<p><strong>ಗುಜರಾತ್: ಬಿಜೆಪಿ ಸರ್ಕಾರ ಬಿಕ್ಕಟ್ಟಿನಲ್ಲಿ</strong></p>.<p><strong>ಗಾಂಧಿನಗರ, ಆ. 18 (ಪಿಟಿಐ)</strong>– ಪ್ರಮುಖ ಭಿನ್ನಮತೀಯ ನಾಯಕ ಶಂಕರ್ ಸಿಂಗ್ ವಘೇಲಾ ಅವರಿಗೆ ಬೆಂಬಲ ವ್ಯಕ್ತಪಡಿಸಿರುವ ಪಂಚಾಯತ್ ರಾಜ್ ಸಚಿವ ಆತ್ಮರಾಂ ಪಾಟೇಲ್, ಶಿಕ್ಷಣ ಖಾತೆ ಉಪ ಸಚಿವ ಮನಸಿಂಗ್ ಚೌಹಾನ್ ಹಾಗೂ ಈಗಾಗಲೇ ಸಂಪುಟದಿಂದ ಇಂದು ರಾತ್ರಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ.</p>.<p>ಇದರೊಂದಿಗೆ ಗುಜರಾತ್ನಲ್ಲಿ 10 ತಿಂಗಳಿಂನಿಂದ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ತೀವ್ರ ಬಿಕ್ಕಟ್ಟಿಗೆ ಸಿಲುಕಿದೆ.</p>.<p><strong>ಸಿಟಿಬಿಟಿ: ಮತ್ತೆ ತಿದ್ದುಪಡಿ ಮಾಡಲು ಭಾರತದ ಪಟ್ಟು</strong></p>.<p><strong>ಕೌಲಾಲುಪುರ, ಆ. 18(ಪಿಟಿಐ)– </strong>ಉದ್ದೇಶಿತ ಸಮಗ್ರ ಅಣ್ವಸ್ತ್ರ ಪರೀಕ್ಷಾ ನಿಷೇಧ ಒಪ್ಪಂದ (ಸಿಟಿಬಿಟಿ)ವನ್ನು ಎರಡನೇ ಬಾರಿ ತಿದ್ದುಪಡಿ ಮಾಡಲು ಇರುವ ಅಡ್ಡಿ ಏನು ಎನ್ನುವುದು ತನಗೆ ಅರ್ಥವಾಗುತ್ತಿಲ್ಲ ಎಂದು ಭಾರತ ಹೇಳಿದೆ.</p>.<p>ಚೀನಾ ಬಯಸಿದಂತೆ ಈಗಾಗಲೇ ಒಮ್ಮೆ ತಿದ್ದುಪಡಿಯಾಗಿದ್ದು ಈಗ ಎರಡನೇ ಬಾರಿ ಏಕೆ ತಿದ್ದುಪಡಿ ಮಾಡಬಾರದು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಐ.ಕೆ. ಗುಜ್ರಾಲ್ ಅವರು ಪ್ರಶ್ನಿಸಿದ್ದಾರೆ.</p>.<p>ಈ ಕರಡು ಒಪ್ಪಂದ ಭಾರತದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂಬ ಭಾರತದ ನಿಲುವನ್ನು ಅವರು ಪುಸರುಚ್ಚರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಜರಾತ್: ಬಿಜೆಪಿ ಸರ್ಕಾರ ಬಿಕ್ಕಟ್ಟಿನಲ್ಲಿ</strong></p>.<p><strong>ಗಾಂಧಿನಗರ, ಆ. 18 (ಪಿಟಿಐ)</strong>– ಪ್ರಮುಖ ಭಿನ್ನಮತೀಯ ನಾಯಕ ಶಂಕರ್ ಸಿಂಗ್ ವಘೇಲಾ ಅವರಿಗೆ ಬೆಂಬಲ ವ್ಯಕ್ತಪಡಿಸಿರುವ ಪಂಚಾಯತ್ ರಾಜ್ ಸಚಿವ ಆತ್ಮರಾಂ ಪಾಟೇಲ್, ಶಿಕ್ಷಣ ಖಾತೆ ಉಪ ಸಚಿವ ಮನಸಿಂಗ್ ಚೌಹಾನ್ ಹಾಗೂ ಈಗಾಗಲೇ ಸಂಪುಟದಿಂದ ಇಂದು ರಾತ್ರಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ.</p>.<p>ಇದರೊಂದಿಗೆ ಗುಜರಾತ್ನಲ್ಲಿ 10 ತಿಂಗಳಿಂನಿಂದ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ತೀವ್ರ ಬಿಕ್ಕಟ್ಟಿಗೆ ಸಿಲುಕಿದೆ.</p>.<p><strong>ಸಿಟಿಬಿಟಿ: ಮತ್ತೆ ತಿದ್ದುಪಡಿ ಮಾಡಲು ಭಾರತದ ಪಟ್ಟು</strong></p>.<p><strong>ಕೌಲಾಲುಪುರ, ಆ. 18(ಪಿಟಿಐ)– </strong>ಉದ್ದೇಶಿತ ಸಮಗ್ರ ಅಣ್ವಸ್ತ್ರ ಪರೀಕ್ಷಾ ನಿಷೇಧ ಒಪ್ಪಂದ (ಸಿಟಿಬಿಟಿ)ವನ್ನು ಎರಡನೇ ಬಾರಿ ತಿದ್ದುಪಡಿ ಮಾಡಲು ಇರುವ ಅಡ್ಡಿ ಏನು ಎನ್ನುವುದು ತನಗೆ ಅರ್ಥವಾಗುತ್ತಿಲ್ಲ ಎಂದು ಭಾರತ ಹೇಳಿದೆ.</p>.<p>ಚೀನಾ ಬಯಸಿದಂತೆ ಈಗಾಗಲೇ ಒಮ್ಮೆ ತಿದ್ದುಪಡಿಯಾಗಿದ್ದು ಈಗ ಎರಡನೇ ಬಾರಿ ಏಕೆ ತಿದ್ದುಪಡಿ ಮಾಡಬಾರದು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಐ.ಕೆ. ಗುಜ್ರಾಲ್ ಅವರು ಪ್ರಶ್ನಿಸಿದ್ದಾರೆ.</p>.<p>ಈ ಕರಡು ಒಪ್ಪಂದ ಭಾರತದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂಬ ಭಾರತದ ನಿಲುವನ್ನು ಅವರು ಪುಸರುಚ್ಚರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>