ಅಂಬೇಡ್ಕರ್ ಅವರ ಜೀವನಚರಿತ್ರೆಯ ವಿವಿಧ ಆಯಾಮಗಳನ್ನು ಹೊಂದಿರುವ ಅವರ ಬರಹ ಮತ್ತು ಭಾಷಣದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರು ಮುತುವರ್ಜಿ ವಹಿಸಿ, ಈ ಕಾರ್ಯವನ್ನು ನಮ್ಮ ದೇಶವು ಸಂವಿಧಾನವನ್ನು ಅಳವಡಿಸಿಕೊಂಡ ದಿನವಾದ ನ. 26ರ ಒಳಗೆ ಮುದ್ರಿಸಿ ಓದುಗರಿಗೆ ಒದಗಿಸಲು ಕ್ರಮ ಕೈಗೊಳ್ಳಬೇಕು. ಹಾಗೇ ಈ ಪ್ರತಿಗಳು ತಾಲ್ಲೂಕು ಮಟ್ಟದ ಮಿನಿ ವಿಧಾನಸೌಧದ ಕೊಠಡಿಗಳಲ್ಲಿ ದೊರೆಯುವಂತೆ ಆಗಬೇಕು. ಏಕೆಂದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಕಚೇರಿಗೆ ಹೋಗಿ ಕೃತಿ ಖರೀದಿಸಿ ತರಲು ಎಲ್ಲರಿಗೂ ಸಾಧ್ಯವಾಗದೇ ಇರಬಹುದು.