<p><strong>ಈರುಳ್ಳಿ ರಫ್ತು ಮೇಲಿನ ನಿಷೇಧ ರದ್ದು</strong></p>.<p>ನವದೆಹಲಿ, ಡಿ. 18 (ಯುಎನ್ಐ)– ಈರುಳ್ಳಿ ರಫ್ತು ಮೇಲಿನ ನಿಷೇಧವನ್ನು ರದ್ದುಗೊಳಿಸಲಾಗಿದೆ.</p>.<p>ಈರುಳ್ಳಿ ಪೂರೈಕೆ ತೃಪ್ತಿಕರವಾದ ಹಾಗೂ ಬೆಲೆಯಲ್ಲಿ ಕಂಡು ಬಂದ ಇಳಿಕೆ ಪ್ರವೃತ್ತಿಯ ಹಿನ್ನೆಲೆಯಲ್ಲಿ ಸರ್ಕಾರವು ಈ ಕ್ರಮಕೈಗೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿದವು.</p>.<p>ವಾಣಿಜ್ಯ ಹಾಗೂ ನಾಗರಿಕ ಪೂರೈಕೆ ಖಾತೆ ಹಾಗೂ ರಾಷ್ಟ್ರೀಯ ಬೇಸಾಯ ಸಹಕಾರಿ ಮಾರುಕಟ್ಟೆ ಒಕ್ಕೂಟದ (ಎನ್ಎಎಫ್ಇಡಿ–ನಫೆಡ್) ಉನ್ನತ ಮಟ್ಟದ ಸಭೆಯಲ್ಲಿ ಈರುಳ್ಳಿ ನಿಷೇಧ ರದ್ದುಗೊಳಿಸುವ ನಿರ್ಣಯ ಕೈಗೊಳ್ಳಲಾಯಿತು. ನಫೆಡ್ ಮೂಲಕವಷ್ಟೆ ಈರುಳ್ಳಿ ರಫ್ತಾಗುತ್ತದೆ.</p>.<p><strong>ವಿಷಯ ಸ್ಥಿತಿಯಲ್ಲಿ ಜೇಲ್ಸಿಂಗ್</strong></p>.<p>ಚಂಡಿಗಢ, ಡಿ. 18 (ಯುಎನ್ಐ)– ಅಸ್ವಸ್ಥರಾಗಿರುವ ಮಾಜಿ ರಾಷ್ಟ್ರಪತಿ ಗ್ಯಾನಿ ಜೇಲ್ಸಿಂಗ್ ಅವರ ಸ್ಥಿತಿ ವಿಷಮಿಸಿದೆ ಎಂದು ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ವಿ.ಕೆ. ಕಾಕ್ ತಿಳಿಸಿದ್ದಾರೆ.</p>.<p>ನಿನ್ನೆ ರಾತ್ರಿ ಅವರ ರಕ್ತದೊತ್ತಡದಲ್ಲಿ ತೀವ್ರ ಏರಿಳಿತ ಉಂಟಾಯಿತು. ನಡುಕ (ಕನ್ವಲ್ಷನ್)ದ ಸ್ಥಿತಿ ತಲೆದೋರಿತು, ಆದರೆ ಔಷಧೋಪಚಾರದಿಂದ ಒತ್ತಡವನ್ನು ನಿಯಂತ್ರಣಕ್ಕೆ ತರಲಾಯಿತು ಎಂದು ಅವರು ಹೇಳಿದ್ದಾರೆ.</p>.<p>ಗ್ಯಾನಿ ಅವರಿಗೆ ಬಂದಿರುವ ಜ್ವರ, ಕಾಮಾಲೆ ಸ್ಥಿತಿ ಹಾಗೇ ಇದ್ದು ಕೃತಕ ಉಸಿರಾಟ ಮುಂದುವರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.</p>.<p><strong>ಪಂಡರೀಬಾಯಿಗೆ ಅಪಘಾತದಲ್ಲಿ ಗಾಯ</strong></p>.<p>ಬೆಂಗಳೂರು, ಡಿ. 11– ಕನ್ನಡ ಚಿತ್ರರಂಗದ ಖ್ಯಾತ ನಟಿ ಪಂಡರೀಬಾಯಿ ಅವರು ಇಂದು ತಮಿಳು ನಾಡಿನ ವೆಲ್ಲೂರಿನಲ್ಲಿ ಅಪಘಾತಕ್ಕೆ ತುತ್ತಾಗಿ ಅಲ್ಲಿನ ಆಸ್ಪತ್ರೆಯೊಂದಕ್ಕೆ ದಾಖಲಾಗಿರುವುದಾಗಿ ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ.</p>.<p>ಮದರಾಸಿನಿಂದ ಬೆಂಗಳೂರಿಗೆ ಹಿಂತಿರುಗುತ್ತಿರುವಾಗ ನಡುವೆ ಇಂದು ಮುಂಜಾನೆ 3 ಗಂಟೆಗೆ ವೆಲ್ಲೂರಿನಲ್ಲಿ ಉಪಹಾರಕ್ಕೆಂದು ಇಳಿದ ಪಂಡರೀಬಾಯಿ ರಸ್ತೆ ದಾಟುತ್ತಿದ್ದಾಗ ಅವರನ್ನು ವಾಹನವೊಂದು ಉಜ್ಜಿಕೊಂಡು ಹೋದ ಕಾರಣ ಅವರು ತೀವ್ರವಾಗಿ ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಈರುಳ್ಳಿ ರಫ್ತು ಮೇಲಿನ ನಿಷೇಧ ರದ್ದು</strong></p>.<p>ನವದೆಹಲಿ, ಡಿ. 18 (ಯುಎನ್ಐ)– ಈರುಳ್ಳಿ ರಫ್ತು ಮೇಲಿನ ನಿಷೇಧವನ್ನು ರದ್ದುಗೊಳಿಸಲಾಗಿದೆ.</p>.<p>ಈರುಳ್ಳಿ ಪೂರೈಕೆ ತೃಪ್ತಿಕರವಾದ ಹಾಗೂ ಬೆಲೆಯಲ್ಲಿ ಕಂಡು ಬಂದ ಇಳಿಕೆ ಪ್ರವೃತ್ತಿಯ ಹಿನ್ನೆಲೆಯಲ್ಲಿ ಸರ್ಕಾರವು ಈ ಕ್ರಮಕೈಗೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿದವು.</p>.<p>ವಾಣಿಜ್ಯ ಹಾಗೂ ನಾಗರಿಕ ಪೂರೈಕೆ ಖಾತೆ ಹಾಗೂ ರಾಷ್ಟ್ರೀಯ ಬೇಸಾಯ ಸಹಕಾರಿ ಮಾರುಕಟ್ಟೆ ಒಕ್ಕೂಟದ (ಎನ್ಎಎಫ್ಇಡಿ–ನಫೆಡ್) ಉನ್ನತ ಮಟ್ಟದ ಸಭೆಯಲ್ಲಿ ಈರುಳ್ಳಿ ನಿಷೇಧ ರದ್ದುಗೊಳಿಸುವ ನಿರ್ಣಯ ಕೈಗೊಳ್ಳಲಾಯಿತು. ನಫೆಡ್ ಮೂಲಕವಷ್ಟೆ ಈರುಳ್ಳಿ ರಫ್ತಾಗುತ್ತದೆ.</p>.<p><strong>ವಿಷಯ ಸ್ಥಿತಿಯಲ್ಲಿ ಜೇಲ್ಸಿಂಗ್</strong></p>.<p>ಚಂಡಿಗಢ, ಡಿ. 18 (ಯುಎನ್ಐ)– ಅಸ್ವಸ್ಥರಾಗಿರುವ ಮಾಜಿ ರಾಷ್ಟ್ರಪತಿ ಗ್ಯಾನಿ ಜೇಲ್ಸಿಂಗ್ ಅವರ ಸ್ಥಿತಿ ವಿಷಮಿಸಿದೆ ಎಂದು ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ವಿ.ಕೆ. ಕಾಕ್ ತಿಳಿಸಿದ್ದಾರೆ.</p>.<p>ನಿನ್ನೆ ರಾತ್ರಿ ಅವರ ರಕ್ತದೊತ್ತಡದಲ್ಲಿ ತೀವ್ರ ಏರಿಳಿತ ಉಂಟಾಯಿತು. ನಡುಕ (ಕನ್ವಲ್ಷನ್)ದ ಸ್ಥಿತಿ ತಲೆದೋರಿತು, ಆದರೆ ಔಷಧೋಪಚಾರದಿಂದ ಒತ್ತಡವನ್ನು ನಿಯಂತ್ರಣಕ್ಕೆ ತರಲಾಯಿತು ಎಂದು ಅವರು ಹೇಳಿದ್ದಾರೆ.</p>.<p>ಗ್ಯಾನಿ ಅವರಿಗೆ ಬಂದಿರುವ ಜ್ವರ, ಕಾಮಾಲೆ ಸ್ಥಿತಿ ಹಾಗೇ ಇದ್ದು ಕೃತಕ ಉಸಿರಾಟ ಮುಂದುವರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.</p>.<p><strong>ಪಂಡರೀಬಾಯಿಗೆ ಅಪಘಾತದಲ್ಲಿ ಗಾಯ</strong></p>.<p>ಬೆಂಗಳೂರು, ಡಿ. 11– ಕನ್ನಡ ಚಿತ್ರರಂಗದ ಖ್ಯಾತ ನಟಿ ಪಂಡರೀಬಾಯಿ ಅವರು ಇಂದು ತಮಿಳು ನಾಡಿನ ವೆಲ್ಲೂರಿನಲ್ಲಿ ಅಪಘಾತಕ್ಕೆ ತುತ್ತಾಗಿ ಅಲ್ಲಿನ ಆಸ್ಪತ್ರೆಯೊಂದಕ್ಕೆ ದಾಖಲಾಗಿರುವುದಾಗಿ ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ.</p>.<p>ಮದರಾಸಿನಿಂದ ಬೆಂಗಳೂರಿಗೆ ಹಿಂತಿರುಗುತ್ತಿರುವಾಗ ನಡುವೆ ಇಂದು ಮುಂಜಾನೆ 3 ಗಂಟೆಗೆ ವೆಲ್ಲೂರಿನಲ್ಲಿ ಉಪಹಾರಕ್ಕೆಂದು ಇಳಿದ ಪಂಡರೀಬಾಯಿ ರಸ್ತೆ ದಾಟುತ್ತಿದ್ದಾಗ ಅವರನ್ನು ವಾಹನವೊಂದು ಉಜ್ಜಿಕೊಂಡು ಹೋದ ಕಾರಣ ಅವರು ತೀವ್ರವಾಗಿ ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>