ನವದೆಹಲಿ, ಫೆ. 26– ಪಾಕಿಸ್ತಾನ ನಿರಂತರವಾಗಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಜಮಾವಣೆ ಮಾಡಿಕೊಳ್ಳುವ ಮತ್ತು ಯುರೇನಿಯಂ ತಾಂತ್ರಿಕತೆಯನ್ನು ಅಭಿವೃದ್ಧಿ ಪಡಿಸಿಕೊಳ್ಳುವ ಕಾರ್ಯವನ್ನು ಮುಂದುವರಿಸಿರುವುದು ಆತಂಕಕಾರಿಯಾಗಿದೆ. ಪಾಕಿಸ್ತಾನದ ಈ ಯತ್ನವು ಗಡಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಉಂಟು ಮಾಡುವುದರಿಂದ ಶಸ್ತ್ರಾಸ್ತ್ರ ಪೈಪೋಟಿಗೆ ಎಡೆಕೊಡುವ ಸಂಭವ ಇದೆ ಎಂದು ರಾಷ್ಟ್ರಪತಿ ಡಾ. ಶಂಕರ ದಯಾಳ ಶರ್ಮಾ ಅವರು ಇಂದು ಪಾಕ್ನ ಸಮರ ಉನ್ಮತ್ತ ಮನೋಭಾವವನ್ನು ತರಾಟೆಗೆ ತೆಗೆದುಕೊಂಡರು.