<p><strong>ಗಂಗಾವತಿ: ನದಿ ನೀರು ಮಲಿನ– ಮೂವರ ಸಾವು</strong></p>.<p><strong>ಗಂಗಾವತಿ, ಮೇ 11– </strong>ಹೊಸಪೇಟೆ ಬಳಿಯ ಸಕ್ಕರೆ ಕಾರ್ಖಾನೆಯಿಂದ ವಿಷಪೂರಿತ ರಾಸಾಯನಿಕಗಳನ್ನು ತುಂಗಭದ್ರಾ ನದಿಗೆ ಹಾಕಿದ ಪರಿಣಾಮವಾಗಿ ನದಿ ನೀರು ಮಲಿನವಾಗಿದ್ದು, ಅದನ್ನು ಸೇವಿಸಿದ ಮೂವರು ಗ್ರಾಮಸ್ಥರು ಸಾವನ್ನಪ್ಪಿದ್ದಾರೆ. ಐದು ಜನರ ಸ್ಥಿತಿ ಚಿಂತಾಜನಕವಾಗಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.</p>.<p>8 ಸಾವಿರ ಲೀಟರ್ ಸಾಮರ್ಥ್ಯದ ನಾಲ್ಕು ಟ್ಯಾಂಕರುಗಳಲ್ಲಿ ಈ ರಾಸಾಯನಿಕ ಇತ್ತು. ಆ ಟ್ಯಾಂಕರುಗಳು ಒಡೆದು ಹೋದುದರಿಂದ ರಾಸಾಯನಿಕವನ್ನು ಕಾಲುವೆಗೆ ಬಿಡಲಾಗಿತ್ತು.</p>.<p><strong>ತುಂಗಾ ಮೇಲ್ದಂಡೆ: ಬಾಂಡ್ ಮೂಲಕ ಹಣ ಸಂಗ್ರಹ</strong></p>.<p><strong>ಮಂಗಳೂರು, ಮೇ 11–</strong> ತುಂಗಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಲು ಬಾಂಡ್ಗಳ ಮೂಲಕ ಜನರಿಂದ ಹಣ ಸಂಗ್ರಹಿಸಲು ಸರ್ಕಾರ ಆಲೋಚಿಸುತ್ತಿದೆ ಎಂದು ಭಾರೀ ನೀರಾವರಿ ಸಚಿವ ಕೆ.ಎನ್. ನಾಗೇಗೌಡ ಹೇಳಿದರು.</p>.<p>ಕೃಷ್ಣಾ ಜಲಭಾಗ್ಯ ಬಾಂಡ್ಗಳ ಮೂಲಕ ಕೃಷ್ಣಾ ಮೇಲ್ದಂಡೆ ಯೋಜನೆಗೆ 800 ಕೋಟಿ ರೂ.ಗಳನ್ನು ಸಂಗ್ರಹಿಸಿದ ಹಾಗೆ ತುಂಗಾ ಮೇಲ್ದಂಡೆ ಯೋಜನೆಗೂ ಜನರಿಂದ ಹಣ ಸಂಗ್ರಹಿಸುವ ಪ್ರಸ್ತಾವ ಸಚಿವ ಸಂಪುಟದ ಮುಂದಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ: ನದಿ ನೀರು ಮಲಿನ– ಮೂವರ ಸಾವು</strong></p>.<p><strong>ಗಂಗಾವತಿ, ಮೇ 11– </strong>ಹೊಸಪೇಟೆ ಬಳಿಯ ಸಕ್ಕರೆ ಕಾರ್ಖಾನೆಯಿಂದ ವಿಷಪೂರಿತ ರಾಸಾಯನಿಕಗಳನ್ನು ತುಂಗಭದ್ರಾ ನದಿಗೆ ಹಾಕಿದ ಪರಿಣಾಮವಾಗಿ ನದಿ ನೀರು ಮಲಿನವಾಗಿದ್ದು, ಅದನ್ನು ಸೇವಿಸಿದ ಮೂವರು ಗ್ರಾಮಸ್ಥರು ಸಾವನ್ನಪ್ಪಿದ್ದಾರೆ. ಐದು ಜನರ ಸ್ಥಿತಿ ಚಿಂತಾಜನಕವಾಗಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.</p>.<p>8 ಸಾವಿರ ಲೀಟರ್ ಸಾಮರ್ಥ್ಯದ ನಾಲ್ಕು ಟ್ಯಾಂಕರುಗಳಲ್ಲಿ ಈ ರಾಸಾಯನಿಕ ಇತ್ತು. ಆ ಟ್ಯಾಂಕರುಗಳು ಒಡೆದು ಹೋದುದರಿಂದ ರಾಸಾಯನಿಕವನ್ನು ಕಾಲುವೆಗೆ ಬಿಡಲಾಗಿತ್ತು.</p>.<p><strong>ತುಂಗಾ ಮೇಲ್ದಂಡೆ: ಬಾಂಡ್ ಮೂಲಕ ಹಣ ಸಂಗ್ರಹ</strong></p>.<p><strong>ಮಂಗಳೂರು, ಮೇ 11–</strong> ತುಂಗಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಲು ಬಾಂಡ್ಗಳ ಮೂಲಕ ಜನರಿಂದ ಹಣ ಸಂಗ್ರಹಿಸಲು ಸರ್ಕಾರ ಆಲೋಚಿಸುತ್ತಿದೆ ಎಂದು ಭಾರೀ ನೀರಾವರಿ ಸಚಿವ ಕೆ.ಎನ್. ನಾಗೇಗೌಡ ಹೇಳಿದರು.</p>.<p>ಕೃಷ್ಣಾ ಜಲಭಾಗ್ಯ ಬಾಂಡ್ಗಳ ಮೂಲಕ ಕೃಷ್ಣಾ ಮೇಲ್ದಂಡೆ ಯೋಜನೆಗೆ 800 ಕೋಟಿ ರೂ.ಗಳನ್ನು ಸಂಗ್ರಹಿಸಿದ ಹಾಗೆ ತುಂಗಾ ಮೇಲ್ದಂಡೆ ಯೋಜನೆಗೂ ಜನರಿಂದ ಹಣ ಸಂಗ್ರಹಿಸುವ ಪ್ರಸ್ತಾವ ಸಚಿವ ಸಂಪುಟದ ಮುಂದಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>