<p><strong>ತ್ರಿಪುರಾ: ಜನಾಂಗೀಯ ಗಲಭೆಗೆ ಕನಿಷ್ಠ 18 ಮಂದಿ ಬಲಿ</strong></p>.<p>ಅಗರ್ತಲ, ನ. 19 (ಯುಎನ್ಐ)– ಉತ್ತರ ತ್ರಿಪುರಾದ ಕಾಂಚನಪುರದಲ್ಲಿ ಇಂದು ರಾಷ್ಟ್ರೀಯ ತ್ರಿಪುರಾ ವಿಮೋಚನಾ ರಂಗದ (ಎನ್ಎಲ್ಎಫ್ಟಿ) ಉಗ್ರಗಾಮಿಗಳ ಗುಂಡಿನ ದಾಳಿ ಹಾಗೂ ಅನಂತರ ನಡೆದ ಹಿಂಸಾಚಾರಗಳಲ್ಲಿ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಕನಿಷ್ಠ 18 ಮಂದಿ ಸತ್ತಿದ್ದಾರೆ.</p>.<p>ಇಂದು ಮುಂಜಾನೆ ಕಾಂಚನಪುರ ಬಳಿಯ ಬರಾಹಲ್ದಿ ಗ್ರಾಮಕ್ಕೆ ನುಗ್ಗಿದ ಶಸ್ತ್ರಸಜ್ಜಿತ ಉಗ್ರಗಾಮಿಗಳು ಮನಬಂದಂತೆ ಗುಂಡು ಹಾರಿಸಲು ಆರಂಭಿಸಿದರು. ಆಗ ಇಬ್ಬರು ಮಕ್ಕಳು ಸೇರಿದಂತೆ ಏಳು ಮಂದಿ ಸ್ಥಳದಲ್ಲೇ ಸತ್ತರು. ಈ ಘಟನೆಯಲ್ಲಿ ಇತರ ಐವರು ತೀವ್ರವಾಗಿ ಗಾಯಗೊಂಡರು.</p>.<p><strong>ಸೀಮೆಎಣ್ಣೆ, ಅಡುಗೆ ಅನಿಲ ಬೆಲೆ ಸ್ವಲ್ಪ ಪ್ರಮಾಣ ಇಳಿಕೆ</strong></p>.<p>ನವದೆಹಲಿ, ನ. 19 (ಯುಎನ್ಐ)– ತೃಣಮೂಲ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ ತೀವ್ರ ಒತ್ತಡದ ಫಲವಾಗಿ ಕೇಂದ್ರ ಸರ್ಕಾರವು ಇಂದು ಅಡುಗೆ ಅನಿಲ ಮತ್ತು ಸೀಮೆಎಣ್ಣೆಯ ಹೆಚ್ಚಿಸಿದ ಬೆಲೆಯನ್ನು ಆಂಶಿಕವಾಗಿ ಕಡಿಮೆ ಮಾಡಿದೆ.</p>.<p>ಸೀಮೆಎಣ್ಣೆ ಬೆಲೆ ಪ್ರತಿ ಲೀಟರ್ಗೆ ಒಂದು ರೂಪಾಯಿ ಹಾಗೂ ಅಡುಗೆ ಅನಿಲ ದರವನ್ನು ಸಿಲಿಂಡರ್ ಒಂದಕ್ಕೆ ಹತ್ತು ರೂಪಾಯಿಯಂತೆ ಇಳಿಸಲಾಗಿದೆ. ಇಳಿಸಿರುವ ಬೆಲೆಗಳು ಎಂದಿನಿಂದ ಜಾರಿಗೆ ಬರಲಿವೆ ಎಂಬುದನ್ನು ಅನಂತರ ಪ್ರಕಟಿಸುವ ನಿರೀಕ್ಷೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತ್ರಿಪುರಾ: ಜನಾಂಗೀಯ ಗಲಭೆಗೆ ಕನಿಷ್ಠ 18 ಮಂದಿ ಬಲಿ</strong></p>.<p>ಅಗರ್ತಲ, ನ. 19 (ಯುಎನ್ಐ)– ಉತ್ತರ ತ್ರಿಪುರಾದ ಕಾಂಚನಪುರದಲ್ಲಿ ಇಂದು ರಾಷ್ಟ್ರೀಯ ತ್ರಿಪುರಾ ವಿಮೋಚನಾ ರಂಗದ (ಎನ್ಎಲ್ಎಫ್ಟಿ) ಉಗ್ರಗಾಮಿಗಳ ಗುಂಡಿನ ದಾಳಿ ಹಾಗೂ ಅನಂತರ ನಡೆದ ಹಿಂಸಾಚಾರಗಳಲ್ಲಿ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಕನಿಷ್ಠ 18 ಮಂದಿ ಸತ್ತಿದ್ದಾರೆ.</p>.<p>ಇಂದು ಮುಂಜಾನೆ ಕಾಂಚನಪುರ ಬಳಿಯ ಬರಾಹಲ್ದಿ ಗ್ರಾಮಕ್ಕೆ ನುಗ್ಗಿದ ಶಸ್ತ್ರಸಜ್ಜಿತ ಉಗ್ರಗಾಮಿಗಳು ಮನಬಂದಂತೆ ಗುಂಡು ಹಾರಿಸಲು ಆರಂಭಿಸಿದರು. ಆಗ ಇಬ್ಬರು ಮಕ್ಕಳು ಸೇರಿದಂತೆ ಏಳು ಮಂದಿ ಸ್ಥಳದಲ್ಲೇ ಸತ್ತರು. ಈ ಘಟನೆಯಲ್ಲಿ ಇತರ ಐವರು ತೀವ್ರವಾಗಿ ಗಾಯಗೊಂಡರು.</p>.<p><strong>ಸೀಮೆಎಣ್ಣೆ, ಅಡುಗೆ ಅನಿಲ ಬೆಲೆ ಸ್ವಲ್ಪ ಪ್ರಮಾಣ ಇಳಿಕೆ</strong></p>.<p>ನವದೆಹಲಿ, ನ. 19 (ಯುಎನ್ಐ)– ತೃಣಮೂಲ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ ತೀವ್ರ ಒತ್ತಡದ ಫಲವಾಗಿ ಕೇಂದ್ರ ಸರ್ಕಾರವು ಇಂದು ಅಡುಗೆ ಅನಿಲ ಮತ್ತು ಸೀಮೆಎಣ್ಣೆಯ ಹೆಚ್ಚಿಸಿದ ಬೆಲೆಯನ್ನು ಆಂಶಿಕವಾಗಿ ಕಡಿಮೆ ಮಾಡಿದೆ.</p>.<p>ಸೀಮೆಎಣ್ಣೆ ಬೆಲೆ ಪ್ರತಿ ಲೀಟರ್ಗೆ ಒಂದು ರೂಪಾಯಿ ಹಾಗೂ ಅಡುಗೆ ಅನಿಲ ದರವನ್ನು ಸಿಲಿಂಡರ್ ಒಂದಕ್ಕೆ ಹತ್ತು ರೂಪಾಯಿಯಂತೆ ಇಳಿಸಲಾಗಿದೆ. ಇಳಿಸಿರುವ ಬೆಲೆಗಳು ಎಂದಿನಿಂದ ಜಾರಿಗೆ ಬರಲಿವೆ ಎಂಬುದನ್ನು ಅನಂತರ ಪ್ರಕಟಿಸುವ ನಿರೀಕ್ಷೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>