<p><strong>ಅಸ್ಸಾಂ ಸೇತುವೆ ಸ್ಫೋಟ: ರಾಜಧಾನಿ ಎಕ್ಸ್ಪ್ರೆಸ್ ಪ್ರಯಾಣಿಕರು ಪಾರು</strong></p>.<p>ಗುವಾಹಟಿ, ಆ. 9 (ಯುಎನ್ಐ)– ಉಲ್ಫಾದವರು ಎಂದು ನಂಬಲಾದ ತೀವ್ರಗಾಮಿಗಳು ಅಸ್ಸಾಂನ ಕೊಕ್ರಜಾರ್ ಹಾಗೂ ಸಲಕಾಟಿ ನಡುವೆ ರೈಲ್ವೆ ಸೇತುವೆಯೊಂದನ್ನು ಸ್ಫೋಟಿಸಿದ್ದಾರೆ.</p>.<p>ಇದರಿಂದ ಉತ್ತರ ಹಾಗೂ ಈಶಾನ್ಯ ರಾಜ್ಯಗಳು ಭಾರತದ ಇತರ ಪ್ರದೇಶಗಳ ಜತೆಗಿನ ರೈಲು ಸಂಪರ್ಕವನ್ನು ಕಡಿದುಕೊಂಡಿವೆ.</p>.<p>ಸ್ವಾತಂತ್ರ್ಯ ದಿನಾಚರಣೆಗೆ ಮೊದಲು ಅಸ್ಸಾಂನಲ್ಲಿ ಭಾರಿ ಕ್ಷೋಭೆಯನ್ನು ನಿರ್ಮಿಸುವ ಪ್ರಯತ್ನವಿದು ಎನ್ನಲಾಗಿದೆ.</p>.<p>ಸೇತುವೆ ಸ್ಫೋಟದ ಕಾರಣ ಸರಕಿನ ರೈಲಿನ ಎಂಜಿನ್ನು ಹಾಗೂ 7 ವ್ಯಾಗನ್ನುಗಳು ಹಳಿ ತಪ್ಪಿದವು.</p>.<p><strong>ಶಿವಮೊಗ್ಗ: ಗೌಡರ ಬಣದಿಂದ ದಳ ಕಚೇರಿ ‘ವಶ’</strong></p>.<p>ಶಿವಮೊಗ್ಗ, ಆ. 9– ಜಿಲ್ಲಾ ಜನತಾ ದಳದ ಕಚೇರಿ ‘ಗಾಂಧಿ ಮಂದಿರ’ವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಣವು ಇಂದು ಬೆಳಿಗ್ಗೆ ತನ್ನ ‘ವಶ’ಕ್ಕೆ ತೆಗೆದುಕೊಂಡು ಜನತಾ ದಳ (ಜಾತ್ಯತೀತ) ಪಕ್ಷದ ಅಧ್ಯಕ್ಷರನ್ನಾಗಿ ಶಿವಮೊಗ್ಗ ತಾಲ್ಲೂಕು ಚಿಕ್ಕಮರಡಿಯ ಎಂ.ಬಿ. ಶಿವಣ್ಣ ಅವರನ್ನು ಆಯ್ಕೆ ಮಾಡಿತು.</p>.<p>ಆಗಸ್ಟ್ ಒಂದರಂದು ದೇವೇಗೌಡರ ಬಣಕ್ಕೆ ಬೆಂಬಲ ವ್ಯಕ್ತಪಡಿಸಿ ಬಹುಮತದ ನಿರ್ಣಯ ಕೈಗೊಂಡ ಜಿಲ್ಲಾ ಜನತಾ ದಳದ ಸಭೆಯಲ್ಲಿ ಈ ಗುಂಪಿನ ಅಧ್ಯಕ್ಷರಾಗಿ ಆಯ್ಕೆಯಾದ ಜಿಲ್ಲಾ ಜನತಾ ದಳದ ಅಧ್ಯಕ್ಷ ವಿ.ರಾಜು ಅವರು ಬೆಂಗಳೂರಿನಲ್ಲಿ ಶನಿವಾರ ನಡೆದ ಏಕತಾ ಸಮಾವೇಶದಲ್ಲಿ ಭಾಗವಹಿಸಿ ತಮ್ಮ ನಿಷ್ಠೆಯನ್ನು ಜೆ.ಎಚ್. ಪಟೇಲರಿಗೆ ಬದಲಾಯಿಸಿದ್ದರಿಂದ ಜಿಲ್ಲೆಯಲ್ಲಿ ಈ ಬೆಳವಣಿಗೆ ಕಂಡುಬಂತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಸ್ಸಾಂ ಸೇತುವೆ ಸ್ಫೋಟ: ರಾಜಧಾನಿ ಎಕ್ಸ್ಪ್ರೆಸ್ ಪ್ರಯಾಣಿಕರು ಪಾರು</strong></p>.<p>ಗುವಾಹಟಿ, ಆ. 9 (ಯುಎನ್ಐ)– ಉಲ್ಫಾದವರು ಎಂದು ನಂಬಲಾದ ತೀವ್ರಗಾಮಿಗಳು ಅಸ್ಸಾಂನ ಕೊಕ್ರಜಾರ್ ಹಾಗೂ ಸಲಕಾಟಿ ನಡುವೆ ರೈಲ್ವೆ ಸೇತುವೆಯೊಂದನ್ನು ಸ್ಫೋಟಿಸಿದ್ದಾರೆ.</p>.<p>ಇದರಿಂದ ಉತ್ತರ ಹಾಗೂ ಈಶಾನ್ಯ ರಾಜ್ಯಗಳು ಭಾರತದ ಇತರ ಪ್ರದೇಶಗಳ ಜತೆಗಿನ ರೈಲು ಸಂಪರ್ಕವನ್ನು ಕಡಿದುಕೊಂಡಿವೆ.</p>.<p>ಸ್ವಾತಂತ್ರ್ಯ ದಿನಾಚರಣೆಗೆ ಮೊದಲು ಅಸ್ಸಾಂನಲ್ಲಿ ಭಾರಿ ಕ್ಷೋಭೆಯನ್ನು ನಿರ್ಮಿಸುವ ಪ್ರಯತ್ನವಿದು ಎನ್ನಲಾಗಿದೆ.</p>.<p>ಸೇತುವೆ ಸ್ಫೋಟದ ಕಾರಣ ಸರಕಿನ ರೈಲಿನ ಎಂಜಿನ್ನು ಹಾಗೂ 7 ವ್ಯಾಗನ್ನುಗಳು ಹಳಿ ತಪ್ಪಿದವು.</p>.<p><strong>ಶಿವಮೊಗ್ಗ: ಗೌಡರ ಬಣದಿಂದ ದಳ ಕಚೇರಿ ‘ವಶ’</strong></p>.<p>ಶಿವಮೊಗ್ಗ, ಆ. 9– ಜಿಲ್ಲಾ ಜನತಾ ದಳದ ಕಚೇರಿ ‘ಗಾಂಧಿ ಮಂದಿರ’ವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಣವು ಇಂದು ಬೆಳಿಗ್ಗೆ ತನ್ನ ‘ವಶ’ಕ್ಕೆ ತೆಗೆದುಕೊಂಡು ಜನತಾ ದಳ (ಜಾತ್ಯತೀತ) ಪಕ್ಷದ ಅಧ್ಯಕ್ಷರನ್ನಾಗಿ ಶಿವಮೊಗ್ಗ ತಾಲ್ಲೂಕು ಚಿಕ್ಕಮರಡಿಯ ಎಂ.ಬಿ. ಶಿವಣ್ಣ ಅವರನ್ನು ಆಯ್ಕೆ ಮಾಡಿತು.</p>.<p>ಆಗಸ್ಟ್ ಒಂದರಂದು ದೇವೇಗೌಡರ ಬಣಕ್ಕೆ ಬೆಂಬಲ ವ್ಯಕ್ತಪಡಿಸಿ ಬಹುಮತದ ನಿರ್ಣಯ ಕೈಗೊಂಡ ಜಿಲ್ಲಾ ಜನತಾ ದಳದ ಸಭೆಯಲ್ಲಿ ಈ ಗುಂಪಿನ ಅಧ್ಯಕ್ಷರಾಗಿ ಆಯ್ಕೆಯಾದ ಜಿಲ್ಲಾ ಜನತಾ ದಳದ ಅಧ್ಯಕ್ಷ ವಿ.ರಾಜು ಅವರು ಬೆಂಗಳೂರಿನಲ್ಲಿ ಶನಿವಾರ ನಡೆದ ಏಕತಾ ಸಮಾವೇಶದಲ್ಲಿ ಭಾಗವಹಿಸಿ ತಮ್ಮ ನಿಷ್ಠೆಯನ್ನು ಜೆ.ಎಚ್. ಪಟೇಲರಿಗೆ ಬದಲಾಯಿಸಿದ್ದರಿಂದ ಜಿಲ್ಲೆಯಲ್ಲಿ ಈ ಬೆಳವಣಿಗೆ ಕಂಡುಬಂತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>