ನವದೆಹಲಿ, ನೈರುತ್ಯ ರೈಲ್ವೆ ವಲಯವನ್ನು ಬೆಂಗಳೂರಿನಿಂದ ಸ್ಥಳಾಂತರಿಸಿದರೆ ಕರ್ನಾಟಕದಲ್ಲಿ ಕಾನೂನು–ಸುವ್ಯವಸ್ಥೆ ಸಮಸ್ಯೆ ಉಂಟಾಗುವುದಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಇಂದು ಲೋಕಸಭೆಯಲ್ಲಿ ಎಚ್ಚರಿಕೆ ನೀಡಿದರು.
ಬೆಂಗಳೂರಿನಲ್ಲಿ ಈಗಿರುವ ರೈಲ್ವೆ ವಲಯವನ್ನು ಉಳಿಸಿಕೊಂಡು, ಹುಬ್ಬಳ್ಳಿಗೇ ಪ್ರತ್ಯೇಕ
ವಾಗಿ ಮತ್ತೊಂದು ವಲಯವನ್ನು ಮಂಜೂರು ಮಾಡಿ ಎಂದು ಬಲವಾಗಿ ವಾದಿಸಿದರು.
ಪೇಟೆಂಟ್ ಮಸೂದೆಗೆ ಸಂಸತ್ ಅಸ್ತು
ನವದೆಹಲಿ, ಕಾಂಗ್ರೆಸ್ಸೇತರ ವಿರೋಧ ಪಕ್ಷಗಳ ಪ್ರತಿಭಟನೆ ಹಾಗೂ ಸಭಾತ್ಯಾಗದ ನಡುವೆ ವಿವಾದಾತ್ಮಕ ಪೇಟೆಂಟ್ (ತಿದ್ದುಪಡಿ) ಮಸೂದೆಗೆ ರಾಜ್ಯಸಭೆಯಲ್ಲಿ ಇಂದು ಒಪ್ಪಿಗೆ ಸಿಗುವ ಮೂಲಕ ಸಂಸತ್ ಅನುಮೋದನೆ ನೀಡಿದಂತಾಗಿದೆ.