ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ| ಭಾನುವಾರ, 5–11–1995

Last Updated 4 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಕರಾವಳಿಯಲ್ಲಿ ವಿದ್ಯುತ್‌ ಯೋಜನೆಗೆ ಪರಿಸರ ಖಾತೆ ಅನುಮತಿ ಇಲ್ಲ

ಬೆಂಗಳೂರು, ನ. 4– ದಕ್ಷಿಣ ಕನ್ನಡದ ಕರಾವಳಿ ಪ್ರದೇಶದಲ್ಲಿ ಕೊಜೆಂಟ್ರಿಕ್ಸ್‌ ವಿದ್ಯುತ್‌ ಸ್ಥಾವರವೂ ಸೇರಿದಂತೆ ಯಾವುದೇ ಬೃಹತ್‌ ಉದ್ಯಮಕ್ಕೂ ರಾಜ್ಯದ ಪರಿಸರ ಇಲಾಖೆ ತನ್ನ ಅನುಮತಿಯನ್ನು ಕೊಟ್ಟಿಲ್ಲ ಎಂದು ಇಲಾಖೆಯ ಕಾರ್ಯದರ್ಶಿ ಎ.ಎನ್‌.ಯಲ್ಲಪ್ಪ ರೆಡ್ಡಿ ಇಂದು ಇಲ್ಲಿ ಹೇಳಿದರು.

ಜೀವಜಾಲ ಸಮತೋಲನ ಮತ್ತು ಪರಿಸರ ದೃಷ್ಟಿಯಿಂದ ಬಹುಸೂಕ್ಷ್ಮ ಪ್ರದೇಶವಾಗಿರುವ ಇದು ಬೃಹತ್‌ ಕೈಗಾರಿಕೆಗಳ ಸ್ಥಾಪನೆಗೆ ಸೂಕ್ತವಲ್ಲದ ಜಾಗ ಎನ್ನುವುದು ಇಲಾಖೆಯ ಅಭಿಮತ ಎಂದು ಅವರು ವಿವರಿಸಿದರು.

ರಕ್ಷಿತ ಪ್ರಾಣಿಗಳು ಭಕ್ಷಣೆಗೆ

ಬೀಜಿಂಗ್‌, ನ. 4 (ಡಿಪಿಎ)– ವಿನಾಶದ ಅಂಚಿನಲ್ಲಿರುವ ಪ್ರಾಣಿಗಳ ಮಾಂಸ ಬಳಸುತ್ತಿದ್ದ ಕಾರಣಕ್ಕೆ ಚೀನಾ ದೇಶದ ಅಧಿಕಾರಿಗಳು 19 ಹೋಟೆಲು ಹಾಗೂ ರೆಸ್ಟೊರೆಂಟ್‌ಗಳ ಲೈಸೆನ್ಸ್‌ ಅನ್ನು ರದ್ದು ಮಾಡಿದ ಘಟನೆ ಹೈನಾನ್‌ನ ದಕ್ಷಿಣ ದ್ವೀಪದಲ್ಲಿ ನಡೆದಿದೆ.

ಮೂರು ತಿಂಗಳ ಕಾಲ ಬಂದರು, ರೈಲು ನಿಲ್ದಾಣ, ರೈತರ ಮಾರುಕಟ್ಟೆ, ಅಂಗಡಿಗಳ ಮೇಲೆ ದಾಳಿ ನಡೆಸಿ 6,309 ವನ್ಯಪ್ರಾಣಿಗಳ ಮಾಂಸ ವಶಪಡಿಸಿಕೊಳ್ಳಲಾಯಿತು. ಇದರಲ್ಲಿ, ಸಂರಕ್ಷಿಸಬೇಕಾದ ಪ್ರಾಣಿಗಳ ಪಟ್ಟಿಯಲ್ಲಿ ಮೊದಲ ಆದ್ಯತೆಯಾಗಿರುವ 106 ಮತ್ತು ಎರಡನೇ ಆದ್ಯತೆಯಾಗಿರುವ 3,114 ಪ್ರಾಣಿಗಳ ಮಾಂಸ ಸೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT