<p>ಮಾರ್ಚ್ 2ರಂದು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದ ಘಟನೆಗಳು ಕಾನೂನು ಪಾಲಿಸುವ ಯಾವುದೇ ನಾಗರಿಕನನ್ನು ಘಾಸಿಗೊಳಿಸುವಂಥವು. ಅಂಥವರ ಕ್ಯಾಲೆಂಡರ್ನಲ್ಲಿ ಅದು ಕಪ್ಪುದಿನ.<br /> <br /> ಆ ಘಟನಾವಳಿಗಳ ನಂತರದ ಬೆಳವಣಿಗೆಯಂತೂ ನಾಗರಿಕ ಸಮಾಜದ ಪ್ರಮುಖ ಸ್ತಂಭಗಳಾದ ಪೊಲೀಸ್, ಮಾಧ್ಯಮ ಹಾಗೂ ನ್ಯಾಯಿಕ ಸಮುದಾಯದವರ ಕುರಿತ ನಂಬಿಕೆಯನ್ನೇ ಅಲ್ಲಾಡಿಸಿತು. ಕಾನೂನು ಕಾಪಾಡಲೆಂದು ಇರುವ ಸಮುದಾಯದವರಲ್ಲೇ ಈಗ ಒಡಕು.<br /> <br /> `ನಾವು, ಅವರು~ ಎಂಬ ಧೋರಣೆ. ಇದರಿಂದ ಟ್ರಯಲ್ ಕೋರ್ಟ್ ನ್ಯಾಯಾಧೀಶರು ಹಾಗೂ ಹೈಕೋರ್ಟ್ ನ್ಯಾಯಾಧೀಶರ ನಡುವೆಯೂ ಬಿರುಕು ಮೂಡಿದೆ. ಜೂನಿಯರ್ಸ್, ಸೀನಿಯರ್ಸ್ ಎಂಬ ಇನ್ನೊಂದು ಬಿರುಕೂ ಎದ್ದು ಕಾಣುತ್ತಿದೆ. ಕೆಲವು ಪ್ರಕರಣಗಳಲ್ಲಿ ವಕೀಲರು, ನ್ಯಾಯಮೂರ್ತಿಗಳು ಎಂಬ ಭೇದವೂ ಕಾಣುತ್ತಿದೆ. <br /> <br /> ಇದು ನಮ್ಮ ಪಾಲಿಗೆ ಆತ್ಮಾನುಸಂಧಾನದ ಸಮಯ, ಹೌದು. ಆದರೆ, ಇತರರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕೆಂದು ನಾವು ಬಯಸುವುದೂ ತರವೇ. ವಕೀಲರು ಅನಿರ್ದಿಷ್ಟ ಅವಧಿಯವರೆಗೆ ಕೋರ್ಟಿಗೆ ಹಾಜರಾಗದ ನಿರ್ಧಾರ ಸಮರ್ಥನೀಯವಲ್ಲ ಎಂದು ಕೆಲವರಿಗೆ ಅನ್ನಿಸಬಹುದು. ಆದರೆ, ಅವರು ಹೀಗೆ ಮಾಡಲು ಕಾರಣವಿದೆ. <br /> <br /> ತಮ್ಮದಲ್ಲದ ತಪ್ಪಿಗೆ ಅವರಲ್ಲಿ ಒದೆ ತಿಂದು, ನೋವು ಅನುಭವಿಸಿದವರಿದ್ದಾರೆ. ಕೋರ್ಟ್ಗೆ ನಿತ್ಯವೂ ಹಾಜರಾಗುವ ವಕೀಲನಿಗೆ ಗಲಾಟೆ ಮಾಡುವ ಉದ್ದೇಶ ಇರುವುದಿಲ್ಲ. ಜನರನ್ನು ನಿಂದಿಸುವುದು, ಹೊಡೆಯುವುದು ಕೂಡ ಗುರಿಯೇನೂ ಅಲ್ಲ. <br /> <br /> ವಕೀಲರು ತಮ್ಮ ಬಹುಪಾಲು ಅವಧಿಯಲ್ಲಿ ಅಥವಾ ನಿರಂತರವಾಗಿ ತಮ್ಮ ಕಕ್ಷಿದಾರರಿಗೆ ನ್ಯಾಯ ದಕ್ಕಿಸಿಕೊಡಲು ಶ್ರಮಿಸುತ್ತಾರೆ. ಶ್ರದ್ಧೆಯಿಂದ ಈ ಕೆಲಸ ಮಾಡುತ್ತಾ ಬಂದಿರುವ ವಕೀಲರು ಆ ದಿನ ಗಲಾಟೆ ನಡೆದ ಸ್ಥಳದಲ್ಲಿ ಇದ್ದದ್ದೇ ತಪ್ಪಾಯಿತು. ಇದು ನಗುವ ವಿಷಯವಲ್ಲ, ಪರಿಹಾರ ಕಂಡುಕೊಳ್ಳಬೇಕಾದ ಗಂಭೀರ ವಿಷಯ. <br /> <br /> ಮನುಷ್ಯ ಸುಳ್ಳು ಹೇಳಬಹುದು, ಆದರೆ ಲಭ್ಯ ಚಿತ್ರಗಳು ಸುಳ್ಳಲ್ಲ. ಮೊಬೈಲ್ನಿಂದ ತೆಗೆದ ಸಣ್ಣ ಸಣ್ಣ ವಿಡಿಯೊಗಳ ಸರಣಿ ತುಣುಕುಗಳು, ಚಿತ್ರಗಳೇ ಕೋರ್ಟ್ ಆವರಣದಲ್ಲಿ ಮುಗ್ಧರ ಮೇಲೆ ಎಂಥ ಅಮಾನವೀಯ ಹಲ್ಲೆ ನಡೆದಿದೆ ಎಂಬುದನ್ನು ಸಾಬೀತುಪಡಿಸುತ್ತವೆ.<br /> <br /> ತಮ್ಮ ಸೀನಿಯರ್ಗಳಿಗೆ ಕೇಸ್ಗಳಲ್ಲಿ ಸಹಕರಿಸಲೆಂದು ಹೋದ ಜೂನಿಯರ್ ವಕೀಲರು ಬಹುತೇಕ ಚಿತ್ರಗಳನ್ನು, ವಿಡಿಯೋಗಳನ್ನು ತೆಗೆದಿದ್ದಾರೆ. ದಾಳಿಯಿಂದ ಕೆಲವು ವಕೀಲರ ತಲೆಗೆ ಗಂಭೀರ ಪೆಟ್ಟಾಯಿತು. ಇನ್ನು ಕೆಲವರ ಮೋಟಾರ್ ಬೈಕ್ಗಳು- ಕಾರುಗಳು ಸುಟ್ಟುಹೋದವು.<br /> <br /> ದಾಳಿಯ ತೀವ್ರತೆ ಎಷ್ಟಿತ್ತೆಂದರೆ, ಸಿಟಿ ಸಿವಿಲ್ ಹಾಗೂ ಸೆಷನ್ಸ್ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯವರ ಮೇಲೆಯೇ ಕೈಮಾಡಲಾಯಿತು. ಬಹುತೇಕ ಮಾಧ್ಯಮಗಳಿಗೆ ಇದು ಪ್ರಕಟಣೆಗೆ ಅರ್ಹವಾದ ಸುದ್ದಿ ಎನ್ನಿಸಲೇ ಇಲ್ಲ. ಆದರ್ಶ ಇಟ್ಟುಕೊಂಡ ಯುವ ವಕೀಲರಿಗಂತೂ ಈ ಘಟನೆ ದೊಡ್ಡ ಪೆಟ್ಟು ಕೊಟ್ಟಿತು.<br /> <br /> ನಮ್ಮ ವ್ಯವಸ್ಥೆಯ ಮೇಲೆ ಅವರಿಗೆ ನಂಬಿಕೆಯೇ ಇಲ್ಲವಾಗಿದ್ದರೂ ಅಚ್ಚರಿಯಿಲ್ಲ. ದುರಂತ, ವಿರೋಧಾಭಾಸಗಳನ್ನು ಕಂಡು ಇಡೀ ಕಾನೂನು ವ್ಯವಸ್ಥೆಯ ಬಗ್ಗೆ ಅನುಮಾನ ಮೂಡಿರುವ ಸಾಧ್ಯತೆಯೂ ಇದೆ. <br /> <br /> ಸಮಾಜದ ವಿವಿಧ ಕ್ಷೇತ್ರಗಳ ಜನ ತಾವಾಗಿಯೇ ನ್ಯಾಯಿಕ ಸಮುದಾಯದ ಕುರಿತು ನೈತಿಕ ತೀರ್ಪು ಕೊಡುತ್ತಿರುವುದು ವ್ಯಂಗ್ಯ. ನ್ಯಾಯಾಂಗ ವ್ಯವಸ್ಥೆಯೂ ಸುಧಾರಣೆಗೆ ಹೊರತಾದುದಲ್ಲವೆಂಬುದು ನಿಜವಾದರೂ, ಮಾರ್ಚ್ 2ರ ಘಟನಾವಳಿಗಳಲ್ಲಿ ಅರ್ಧ ಸತ್ಯವನ್ನೇ ವಾಸ್ತವ ಎಂಬಂತೆ ಬಿಂಬಿಸುತ್ತಿರುವುದು ಸರಿಯಲ್ಲ. <br /> <br /> ಇದರಿಂದ ತಪ್ಪು ಕಲ್ಪನೆಗಳನ್ನು ಬಿತ್ತಲಾಗಿದೆ. ಕಲ್ಲೆಸೆದ ವಕೀಲರನ್ನು ತೋರಿಸಿದ ಮಾಧ್ಯಮಗಳು ತಮ್ಮ ಕ್ಷೇತ್ರದವರೇ ತಪ್ಪಾಗಿ ವರ್ತಿಸಿದ್ದನ್ನು ಮುಚ್ಚಿ ಹಾಕಿಬಿಟ್ಟವು. ಸಾಮಾನ್ಯವಾಗಿ ಪೊಲೀಸರ ಹಿಂದೆ ಸಂತೋಷದಿಂದ ಹಿಂದೆ ಬೀಳುವ ವಿದ್ಯುನ್ಮಾನ ಮಾಧ್ಯಮ ಕೂಡ ಈ ಸಲ ಅವರಿಂದ ಮುಗ್ಧ ವಕೀಲರಿಗಾದ ತೊಂದರೆಗಳ ಚಿತ್ರಣವನ್ನು ತೋರಿಸಲೇ ಇಲ್ಲ. <br /> <br /> ಇಂಥ ವರದಿಗಳನ್ನು ಓದಿಯೋ, ನೋಡಿಯೋ ಸಾಮಾನ್ಯ ಜನ ವಕೀಲರನ್ನು ವಿರೋಧಿಸಲಾರಂಭಿಸಿದ್ದಾರೆ. ಕರ್ನಾಟಕ ಮಾಧ್ಯಮದ ಕೆಲವರು ನ್ಯಾಯಾಂಗದ ಮಹತ್ವದ ಕೊಡುಗೆಗಳನ್ನು ಮರೆತಂತಿದೆ. ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಪೆಟ್ಟು ಬಿದ್ದಿತು.<br /> <br /> ಅದರ ವಿರುದ್ಧ ಹೋರಾಡಿದ ಎಂ.ಸಿ. ಚಾಗ್ಲಾ ನ್ಯಾಯಾಂಗದವರು. ಪೊಲೀಸ್ ಪಡೆಗೆ ಸುಧಾರಣೆಯ ಅಗತ್ಯವಿದ್ದಾಗ, ಅದಕ್ಕೆ ಪುಷ್ಟಿ ಕೊಟ್ಟಿದ್ದು ಪ್ರಕಾಶ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು. ಪೊಲೀಸ್, ನ್ಯಾಯಾಂಗ ಹಾಗೂ ಮಾಧ್ಯಮ ಮೂರೂ ಕ್ಷೇತ್ರಗಳಿಗೆ ನ್ಯಾಯ ದಕ್ಕಿಸಿಕೊಡುವ ಜವಾಬ್ದಾರಿ ಇರುತ್ತದೆ. <br /> <br /> ಅದರಲ್ಲೂ `ಕ್ರಿಮಿನಲ್ ನ್ಯಾಯ~ದ ವಿಷಯದಲ್ಲಿ ಮೂರೂ ಕ್ಷೇತ್ರಗಳ ಪಾತ್ರ ಹಿರಿದು. ಹಾಗಾಗಿ ಮೂರೂ ಕ್ಷೇತ್ರಗಳವರು ಪಕ್ಷಪಾತಿಗಳಾಗುವುದಾಗಲಿ, ಸೇಡು ತೀರಿಸಿಕೊಳ್ಳಬೇಕೆಂಬ ಭಾವನೆ ಮೂಡಿಸಿಕೊಳ್ಳುವುದಾಗಲಿ ಸಲ್ಲದು. ಗಾಳಿಯಲ್ಲಿ ಬೆಂಕಿಯನ್ನು ಕೆದಕುವವರು ಬಿರುಗಾಳಿ ಬೀಸಿದರೆ ಬೆಂಕಿಯ ಕೆನ್ನಾಲಗೆ ಎಲ್ಲಿಯವರೆಗೆ ಚಾಚೀತು ಎಂದು ಯೋಚಿಸಬೇಕು.<br /> <br /> ರಾಜಕೀಯ ವರ್ಗ ಕೂಡ ಕಾನೂನು ಪಾಲನೆಯು ಸಮಾಜದ ವಿವಿಧ ಅಂಗಗಳನ್ನು ಅವಲಂಬಿಸಿದೆ ಎಂಬುದನ್ನು ಮನಗಾಣಬೇಕು. ಇಡೀ ನ್ಯಾಯಾಂಗ ವ್ಯವಸ್ಥೆಯ ಎಲ್ಲರನ್ನೂ ಏಕಪ್ರಕಾರದಲ್ಲಿ ಟೀಕಿಸುತ್ತಾ ಹೋದರೆ ಅದರಿಂದ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ನ್ಯಾಯಾಂಗ ಪ್ರಕ್ರಿಯೆಯಲ್ಲಿ ಜನರ ನಂಬಿಕೆಯೇ ಇಲ್ಲವಾಗಿ ಬಿಡುವ ಆತಂಕ ಸೃಷ್ಟಿಯಾಗುತ್ತದೆ.<br /> <br /> ಪಾಕಿಸ್ತಾನ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ನ ನಿವೃತ್ತ ಅಧ್ಯಕ್ಷರಾದ ಐತ್ಜಾಜ್ ಎಹ್ಸಾನ್ ಭಾರತ ಪ್ರಜಾಪ್ರಭುತ್ವದಲ್ಲಿನ ನ್ಯಾಯಿಕ ವ್ಯವಸ್ಥೆಯನ್ನು ಮಾದರಿ ಎಂದು ಶ್ಲಾಘಿಸಿದ್ದಾರೆ. ವಕೀಲರು ದೇಶ ನಿರ್ಮಾತೃಗಳು. <br /> <br /> ನಾವು, ನ್ಯಾಯಿಕ ಸಮುದಾಯದವರು ನ್ಯಾಯಾಂಗ ವ್ಯವಸ್ಥೆಯ ಗತವೈಭವ ಮರಳುವಂತೆ ಮಾಡಬೇಕು. ನಾಗರಿಕರ ಒಂದಿಷ್ಟು ಸಹಾಯದಿಂದ ಶಂಕೆಯನ್ನು ತಗ್ಗಿಸಿಕೊಂಡು, ವಿವೇಚನಾಶಕ್ತಿಯನ್ನು ಹಿಗ್ಗಿಸಿಕೊಂಡು ಅಪಾಯದ ಸಂದರ್ಭಗಳನ್ನು ಅರಿತು ತ್ಯಾಗಕ್ಕೆ ಸಿದ್ಧರಾಗಬೇಕು. ಅನಿಷ್ಟಕ್ಕೆಲ್ಲಾ ಒಂದೇ ವರ್ಗದವರನ್ನು ಹೊಣೆಯಾಗಿಸುವವರಿಗೆ ಮುಂದೆ ಎಂದಾದರೂ ಜ್ಞಾನೋದಯವಾಗುತ್ತದೆಯಾ? ನೋಡೋಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಾರ್ಚ್ 2ರಂದು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದ ಘಟನೆಗಳು ಕಾನೂನು ಪಾಲಿಸುವ ಯಾವುದೇ ನಾಗರಿಕನನ್ನು ಘಾಸಿಗೊಳಿಸುವಂಥವು. ಅಂಥವರ ಕ್ಯಾಲೆಂಡರ್ನಲ್ಲಿ ಅದು ಕಪ್ಪುದಿನ.<br /> <br /> ಆ ಘಟನಾವಳಿಗಳ ನಂತರದ ಬೆಳವಣಿಗೆಯಂತೂ ನಾಗರಿಕ ಸಮಾಜದ ಪ್ರಮುಖ ಸ್ತಂಭಗಳಾದ ಪೊಲೀಸ್, ಮಾಧ್ಯಮ ಹಾಗೂ ನ್ಯಾಯಿಕ ಸಮುದಾಯದವರ ಕುರಿತ ನಂಬಿಕೆಯನ್ನೇ ಅಲ್ಲಾಡಿಸಿತು. ಕಾನೂನು ಕಾಪಾಡಲೆಂದು ಇರುವ ಸಮುದಾಯದವರಲ್ಲೇ ಈಗ ಒಡಕು.<br /> <br /> `ನಾವು, ಅವರು~ ಎಂಬ ಧೋರಣೆ. ಇದರಿಂದ ಟ್ರಯಲ್ ಕೋರ್ಟ್ ನ್ಯಾಯಾಧೀಶರು ಹಾಗೂ ಹೈಕೋರ್ಟ್ ನ್ಯಾಯಾಧೀಶರ ನಡುವೆಯೂ ಬಿರುಕು ಮೂಡಿದೆ. ಜೂನಿಯರ್ಸ್, ಸೀನಿಯರ್ಸ್ ಎಂಬ ಇನ್ನೊಂದು ಬಿರುಕೂ ಎದ್ದು ಕಾಣುತ್ತಿದೆ. ಕೆಲವು ಪ್ರಕರಣಗಳಲ್ಲಿ ವಕೀಲರು, ನ್ಯಾಯಮೂರ್ತಿಗಳು ಎಂಬ ಭೇದವೂ ಕಾಣುತ್ತಿದೆ. <br /> <br /> ಇದು ನಮ್ಮ ಪಾಲಿಗೆ ಆತ್ಮಾನುಸಂಧಾನದ ಸಮಯ, ಹೌದು. ಆದರೆ, ಇತರರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕೆಂದು ನಾವು ಬಯಸುವುದೂ ತರವೇ. ವಕೀಲರು ಅನಿರ್ದಿಷ್ಟ ಅವಧಿಯವರೆಗೆ ಕೋರ್ಟಿಗೆ ಹಾಜರಾಗದ ನಿರ್ಧಾರ ಸಮರ್ಥನೀಯವಲ್ಲ ಎಂದು ಕೆಲವರಿಗೆ ಅನ್ನಿಸಬಹುದು. ಆದರೆ, ಅವರು ಹೀಗೆ ಮಾಡಲು ಕಾರಣವಿದೆ. <br /> <br /> ತಮ್ಮದಲ್ಲದ ತಪ್ಪಿಗೆ ಅವರಲ್ಲಿ ಒದೆ ತಿಂದು, ನೋವು ಅನುಭವಿಸಿದವರಿದ್ದಾರೆ. ಕೋರ್ಟ್ಗೆ ನಿತ್ಯವೂ ಹಾಜರಾಗುವ ವಕೀಲನಿಗೆ ಗಲಾಟೆ ಮಾಡುವ ಉದ್ದೇಶ ಇರುವುದಿಲ್ಲ. ಜನರನ್ನು ನಿಂದಿಸುವುದು, ಹೊಡೆಯುವುದು ಕೂಡ ಗುರಿಯೇನೂ ಅಲ್ಲ. <br /> <br /> ವಕೀಲರು ತಮ್ಮ ಬಹುಪಾಲು ಅವಧಿಯಲ್ಲಿ ಅಥವಾ ನಿರಂತರವಾಗಿ ತಮ್ಮ ಕಕ್ಷಿದಾರರಿಗೆ ನ್ಯಾಯ ದಕ್ಕಿಸಿಕೊಡಲು ಶ್ರಮಿಸುತ್ತಾರೆ. ಶ್ರದ್ಧೆಯಿಂದ ಈ ಕೆಲಸ ಮಾಡುತ್ತಾ ಬಂದಿರುವ ವಕೀಲರು ಆ ದಿನ ಗಲಾಟೆ ನಡೆದ ಸ್ಥಳದಲ್ಲಿ ಇದ್ದದ್ದೇ ತಪ್ಪಾಯಿತು. ಇದು ನಗುವ ವಿಷಯವಲ್ಲ, ಪರಿಹಾರ ಕಂಡುಕೊಳ್ಳಬೇಕಾದ ಗಂಭೀರ ವಿಷಯ. <br /> <br /> ಮನುಷ್ಯ ಸುಳ್ಳು ಹೇಳಬಹುದು, ಆದರೆ ಲಭ್ಯ ಚಿತ್ರಗಳು ಸುಳ್ಳಲ್ಲ. ಮೊಬೈಲ್ನಿಂದ ತೆಗೆದ ಸಣ್ಣ ಸಣ್ಣ ವಿಡಿಯೊಗಳ ಸರಣಿ ತುಣುಕುಗಳು, ಚಿತ್ರಗಳೇ ಕೋರ್ಟ್ ಆವರಣದಲ್ಲಿ ಮುಗ್ಧರ ಮೇಲೆ ಎಂಥ ಅಮಾನವೀಯ ಹಲ್ಲೆ ನಡೆದಿದೆ ಎಂಬುದನ್ನು ಸಾಬೀತುಪಡಿಸುತ್ತವೆ.<br /> <br /> ತಮ್ಮ ಸೀನಿಯರ್ಗಳಿಗೆ ಕೇಸ್ಗಳಲ್ಲಿ ಸಹಕರಿಸಲೆಂದು ಹೋದ ಜೂನಿಯರ್ ವಕೀಲರು ಬಹುತೇಕ ಚಿತ್ರಗಳನ್ನು, ವಿಡಿಯೋಗಳನ್ನು ತೆಗೆದಿದ್ದಾರೆ. ದಾಳಿಯಿಂದ ಕೆಲವು ವಕೀಲರ ತಲೆಗೆ ಗಂಭೀರ ಪೆಟ್ಟಾಯಿತು. ಇನ್ನು ಕೆಲವರ ಮೋಟಾರ್ ಬೈಕ್ಗಳು- ಕಾರುಗಳು ಸುಟ್ಟುಹೋದವು.<br /> <br /> ದಾಳಿಯ ತೀವ್ರತೆ ಎಷ್ಟಿತ್ತೆಂದರೆ, ಸಿಟಿ ಸಿವಿಲ್ ಹಾಗೂ ಸೆಷನ್ಸ್ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯವರ ಮೇಲೆಯೇ ಕೈಮಾಡಲಾಯಿತು. ಬಹುತೇಕ ಮಾಧ್ಯಮಗಳಿಗೆ ಇದು ಪ್ರಕಟಣೆಗೆ ಅರ್ಹವಾದ ಸುದ್ದಿ ಎನ್ನಿಸಲೇ ಇಲ್ಲ. ಆದರ್ಶ ಇಟ್ಟುಕೊಂಡ ಯುವ ವಕೀಲರಿಗಂತೂ ಈ ಘಟನೆ ದೊಡ್ಡ ಪೆಟ್ಟು ಕೊಟ್ಟಿತು.<br /> <br /> ನಮ್ಮ ವ್ಯವಸ್ಥೆಯ ಮೇಲೆ ಅವರಿಗೆ ನಂಬಿಕೆಯೇ ಇಲ್ಲವಾಗಿದ್ದರೂ ಅಚ್ಚರಿಯಿಲ್ಲ. ದುರಂತ, ವಿರೋಧಾಭಾಸಗಳನ್ನು ಕಂಡು ಇಡೀ ಕಾನೂನು ವ್ಯವಸ್ಥೆಯ ಬಗ್ಗೆ ಅನುಮಾನ ಮೂಡಿರುವ ಸಾಧ್ಯತೆಯೂ ಇದೆ. <br /> <br /> ಸಮಾಜದ ವಿವಿಧ ಕ್ಷೇತ್ರಗಳ ಜನ ತಾವಾಗಿಯೇ ನ್ಯಾಯಿಕ ಸಮುದಾಯದ ಕುರಿತು ನೈತಿಕ ತೀರ್ಪು ಕೊಡುತ್ತಿರುವುದು ವ್ಯಂಗ್ಯ. ನ್ಯಾಯಾಂಗ ವ್ಯವಸ್ಥೆಯೂ ಸುಧಾರಣೆಗೆ ಹೊರತಾದುದಲ್ಲವೆಂಬುದು ನಿಜವಾದರೂ, ಮಾರ್ಚ್ 2ರ ಘಟನಾವಳಿಗಳಲ್ಲಿ ಅರ್ಧ ಸತ್ಯವನ್ನೇ ವಾಸ್ತವ ಎಂಬಂತೆ ಬಿಂಬಿಸುತ್ತಿರುವುದು ಸರಿಯಲ್ಲ. <br /> <br /> ಇದರಿಂದ ತಪ್ಪು ಕಲ್ಪನೆಗಳನ್ನು ಬಿತ್ತಲಾಗಿದೆ. ಕಲ್ಲೆಸೆದ ವಕೀಲರನ್ನು ತೋರಿಸಿದ ಮಾಧ್ಯಮಗಳು ತಮ್ಮ ಕ್ಷೇತ್ರದವರೇ ತಪ್ಪಾಗಿ ವರ್ತಿಸಿದ್ದನ್ನು ಮುಚ್ಚಿ ಹಾಕಿಬಿಟ್ಟವು. ಸಾಮಾನ್ಯವಾಗಿ ಪೊಲೀಸರ ಹಿಂದೆ ಸಂತೋಷದಿಂದ ಹಿಂದೆ ಬೀಳುವ ವಿದ್ಯುನ್ಮಾನ ಮಾಧ್ಯಮ ಕೂಡ ಈ ಸಲ ಅವರಿಂದ ಮುಗ್ಧ ವಕೀಲರಿಗಾದ ತೊಂದರೆಗಳ ಚಿತ್ರಣವನ್ನು ತೋರಿಸಲೇ ಇಲ್ಲ. <br /> <br /> ಇಂಥ ವರದಿಗಳನ್ನು ಓದಿಯೋ, ನೋಡಿಯೋ ಸಾಮಾನ್ಯ ಜನ ವಕೀಲರನ್ನು ವಿರೋಧಿಸಲಾರಂಭಿಸಿದ್ದಾರೆ. ಕರ್ನಾಟಕ ಮಾಧ್ಯಮದ ಕೆಲವರು ನ್ಯಾಯಾಂಗದ ಮಹತ್ವದ ಕೊಡುಗೆಗಳನ್ನು ಮರೆತಂತಿದೆ. ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಪೆಟ್ಟು ಬಿದ್ದಿತು.<br /> <br /> ಅದರ ವಿರುದ್ಧ ಹೋರಾಡಿದ ಎಂ.ಸಿ. ಚಾಗ್ಲಾ ನ್ಯಾಯಾಂಗದವರು. ಪೊಲೀಸ್ ಪಡೆಗೆ ಸುಧಾರಣೆಯ ಅಗತ್ಯವಿದ್ದಾಗ, ಅದಕ್ಕೆ ಪುಷ್ಟಿ ಕೊಟ್ಟಿದ್ದು ಪ್ರಕಾಶ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು. ಪೊಲೀಸ್, ನ್ಯಾಯಾಂಗ ಹಾಗೂ ಮಾಧ್ಯಮ ಮೂರೂ ಕ್ಷೇತ್ರಗಳಿಗೆ ನ್ಯಾಯ ದಕ್ಕಿಸಿಕೊಡುವ ಜವಾಬ್ದಾರಿ ಇರುತ್ತದೆ. <br /> <br /> ಅದರಲ್ಲೂ `ಕ್ರಿಮಿನಲ್ ನ್ಯಾಯ~ದ ವಿಷಯದಲ್ಲಿ ಮೂರೂ ಕ್ಷೇತ್ರಗಳ ಪಾತ್ರ ಹಿರಿದು. ಹಾಗಾಗಿ ಮೂರೂ ಕ್ಷೇತ್ರಗಳವರು ಪಕ್ಷಪಾತಿಗಳಾಗುವುದಾಗಲಿ, ಸೇಡು ತೀರಿಸಿಕೊಳ್ಳಬೇಕೆಂಬ ಭಾವನೆ ಮೂಡಿಸಿಕೊಳ್ಳುವುದಾಗಲಿ ಸಲ್ಲದು. ಗಾಳಿಯಲ್ಲಿ ಬೆಂಕಿಯನ್ನು ಕೆದಕುವವರು ಬಿರುಗಾಳಿ ಬೀಸಿದರೆ ಬೆಂಕಿಯ ಕೆನ್ನಾಲಗೆ ಎಲ್ಲಿಯವರೆಗೆ ಚಾಚೀತು ಎಂದು ಯೋಚಿಸಬೇಕು.<br /> <br /> ರಾಜಕೀಯ ವರ್ಗ ಕೂಡ ಕಾನೂನು ಪಾಲನೆಯು ಸಮಾಜದ ವಿವಿಧ ಅಂಗಗಳನ್ನು ಅವಲಂಬಿಸಿದೆ ಎಂಬುದನ್ನು ಮನಗಾಣಬೇಕು. ಇಡೀ ನ್ಯಾಯಾಂಗ ವ್ಯವಸ್ಥೆಯ ಎಲ್ಲರನ್ನೂ ಏಕಪ್ರಕಾರದಲ್ಲಿ ಟೀಕಿಸುತ್ತಾ ಹೋದರೆ ಅದರಿಂದ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ನ್ಯಾಯಾಂಗ ಪ್ರಕ್ರಿಯೆಯಲ್ಲಿ ಜನರ ನಂಬಿಕೆಯೇ ಇಲ್ಲವಾಗಿ ಬಿಡುವ ಆತಂಕ ಸೃಷ್ಟಿಯಾಗುತ್ತದೆ.<br /> <br /> ಪಾಕಿಸ್ತಾನ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ನ ನಿವೃತ್ತ ಅಧ್ಯಕ್ಷರಾದ ಐತ್ಜಾಜ್ ಎಹ್ಸಾನ್ ಭಾರತ ಪ್ರಜಾಪ್ರಭುತ್ವದಲ್ಲಿನ ನ್ಯಾಯಿಕ ವ್ಯವಸ್ಥೆಯನ್ನು ಮಾದರಿ ಎಂದು ಶ್ಲಾಘಿಸಿದ್ದಾರೆ. ವಕೀಲರು ದೇಶ ನಿರ್ಮಾತೃಗಳು. <br /> <br /> ನಾವು, ನ್ಯಾಯಿಕ ಸಮುದಾಯದವರು ನ್ಯಾಯಾಂಗ ವ್ಯವಸ್ಥೆಯ ಗತವೈಭವ ಮರಳುವಂತೆ ಮಾಡಬೇಕು. ನಾಗರಿಕರ ಒಂದಿಷ್ಟು ಸಹಾಯದಿಂದ ಶಂಕೆಯನ್ನು ತಗ್ಗಿಸಿಕೊಂಡು, ವಿವೇಚನಾಶಕ್ತಿಯನ್ನು ಹಿಗ್ಗಿಸಿಕೊಂಡು ಅಪಾಯದ ಸಂದರ್ಭಗಳನ್ನು ಅರಿತು ತ್ಯಾಗಕ್ಕೆ ಸಿದ್ಧರಾಗಬೇಕು. ಅನಿಷ್ಟಕ್ಕೆಲ್ಲಾ ಒಂದೇ ವರ್ಗದವರನ್ನು ಹೊಣೆಯಾಗಿಸುವವರಿಗೆ ಮುಂದೆ ಎಂದಾದರೂ ಜ್ಞಾನೋದಯವಾಗುತ್ತದೆಯಾ? ನೋಡೋಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>