<p><strong>ರಾಜ್ಯ ಆಡಳಿತ ನ್ಯಾಯ ಮಂಡಳಿ ರದ್ದು</strong></p>.<p>ಬೆಂಗಳೂರು, ಮಾರ್ಚ್ 28– ಕರ್ನಾಟಕ ಆಡಳಿತ ನ್ಯಾಯಮಂಡಳಿಯನ್ನು ರದ್ದು ಮಾಡಲು ಇಂದು ನಡೆದ ಸಚಿವ ಸಂಪುಟ ಸಭೆಯು ನಿರ್ಧರಿಸಿತು. ಸುಪ್ರೀಂಕೋರ್ಟ್ನ ಈಚಿನ ತೀರ್ಪಿನ ಹಿನ್ನೆಲೆಯಲ್ಲಿ ತೆಗೆದು ಕೊಂಡಿರುವ ಈ ನಿರ್ಧಾರ ಈ ವರ್ಷದ ಆಗಸ್ಟ್ ಒಂದರಿಂದ ಜಾರಿಗೆ ಬರಲಿದೆ.</p>.<p>ಸಂಪುಟ ಸಭೆಯ ನಂತರ ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದ ವಾರ್ತಾ ಸಚಿವ ಎಂ.ಸಿ.ನಾಣಯ್ಯ, ಇನ್ನು ಮುಂದೆ ಸರ್ಕಾರಿ ಸೇವಾ ವಿಷಯದ ವಾಜ್ಯಗಳ ಸಂಬಂಧದಲ್ಲಿ ನೇರವಾಗಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಹೇಳಿದರು.</p>.<p>ಆಡಳಿತ ನ್ಯಾಯಮಂಡಳಿಯಲ್ಲಿ ಬಾಕಿ ಇರುವ ಪ್ರಕರಣಗಳನ್ನು ಹೈಕೋರ್ಟ್ಗೆ ವರ್ಗಾಯಿಸಲಾಗುವುದು. ನ್ಯಾಯಮಂಡಳಿ ರದ್ದು ತೀರ್ಮಾನವನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಲಾಗುವುದು ಎಂದು ಅವರು ವಿವರಿಸಿದರು.</p>.<p><strong>ಟಿಡಿಪಿ ಬೆಂಬಲ: ವಾಜಪೇಯಿ ಸರ್ಕಾರಕ್ಕೆ ವಿಶ್ವಾಸಮತ</strong></p>.<p>ನವದೆಹಲಿ, ಮಾರ್ಚ್ 28– ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ಸಮ್ಮಿಶ್ರ ಸರ್ಕಾರ ಇಂದು ರಾತ್ರಿ 274 ಮತಗಳನ್ನು ಗಳಿಸುವ ಮೂಲಕ ವಿಶ್ವಾಸ ಮತವನ್ನು ಪಡೆಯಿತು.</p>.<p>ಲೋಕಸಭೆಯ ಒಟ್ಟು 535 ಸದಸ್ಯರು ಮತದಲ್ಲಿ ಭಾಗವಹಿಸಿದ್ದರು. ವಿಶ್ವಾಸ ಮತವನ್ನು ವಿರೋಧಿಸಿ 261 ಮತಗಳು ಬಿದ್ದಿವು.</p>.<p>ಕೊನೇಗಳಿಗೆಯಲ್ಲಿ ರೆಲುಗುದೇಶಂ ಪಕ್ಷ ಸರ್ಕಾರದ ಪರವಾಗಿ ತಳೆದ ನಿಲುವು ಮತ್ತು ಮತದಾನದಲ್ಲಿ ತಟಸ್ಥವಾಗಿ ಉಳಿಯಲು ನ್ಯಾಷನಲ್ ಕಾನ್ಫೆರೆನ್ಸ್ ಪಕ್ಷ ಕೈಗೊಂಡ ನಿರ್ಧಾರದಿಂದ ಸರ್ಕಾರ ವಿಶ್ವಾಸಮತ ಪಡೆಯಲು ಸಾಧ್ಯವಾಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜ್ಯ ಆಡಳಿತ ನ್ಯಾಯ ಮಂಡಳಿ ರದ್ದು</strong></p>.<p>ಬೆಂಗಳೂರು, ಮಾರ್ಚ್ 28– ಕರ್ನಾಟಕ ಆಡಳಿತ ನ್ಯಾಯಮಂಡಳಿಯನ್ನು ರದ್ದು ಮಾಡಲು ಇಂದು ನಡೆದ ಸಚಿವ ಸಂಪುಟ ಸಭೆಯು ನಿರ್ಧರಿಸಿತು. ಸುಪ್ರೀಂಕೋರ್ಟ್ನ ಈಚಿನ ತೀರ್ಪಿನ ಹಿನ್ನೆಲೆಯಲ್ಲಿ ತೆಗೆದು ಕೊಂಡಿರುವ ಈ ನಿರ್ಧಾರ ಈ ವರ್ಷದ ಆಗಸ್ಟ್ ಒಂದರಿಂದ ಜಾರಿಗೆ ಬರಲಿದೆ.</p>.<p>ಸಂಪುಟ ಸಭೆಯ ನಂತರ ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದ ವಾರ್ತಾ ಸಚಿವ ಎಂ.ಸಿ.ನಾಣಯ್ಯ, ಇನ್ನು ಮುಂದೆ ಸರ್ಕಾರಿ ಸೇವಾ ವಿಷಯದ ವಾಜ್ಯಗಳ ಸಂಬಂಧದಲ್ಲಿ ನೇರವಾಗಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಹೇಳಿದರು.</p>.<p>ಆಡಳಿತ ನ್ಯಾಯಮಂಡಳಿಯಲ್ಲಿ ಬಾಕಿ ಇರುವ ಪ್ರಕರಣಗಳನ್ನು ಹೈಕೋರ್ಟ್ಗೆ ವರ್ಗಾಯಿಸಲಾಗುವುದು. ನ್ಯಾಯಮಂಡಳಿ ರದ್ದು ತೀರ್ಮಾನವನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಲಾಗುವುದು ಎಂದು ಅವರು ವಿವರಿಸಿದರು.</p>.<p><strong>ಟಿಡಿಪಿ ಬೆಂಬಲ: ವಾಜಪೇಯಿ ಸರ್ಕಾರಕ್ಕೆ ವಿಶ್ವಾಸಮತ</strong></p>.<p>ನವದೆಹಲಿ, ಮಾರ್ಚ್ 28– ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ಸಮ್ಮಿಶ್ರ ಸರ್ಕಾರ ಇಂದು ರಾತ್ರಿ 274 ಮತಗಳನ್ನು ಗಳಿಸುವ ಮೂಲಕ ವಿಶ್ವಾಸ ಮತವನ್ನು ಪಡೆಯಿತು.</p>.<p>ಲೋಕಸಭೆಯ ಒಟ್ಟು 535 ಸದಸ್ಯರು ಮತದಲ್ಲಿ ಭಾಗವಹಿಸಿದ್ದರು. ವಿಶ್ವಾಸ ಮತವನ್ನು ವಿರೋಧಿಸಿ 261 ಮತಗಳು ಬಿದ್ದಿವು.</p>.<p>ಕೊನೇಗಳಿಗೆಯಲ್ಲಿ ರೆಲುಗುದೇಶಂ ಪಕ್ಷ ಸರ್ಕಾರದ ಪರವಾಗಿ ತಳೆದ ನಿಲುವು ಮತ್ತು ಮತದಾನದಲ್ಲಿ ತಟಸ್ಥವಾಗಿ ಉಳಿಯಲು ನ್ಯಾಷನಲ್ ಕಾನ್ಫೆರೆನ್ಸ್ ಪಕ್ಷ ಕೈಗೊಂಡ ನಿರ್ಧಾರದಿಂದ ಸರ್ಕಾರ ವಿಶ್ವಾಸಮತ ಪಡೆಯಲು ಸಾಧ್ಯವಾಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>