<p><strong>ಸಡಗರದ ಮೈಸೂರು ದಸರಾ ಆರಂಭ</strong></p>.<p><strong>ಮೈಸೂರು, ಅ. 13–</strong> ಕನ್ನಡ ನಾಡಿನ ಹೆಮ್ಮೆಯ ನವರಾತ್ರಿಯ ಹಬ್ಬಕ್ಕೆ ಫಾಲ್ಕೆ ಪ್ರಶಸ್ತಿ ವಿಜೇತ ನಟ ಡಾ.ರಾಜಕುಮಾರ್ ಅವರು ಇಂದಿಲ್ಲಿ ಚಾಲನೆ ನೀಡಿದರು.</p>.<p>ಚಾಮುಂಡಿ ಬೆಟ್ಟದ ಮೇಲೆ ಮೈಸೂರು ಮಲ್ಲಿಗೆಯಿಂದ ಅಲಂಕರಿಸಿದ್ದ ಚಾಮುಂಡೇಶ್ವರಿಗೆ, ಪತ್ನಿ ಸಮೇತರಾಗಿ ಪೂಜೆ ಸಲ್ಲಿಸಿದ ರಾಜಕುಮಾರ್ ಅವರು ತಮ್ಮ ಗಾಯನದ ಕಂಪನ್ನೂ ಪಸರಿಸಿ ನಾಡಹಬ್ಬದ ಕಹಳೆಯನ್ನು ಮೊಳಗಿಸಿದರು.</p>.<p>ಮೋಡಗಳ ಮಧ್ಯೆ ಪ್ರಖರವಾಗಿ ಉರಿಯುತ್ತಿದ್ದ ಬೆಳಗಿನ ಸೂರ್ಯನ ಸಾಕ್ಷಿಯಲ್ಲಿ ಇಡೀ ಬೆಟ್ಟವೇ ಹೊಳೆಯುತ್ತಿದ್ದು, ಮೈಸೂರು ನಗರದಲ್ಲಿ ಇನ್ನು ಹತ್ತು ದಿನಗಳ ಕಾಲ ಸಾಂಸ್ಕೃತಿಕ ಹಬ್ಬವಾಗಿ, ಪರಂಪರೆಯ ವೈಭವವನ್ನು ಮೆರೆಸುವ ದಸರಾ ರಾಜ್ ದಂಪತಿಗಳ ಆಗಮನದಿಂದ ಸಹಜವಾಗಿಯೇ ಸಡಗರವನ್ನು ಪಡೆದುಕೊಂಡಿತ್ತು.</p>.<p><strong>ಸರ್ಕಾರ ರಚನೆಗೆ ಬಿಜೆಪಿ ಸನ್ನಾಹ</strong></p>.<p><strong>ನವದೆಹಲಿ, ಅ. 13 (ಯುಎನ್ಐ, ಪಿಟಿಐ)–</strong> ಉತ್ತರಪ್ರದೇಶದ ಮುಖ್ಯಮಂತ್ರಿ ಆಯ್ಕೆ ಸಂಬಂಧ ಕೇಂದ್ರದ ಸಂಯುಕ್ತರಂಗ ಸರ್ಕಾರಕ್ಕೆ ಯಾವುದೇ ಬೆದರಿಕೆ ಒಡ್ಡಲು ಇಂದು ಇಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಿರಾಕರಿಸಿದೆ. ಈ ನಡುವೆ, ಉತ್ತರಪ್ರದೇಶದಲ್ಲಿ ಸರ್ಕಾರ ರಚಿಸಲು ತಮ್ಮನ್ನು ಆಹ್ವಾನಿಸುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಭಾರತೀಯ ಜನತಾ ಪಕ್ಷ ನಿರ್ಧರಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಡಗರದ ಮೈಸೂರು ದಸರಾ ಆರಂಭ</strong></p>.<p><strong>ಮೈಸೂರು, ಅ. 13–</strong> ಕನ್ನಡ ನಾಡಿನ ಹೆಮ್ಮೆಯ ನವರಾತ್ರಿಯ ಹಬ್ಬಕ್ಕೆ ಫಾಲ್ಕೆ ಪ್ರಶಸ್ತಿ ವಿಜೇತ ನಟ ಡಾ.ರಾಜಕುಮಾರ್ ಅವರು ಇಂದಿಲ್ಲಿ ಚಾಲನೆ ನೀಡಿದರು.</p>.<p>ಚಾಮುಂಡಿ ಬೆಟ್ಟದ ಮೇಲೆ ಮೈಸೂರು ಮಲ್ಲಿಗೆಯಿಂದ ಅಲಂಕರಿಸಿದ್ದ ಚಾಮುಂಡೇಶ್ವರಿಗೆ, ಪತ್ನಿ ಸಮೇತರಾಗಿ ಪೂಜೆ ಸಲ್ಲಿಸಿದ ರಾಜಕುಮಾರ್ ಅವರು ತಮ್ಮ ಗಾಯನದ ಕಂಪನ್ನೂ ಪಸರಿಸಿ ನಾಡಹಬ್ಬದ ಕಹಳೆಯನ್ನು ಮೊಳಗಿಸಿದರು.</p>.<p>ಮೋಡಗಳ ಮಧ್ಯೆ ಪ್ರಖರವಾಗಿ ಉರಿಯುತ್ತಿದ್ದ ಬೆಳಗಿನ ಸೂರ್ಯನ ಸಾಕ್ಷಿಯಲ್ಲಿ ಇಡೀ ಬೆಟ್ಟವೇ ಹೊಳೆಯುತ್ತಿದ್ದು, ಮೈಸೂರು ನಗರದಲ್ಲಿ ಇನ್ನು ಹತ್ತು ದಿನಗಳ ಕಾಲ ಸಾಂಸ್ಕೃತಿಕ ಹಬ್ಬವಾಗಿ, ಪರಂಪರೆಯ ವೈಭವವನ್ನು ಮೆರೆಸುವ ದಸರಾ ರಾಜ್ ದಂಪತಿಗಳ ಆಗಮನದಿಂದ ಸಹಜವಾಗಿಯೇ ಸಡಗರವನ್ನು ಪಡೆದುಕೊಂಡಿತ್ತು.</p>.<p><strong>ಸರ್ಕಾರ ರಚನೆಗೆ ಬಿಜೆಪಿ ಸನ್ನಾಹ</strong></p>.<p><strong>ನವದೆಹಲಿ, ಅ. 13 (ಯುಎನ್ಐ, ಪಿಟಿಐ)–</strong> ಉತ್ತರಪ್ರದೇಶದ ಮುಖ್ಯಮಂತ್ರಿ ಆಯ್ಕೆ ಸಂಬಂಧ ಕೇಂದ್ರದ ಸಂಯುಕ್ತರಂಗ ಸರ್ಕಾರಕ್ಕೆ ಯಾವುದೇ ಬೆದರಿಕೆ ಒಡ್ಡಲು ಇಂದು ಇಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಿರಾಕರಿಸಿದೆ. ಈ ನಡುವೆ, ಉತ್ತರಪ್ರದೇಶದಲ್ಲಿ ಸರ್ಕಾರ ರಚಿಸಲು ತಮ್ಮನ್ನು ಆಹ್ವಾನಿಸುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಭಾರತೀಯ ಜನತಾ ಪಕ್ಷ ನಿರ್ಧರಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>