<p>ಪಾಕ್ ಸಮರ ಮನೋಭಾವ ರಾಷ್ಟ್ರಪತಿ ಖಂಡನೆ</p>.<p>ನವದೆಹಲಿ, ಫೆ. 26– ಪಾಕಿಸ್ತಾನ ನಿರಂತರವಾಗಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಜಮಾವಣೆ ಮಾಡಿಕೊಳ್ಳುವ ಮತ್ತು ಯುರೇನಿಯಂ ತಾಂತ್ರಿಕತೆಯನ್ನು ಅಭಿವೃದ್ಧಿ ಪಡಿಸಿಕೊಳ್ಳುವ ಕಾರ್ಯವನ್ನು ಮುಂದುವರಿಸಿರುವುದು ಆತಂಕಕಾರಿಯಾಗಿದೆ. ಪಾಕಿಸ್ತಾನದ ಈ ಯತ್ನವು ಗಡಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಉಂಟು ಮಾಡುವುದರಿಂದ ಶಸ್ತ್ರಾಸ್ತ್ರ ಪೈಪೋಟಿಗೆ ಎಡೆಕೊಡುವ ಸಂಭವ ಇದೆ ಎಂದು ರಾಷ್ಟ್ರಪತಿ ಡಾ. ಶಂಕರ ದಯಾಳ ಶರ್ಮಾ ಅವರು ಇಂದು ಪಾಕ್ನ ಸಮರ ಉನ್ಮತ್ತ ಮನೋಭಾವವನ್ನು ತರಾಟೆಗೆ ತೆಗೆದುಕೊಂಡರು.</p>.<p>ಸಂಸತ್ ಭವನದ ಸೆಂಟ್ರಲ್ ಹಾಲ್ನಲ್ಲಿ ಅವರು ಇಂದು ಹತ್ತನೇ ಲೋಕಸಭೆಯ ಕೊನೆಯ ಮತ್ತು ಸಂಕ್ಷಿಪ್ತ ಬಜೆಟ್ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.</p>.<p>ಹವಾಲ: ರಾವ್ ಹೆಸರು ಬಹಿರಂಗ ಅರ್ಜಿ ತಿರಸ್ಕೃತ</p>.<p>ನವದೆಹಲಿ, ಫೆ. 26 (ಯುಎನ್ಐ)– ಹವಾಲ ಹಗರಣದಲ್ಲಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರ ಬಗ್ಗೆ ಎಸ್.ಕೆ. ಜೈನ್ ನೀಡಿರುವ ಹೇಳಿಕೆಯನ್ನು ಬಹಿರಂಗಪಡಿಸುವಂತೆ ಸಿಬಿಐಗೆ ನಿರ್ದೇಶನ ನೀಡಬೇಕೆಂದು ಕೋರಿದ್ದ ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಾಕ್ ಸಮರ ಮನೋಭಾವ ರಾಷ್ಟ್ರಪತಿ ಖಂಡನೆ</p>.<p>ನವದೆಹಲಿ, ಫೆ. 26– ಪಾಕಿಸ್ತಾನ ನಿರಂತರವಾಗಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಜಮಾವಣೆ ಮಾಡಿಕೊಳ್ಳುವ ಮತ್ತು ಯುರೇನಿಯಂ ತಾಂತ್ರಿಕತೆಯನ್ನು ಅಭಿವೃದ್ಧಿ ಪಡಿಸಿಕೊಳ್ಳುವ ಕಾರ್ಯವನ್ನು ಮುಂದುವರಿಸಿರುವುದು ಆತಂಕಕಾರಿಯಾಗಿದೆ. ಪಾಕಿಸ್ತಾನದ ಈ ಯತ್ನವು ಗಡಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಉಂಟು ಮಾಡುವುದರಿಂದ ಶಸ್ತ್ರಾಸ್ತ್ರ ಪೈಪೋಟಿಗೆ ಎಡೆಕೊಡುವ ಸಂಭವ ಇದೆ ಎಂದು ರಾಷ್ಟ್ರಪತಿ ಡಾ. ಶಂಕರ ದಯಾಳ ಶರ್ಮಾ ಅವರು ಇಂದು ಪಾಕ್ನ ಸಮರ ಉನ್ಮತ್ತ ಮನೋಭಾವವನ್ನು ತರಾಟೆಗೆ ತೆಗೆದುಕೊಂಡರು.</p>.<p>ಸಂಸತ್ ಭವನದ ಸೆಂಟ್ರಲ್ ಹಾಲ್ನಲ್ಲಿ ಅವರು ಇಂದು ಹತ್ತನೇ ಲೋಕಸಭೆಯ ಕೊನೆಯ ಮತ್ತು ಸಂಕ್ಷಿಪ್ತ ಬಜೆಟ್ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.</p>.<p>ಹವಾಲ: ರಾವ್ ಹೆಸರು ಬಹಿರಂಗ ಅರ್ಜಿ ತಿರಸ್ಕೃತ</p>.<p>ನವದೆಹಲಿ, ಫೆ. 26 (ಯುಎನ್ಐ)– ಹವಾಲ ಹಗರಣದಲ್ಲಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರ ಬಗ್ಗೆ ಎಸ್.ಕೆ. ಜೈನ್ ನೀಡಿರುವ ಹೇಳಿಕೆಯನ್ನು ಬಹಿರಂಗಪಡಿಸುವಂತೆ ಸಿಬಿಐಗೆ ನಿರ್ದೇಶನ ನೀಡಬೇಕೆಂದು ಕೋರಿದ್ದ ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>