗಳೂರು</strong>: ಹಿಮಾಚಲ ಪ್ರದೇಶ ತಂಡವನ್ನು ಎರಡನೇ ಇನಿಂಗ್ಸ್ನಲ್ಲಿ 182 ರನ್ಗಳಿಗೆ ಆಲೌಟ್ ಮಾಡಿದ ಕರ್ನಾಟಕ ತಂಡವು, ಕೂಚ್ ಬಿಹಾರ್ ಟ್ರೋಫಿ ಎಲೈಟ್ ಸಿ ಗುಂಪಿನ ಪಂದ್ಯದಲ್ಲಿ ಗೆಲುವಿನತ್ತ ಮುನ್ನಡೆದಿದೆ. ರಾಜ್ಯ ತಂಡವು ಅಂತಿಮ ದಿನವಾದ ಬುಧವಾರ ಗೆಲುವಿಗೆ 50 ರನ್ ಗಳಿಸಬೇಕಿದ್ದು, 8 ವಿಕೆಟ್ಗಳು ಬತ್ತಳಿಕೆಯಲ್ಲಿವೆ. </p>.<p>ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸೋಮವಾರ 27 ಓವರುಗಳಲ್ಲಿ 2 ವಿಕೆಟ್ ನಷ್ಟಕ್ಕೆ 69 ರನ್ ಗಳಿಸಿದ್ದ ಪ್ರವಾಸಿ ತಂಡವು, ಮಂಗಳವಾರ 78 ಓವರ್ಗಳಲ್ಲಿ 182 ರನ್ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಎಡಗೈ ಸ್ಪಿನ್ನರ್ ರತನ್ ಬಿ.ಆರ್. (43ಕ್ಕೆ4) ಪರಿಣಾಮಕಾರಿ ಎನಿಸಿದರು.</p>.<p>ಗೆಲುವಿಗೆ 148 ರನ್ ಗುರಿ ಪಡೆದ ರಾಜ್ಯ ತಂಡವು 30 ಓವರ್ಗಳಲ್ಲಿ 3 ವಿಕೆಟ್ಗೆ 98 ರನ್ ಗಳಿಸಿದೆ. ಸಿದ್ಧಾರ್ಥ್ ಅಖಿಲ್ (ಔಟಾಗದೇ 12) ಹಾಗೂ ನಾಯಕ ಮಣಿಕಂಠ ಶಿವಾನಂದ (ಔಟಾಗದೇ 4) ಕ್ರೀಸ್ನಲ್ಲಿದ್ದಾರೆ.</p>.<p> ಸಂಕ್ಷಿಪ್ತ ಸ್ಕೋರು: ಹಿಮಾಚಲ ಪ್ರದೇಶ: 162 ಮತ್ತು 78 ಓವರ್ಗಳಲ್ಲಿ 182 (ನೌನಿಹಾಲ್ ಆರ್. 41; ರತನ್ ಬಿ.ಆರ್. 43ಕ್ಕೆ4, ಈಶಾ ಪುತ್ತಿಗೆ 52ಕ್ಕೆ2); ಕರ್ನಾಟಕ: 197 ಮತ್ತು 30 ಓವರ್ಗಳಲ್ಲಿ 3 ವಿಕೆಟ್ಗೆ 98 (ಆದೇಶ್ ಡಿ. ಅರಸ್ 40, ಧ್ರುವ್ ಕೃಷ್ಣನ್ 26; ಲಕ್ಷ್ಯ ಠಾಕೂರ್ 41ಕ್ಕೆ2).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಹಿಮಾಚಲ ಪ್ರದೇಶ ತಂಡವನ್ನು ಎರಡನೇ ಇನಿಂಗ್ಸ್ನಲ್ಲಿ 182 ರನ್ಗಳಿಗೆ ಆಲೌಟ್ ಮಾಡಿದ ಕರ್ನಾಟಕ ತಂಡವು, ಕೂಚ್ ಬಿಹಾರ್ ಟ್ರೋಫಿ ಎಲೈಟ್ ಸಿ ಗುಂಪಿನ ಪಂದ್ಯದಲ್ಲಿ ಗೆಲುವಿನತ್ತ ಮುನ್ನಡೆದಿದೆ. ರಾಜ್ಯ ತಂಡವು ಅಂತಿಮ ದಿನವಾದ ಬುಧವಾರ ಗೆಲುವಿಗೆ 50 ರನ್ ಗಳಿಸಬೇಕಿದ್ದು, 8 ವಿಕೆಟ್ಗಳು ಬತ್ತಳಿಕೆಯಲ್ಲಿವೆ. </p>.<p>ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸೋಮವಾರ 27 ಓವರುಗಳಲ್ಲಿ 2 ವಿಕೆಟ್ ನಷ್ಟಕ್ಕೆ 69 ರನ್ ಗಳಿಸಿದ್ದ ಪ್ರವಾಸಿ ತಂಡವು, ಮಂಗಳವಾರ 78 ಓವರ್ಗಳಲ್ಲಿ 182 ರನ್ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಎಡಗೈ ಸ್ಪಿನ್ನರ್ ರತನ್ ಬಿ.ಆರ್. (43ಕ್ಕೆ4) ಪರಿಣಾಮಕಾರಿ ಎನಿಸಿದರು.</p>.<p>ಗೆಲುವಿಗೆ 148 ರನ್ ಗುರಿ ಪಡೆದ ರಾಜ್ಯ ತಂಡವು 30 ಓವರ್ಗಳಲ್ಲಿ 3 ವಿಕೆಟ್ಗೆ 98 ರನ್ ಗಳಿಸಿದೆ. ಸಿದ್ಧಾರ್ಥ್ ಅಖಿಲ್ (ಔಟಾಗದೇ 12) ಹಾಗೂ ನಾಯಕ ಮಣಿಕಂಠ ಶಿವಾನಂದ (ಔಟಾಗದೇ 4) ಕ್ರೀಸ್ನಲ್ಲಿದ್ದಾರೆ.</p>.<p> ಸಂಕ್ಷಿಪ್ತ ಸ್ಕೋರು: ಹಿಮಾಚಲ ಪ್ರದೇಶ: 162 ಮತ್ತು 78 ಓವರ್ಗಳಲ್ಲಿ 182 (ನೌನಿಹಾಲ್ ಆರ್. 41; ರತನ್ ಬಿ.ಆರ್. 43ಕ್ಕೆ4, ಈಶಾ ಪುತ್ತಿಗೆ 52ಕ್ಕೆ2); ಕರ್ನಾಟಕ: 197 ಮತ್ತು 30 ಓವರ್ಗಳಲ್ಲಿ 3 ವಿಕೆಟ್ಗೆ 98 (ಆದೇಶ್ ಡಿ. ಅರಸ್ 40, ಧ್ರುವ್ ಕೃಷ್ಣನ್ 26; ಲಕ್ಷ್ಯ ಠಾಕೂರ್ 41ಕ್ಕೆ2).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>