<p><strong>ಬೆಂಗಳೂರು ಮಹಾನಗರಪಾಲಿಕೆ ಚುನಾವಣೆ ಅನಿರ್ದಿಷ್ಟ ಮುಂದಕ್ಕೆ</strong></p>.<p><strong>ಬೆಂಗಳೂರು, ಜ. 6–</strong> ಬೆಂಗಳೂರು ಮಹಾನಗರಪಾಲಿಕೆಯ ಚುನಾವಣೆ ಪ್ರಕ್ರಿಯೆಯನ್ನು ರಾಜ್ಯ ಚುನಾವಣಾ ಆಯೋಗವು ಇಂದು ರದ್ದುಪಡಿಸಿದೆ. ಈ ಚುನಾವಣೆ ನಿಗದಿಯಾಗಿದ್ದಂತೆ ಈ ತಿಂಗಳ 17ರಂದು ನಡೆಯಬೇಕಾಗಿತ್ತು.</p>.<p>ತಮಿಳುನಾಡಿಗೆ ನೀರು ಬಿಟ್ಟಿರುವುದರಿಂದ ರಾಜ್ಯದಾದ್ಯಂತ ಉದ್ಭವಿಸಿರುವ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಹಿನ್ನೆಲೆಯಲ್ಲಿ ಚುನಾವಣೆ ಸಂದರ್ಭದ ರಕ್ಷಣಾ ಕಾರ್ಯಕ್ಕೆ ಅಗತ್ಯ ಪೊಲೀಸ್ ಸಿಬ್ಬಂದಿ ಒದಗಿಸಲು ಸಾಧ್ಯವಿಲ್ಲ. ಹಾಗಾಗಿ ಫೆಬ್ರುವರಿ ಕೊನೆ ವಾರದವರೆವಿಗೆ ಚುನಾವಣೆ ಮುಂದೂಡಬೇಕೆಂಬ ಸರ್ಕಾರದ ಕೋರಿಕೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.</p>.<p><strong>‘ರ್ಯಾಂಡಿ’ಯ ಬೆಂಗಳೂರು ನಂಟು</strong></p>.<p><strong>ನವದೆಹಲಿ, ಜ. 6 (ಪಿಟಿಐ)–</strong> ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ವಿಮಾನದಿಂದ ಭಾರಿ ಪ್ರಮಾಣದ ಅತ್ಯಾಧುನಿಕ ಶಸ್ತ್ರಾಸ್ತ್ರ ಎಸೆದ ಪ್ರಕರಣದ ಇಬ್ಬರು ‘ಮುಖ್ಯ ಸಂಚುಕೋರರನ್ನು’ ಸಿಬಿಐ ಇಂದು ಗುರುತಿಸುವಲ್ಲಿ ಯಶಸ್ವಿಯಾಗಿದೆ. ಇದರಿಂದಾಗಿ ಈ ನಿಗೂಢ ಪ್ರಕರಣದ ಪತ್ತೆಯಲ್ಲಿ ಗಮನಾರ್ಹ ಮುನ್ನಡೆ ಸಾಧ್ಯವಾಗಿದೆ.</p>.<p>ಈ ಇಬ್ಬರು ಸಂಚುಕೋರರು ಬೆಂಗಳೂರಿನ ತಪ್ಪು ವಿಳಾಸ ನೀಡಿ ಪಾಸ್ಪೋರ್ಟ್ ಪಡೆದ ಸತ್ಯನಾರಾಯಣ ಗೌಡ ಅಲಿಯಾಸ್ ರ್ಯಾಂಡಿ ಮತ್ತು ದೇವಮಾಣಿಕ್ಯಂ ಆನಂದ ಅಲಿಯಾಸ್ ದೀಪಕ್ ಎಂದು ಸಿಬಿಐ ವಕ್ತಾರರು ತಿಳಿಸಿದರು.</p>.<p>ಇವರಿಬ್ಬರೂ ತಲೆತಪ್ಪಿಸಿಕೊಂಡಿದ್ದು ಇವರ ಪತ್ತೆಗೆ ರಾಷ್ಟ್ರವ್ಯಾಪಿ ಎಚ್ಚರಿಕೆ ನೋಟಿಸ್ ಹೊರಡಿಸಲಾಗಿದೆ. ವಿಮಾನ ನಿಲ್ದಾಣ ಮತ್ತು ಬಂದರು ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡಲಾಗಿದೆ. ರ್ಯಾಂಡಿಯ ಇತ್ತೀಚಿನ ಭಾವಚಿತ್ರ ಸಿಬಿಐಗೆ ಲಭ್ಯವಾಗಿದೆ.</p>.<p>ರ್ಯಾಂಡಿ ಅಲಿಯಾಸ್ ಸತ್ಯನಾರಾಯಣ ಗೌಡ ಬೆಂಗಳೂರು ಪಾಸ್ಪೋರ್ಟ್ ಕಚೇರಿಯಿಂದ ಕಳೆದ ಜೂನ್ 29ರಂದು ಪಾಸ್ಪೋರ್ಟ್ (ಕ್ರಮಾಂಕ ಆರ್ 458418) ಪಡೆದುಕೊಂಡಿದ್ದಾನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು ಮಹಾನಗರಪಾಲಿಕೆ ಚುನಾವಣೆ ಅನಿರ್ದಿಷ್ಟ ಮುಂದಕ್ಕೆ</strong></p>.<p><strong>ಬೆಂಗಳೂರು, ಜ. 6–</strong> ಬೆಂಗಳೂರು ಮಹಾನಗರಪಾಲಿಕೆಯ ಚುನಾವಣೆ ಪ್ರಕ್ರಿಯೆಯನ್ನು ರಾಜ್ಯ ಚುನಾವಣಾ ಆಯೋಗವು ಇಂದು ರದ್ದುಪಡಿಸಿದೆ. ಈ ಚುನಾವಣೆ ನಿಗದಿಯಾಗಿದ್ದಂತೆ ಈ ತಿಂಗಳ 17ರಂದು ನಡೆಯಬೇಕಾಗಿತ್ತು.</p>.<p>ತಮಿಳುನಾಡಿಗೆ ನೀರು ಬಿಟ್ಟಿರುವುದರಿಂದ ರಾಜ್ಯದಾದ್ಯಂತ ಉದ್ಭವಿಸಿರುವ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಹಿನ್ನೆಲೆಯಲ್ಲಿ ಚುನಾವಣೆ ಸಂದರ್ಭದ ರಕ್ಷಣಾ ಕಾರ್ಯಕ್ಕೆ ಅಗತ್ಯ ಪೊಲೀಸ್ ಸಿಬ್ಬಂದಿ ಒದಗಿಸಲು ಸಾಧ್ಯವಿಲ್ಲ. ಹಾಗಾಗಿ ಫೆಬ್ರುವರಿ ಕೊನೆ ವಾರದವರೆವಿಗೆ ಚುನಾವಣೆ ಮುಂದೂಡಬೇಕೆಂಬ ಸರ್ಕಾರದ ಕೋರಿಕೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.</p>.<p><strong>‘ರ್ಯಾಂಡಿ’ಯ ಬೆಂಗಳೂರು ನಂಟು</strong></p>.<p><strong>ನವದೆಹಲಿ, ಜ. 6 (ಪಿಟಿಐ)–</strong> ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ವಿಮಾನದಿಂದ ಭಾರಿ ಪ್ರಮಾಣದ ಅತ್ಯಾಧುನಿಕ ಶಸ್ತ್ರಾಸ್ತ್ರ ಎಸೆದ ಪ್ರಕರಣದ ಇಬ್ಬರು ‘ಮುಖ್ಯ ಸಂಚುಕೋರರನ್ನು’ ಸಿಬಿಐ ಇಂದು ಗುರುತಿಸುವಲ್ಲಿ ಯಶಸ್ವಿಯಾಗಿದೆ. ಇದರಿಂದಾಗಿ ಈ ನಿಗೂಢ ಪ್ರಕರಣದ ಪತ್ತೆಯಲ್ಲಿ ಗಮನಾರ್ಹ ಮುನ್ನಡೆ ಸಾಧ್ಯವಾಗಿದೆ.</p>.<p>ಈ ಇಬ್ಬರು ಸಂಚುಕೋರರು ಬೆಂಗಳೂರಿನ ತಪ್ಪು ವಿಳಾಸ ನೀಡಿ ಪಾಸ್ಪೋರ್ಟ್ ಪಡೆದ ಸತ್ಯನಾರಾಯಣ ಗೌಡ ಅಲಿಯಾಸ್ ರ್ಯಾಂಡಿ ಮತ್ತು ದೇವಮಾಣಿಕ್ಯಂ ಆನಂದ ಅಲಿಯಾಸ್ ದೀಪಕ್ ಎಂದು ಸಿಬಿಐ ವಕ್ತಾರರು ತಿಳಿಸಿದರು.</p>.<p>ಇವರಿಬ್ಬರೂ ತಲೆತಪ್ಪಿಸಿಕೊಂಡಿದ್ದು ಇವರ ಪತ್ತೆಗೆ ರಾಷ್ಟ್ರವ್ಯಾಪಿ ಎಚ್ಚರಿಕೆ ನೋಟಿಸ್ ಹೊರಡಿಸಲಾಗಿದೆ. ವಿಮಾನ ನಿಲ್ದಾಣ ಮತ್ತು ಬಂದರು ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡಲಾಗಿದೆ. ರ್ಯಾಂಡಿಯ ಇತ್ತೀಚಿನ ಭಾವಚಿತ್ರ ಸಿಬಿಐಗೆ ಲಭ್ಯವಾಗಿದೆ.</p>.<p>ರ್ಯಾಂಡಿ ಅಲಿಯಾಸ್ ಸತ್ಯನಾರಾಯಣ ಗೌಡ ಬೆಂಗಳೂರು ಪಾಸ್ಪೋರ್ಟ್ ಕಚೇರಿಯಿಂದ ಕಳೆದ ಜೂನ್ 29ರಂದು ಪಾಸ್ಪೋರ್ಟ್ (ಕ್ರಮಾಂಕ ಆರ್ 458418) ಪಡೆದುಕೊಂಡಿದ್ದಾನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>