ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಶನಿವಾರ 12.10.1996

Last Updated 11 ಅಕ್ಟೋಬರ್ 2021, 19:31 IST
ಅಕ್ಷರ ಗಾತ್ರ

ಮಾಯಾವತಿಯೇ ಮುಖ್ಯಮಂತ್ರಿ: ಕಾಂಗ್ರೆಸ್ ಷರತ್ತಿಗೆ ರಂಗ ನಕಾರ

ನವದೆಹಲಿ, ಅ. 11 (ಪಿಟಿಐ)– ಉತ್ತರಪ್ರದೇಶದ ಮುಖ್ಯಮಂತ್ರಿ ಹುದ್ದೆಗೆ ಬಿಎಸ್‌ಪಿ ನಾಯಕಿ ಮಾಯಾವತಿ ಅವರಿಗೆ ಕಾಂಗ್ರೆಸ್ ಬೆಂಬಲ ಘೋಷಿಸಿದೆ. ಆದರೆ, ಕಾಂಗ್ರೆಸ್ಸಿನ ಈ ಷರತ್ತಿಗೆ ಸಂಯುಕ್ತರಂಗ ಒಪ್ಪಿಲ್ಲ. ಈ ಮಧ್ಯೆ ಮಾಯಾವತಿಯನ್ನು ಮುಖ್ಯಮಂತ್ರಿ ಮಾಡಲು ಬಿಜೆಪಿ ಸಹಿತ ಯಾರದೇ ಬೆಂಬಲ ಪಡೆಯಲು ತಾವು ಸಿದ್ಧ ಎಂದು ಬಿಎಸ್‌ಪಿ ನಾಯಕ ಕಾನ್ಷಿರಾಂ ಪ್ರಕಟಿಸಿದ್ದು, ಉತ್ತರಪ್ರದೇಶದಲ್ಲಿ ರಾಜಕೀಯ ಸ್ಥಿತಿ ತೀರಾ ಅನಿಶ್ಚಯದ ತಿರುವು ಪಡೆದಿದೆ.

‘ಯಾವುದೇ ಪಕ್ಷ ನಮಗೆ ಅಸ್ಪೃಶ್ಯವಲ್ಲ. ಸರ್ಕಾರ ರಚಿಸಲು ನಾವೂ ಎಲ್ಲ ಯತ್ನಗಳನ್ನು ನಡೆಸಲಿದ್ದೇವೆ’ ಎಂದು ಬಿಜೆಪಿಯೂ ಹೇಳಿದ್ದು, ಈಗ ಎಲ್ಲರ ಕಣ್ಣು ರಾಜ್ಯಪಾಲರ ಮೇಲಿದೆ.

ರಾವ್ ವಿಚಾರಣೆಗೆ ವಿಶೇಷ ಕೋರ್ಟ್

ನವದೆಹಲಿ, ಅ. 11 (ಪಿಟಿಐ, ಯುಎನ್ಐ)– ಪಿ.ವಿ. ನರಸಿಂಹ ರಾವ್ ಆರೋಪಿಯಾಗಿರುವ ಲಕ್ಕೂ ಭಾಯಿ ವಂಚನೆ ಪ್ರಕರಣ ಮತ್ತು ಸೇಂಟ್ ಕಿಟ್ಸ್ ಪ್ರಕರಣದ ವಿಚಾರಣೆಯನ್ನು ದೆಹಲಿಯ ಭದ್ರತಾ ವಲಯಕ್ಕೆ ಸೇರಿದ ವಿಶೇಷ ನ್ಯಾಯಾಲಯದಲ್ಲಿ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT