<p><strong>ಕಾಶ್ಮೀರ: ರಾಜಕೀಯ ಪರಿಹಾರ ಸೂತ್ರ ಸಿದ್ಧ</strong></p>.<p>ನವದೆಹಲಿ, ನ. 3 (ಯುಎನ್ಐ)– ದಿವಂಗತ ಇಂದಿರಾ ಗಾಂಧಿ ಮತ್ತು ಷೇಕ್ ಅಬ್ದುಲ್ಲಾ ನಡುವೆ 1975ರಲ್ಲಿ ಆಗಿರುವ ಒಪ್ಪಂದದ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜಕೀಯ ಪರಿಹಾರ ಸೂತ್ರ ನೀಡಲು ಕೇಂದ್ರ ಸರ್ಕಾರವು ಮುಂದೆ ಬಂದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.</p>.<p>ಈ ಮಧ್ಯೆ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸ್ಥಳದಲ್ಲೇ ಪರಿಸ್ಥಿತಿ ಅಧ್ಯಯನ ಮಾಡಲು ಚುನಾವಣಾ ಆಯೋಗದ ಎಲ್ಲ ಮೂವರು ಸದಸ್ಯರು ಶ್ರೀನಗರಕ್ಕೆ ಈ ತಿಂಗಳ 8ರಂದು ಭೇಟಿ ನೀಡಲಿದ್ದಾರೆ.</p>.<p><strong>ಹಟ್ಟಿ ಚಿನ್ನದ ಗಣಿಯಲ್ಲಿ ಹಠಾತ್ ಮುಷ್ಕರ</strong></p>.<p><strong>ರಾಯಚೂರು, ನ. 3– ಕೆಲಸದ ಮರು ವಿಂಗಡಣೆಯನ್ನು ಪ್ರತಿಭಟಿಸಿ ಹಟ್ಟಿ </strong><strong>ಚಿನ್ನದ ಗಣಿ ಕಾರ್ಮಿಕರು ಇಂದು</strong><strong>ಹಠಾತ್ ಮುಷ್ಕರ ಆರಂಭಿಸಿದ್ದರಿಂದ ಚಿನ್ನದ ಉತ್ಪಾದನೆ ಸೇರಿದಂತೆ ಗಣಿಯ ಎಲ್ಲ ಕೆಲಸ ಕಾರ್ಯಗಳು </strong><strong>ಸ್ಥಗಿತಗೊಂಡಿವೆ.</strong></p>.<p>ಯಾವುದೇ ಮುನ್ಸೂಚನೆ ಇಲ್ಲದೆ ಕಾರ್ಮಿಕರು ಮುಷ್ಕರ ಆರಂಭಿಸಿದ್ದು ಚಿನ್ನದ ಗಣಿ ಆಡಳಿತಕ್ಕೆ ದಿಗ್ಭ್ರಮೆ ಉಂಟು ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಶ್ಮೀರ: ರಾಜಕೀಯ ಪರಿಹಾರ ಸೂತ್ರ ಸಿದ್ಧ</strong></p>.<p>ನವದೆಹಲಿ, ನ. 3 (ಯುಎನ್ಐ)– ದಿವಂಗತ ಇಂದಿರಾ ಗಾಂಧಿ ಮತ್ತು ಷೇಕ್ ಅಬ್ದುಲ್ಲಾ ನಡುವೆ 1975ರಲ್ಲಿ ಆಗಿರುವ ಒಪ್ಪಂದದ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜಕೀಯ ಪರಿಹಾರ ಸೂತ್ರ ನೀಡಲು ಕೇಂದ್ರ ಸರ್ಕಾರವು ಮುಂದೆ ಬಂದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.</p>.<p>ಈ ಮಧ್ಯೆ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸ್ಥಳದಲ್ಲೇ ಪರಿಸ್ಥಿತಿ ಅಧ್ಯಯನ ಮಾಡಲು ಚುನಾವಣಾ ಆಯೋಗದ ಎಲ್ಲ ಮೂವರು ಸದಸ್ಯರು ಶ್ರೀನಗರಕ್ಕೆ ಈ ತಿಂಗಳ 8ರಂದು ಭೇಟಿ ನೀಡಲಿದ್ದಾರೆ.</p>.<p><strong>ಹಟ್ಟಿ ಚಿನ್ನದ ಗಣಿಯಲ್ಲಿ ಹಠಾತ್ ಮುಷ್ಕರ</strong></p>.<p><strong>ರಾಯಚೂರು, ನ. 3– ಕೆಲಸದ ಮರು ವಿಂಗಡಣೆಯನ್ನು ಪ್ರತಿಭಟಿಸಿ ಹಟ್ಟಿ </strong><strong>ಚಿನ್ನದ ಗಣಿ ಕಾರ್ಮಿಕರು ಇಂದು</strong><strong>ಹಠಾತ್ ಮುಷ್ಕರ ಆರಂಭಿಸಿದ್ದರಿಂದ ಚಿನ್ನದ ಉತ್ಪಾದನೆ ಸೇರಿದಂತೆ ಗಣಿಯ ಎಲ್ಲ ಕೆಲಸ ಕಾರ್ಯಗಳು </strong><strong>ಸ್ಥಗಿತಗೊಂಡಿವೆ.</strong></p>.<p>ಯಾವುದೇ ಮುನ್ಸೂಚನೆ ಇಲ್ಲದೆ ಕಾರ್ಮಿಕರು ಮುಷ್ಕರ ಆರಂಭಿಸಿದ್ದು ಚಿನ್ನದ ಗಣಿ ಆಡಳಿತಕ್ಕೆ ದಿಗ್ಭ್ರಮೆ ಉಂಟು ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>