ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ: ಶನಿವಾರ, 6–1–1996

Last Updated 5 ಜನವರಿ 2021, 19:30 IST
ಅಕ್ಷರ ಗಾತ್ರ

ಕಾವೇರಿ: ತುಮಕೂರು, ಶಿವಮೊಗ್ಗಕ್ಕೂ ಹಬ್ಬಿದ ಚಳವಳಿ

ಬೆಂಗಳೂರು, ಜ. 5- ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವುದನ್ನು ಪ್ರತಿಭಟಿಸಿ ಮೈಸೂರು, ಮಂಡ್ಯ ಜಿಲ್ಲೆಯ ಕೆಲವೆಡೆ ಯಶಸ್ವಿ ಬಂದ್‌ ಆಚರಿಸಲಾಗಿದೆ. ಬಹುತೇಕ ಮೈಸೂರು, ಮಂಡ್ಯ ಜಿಲ್ಲೆಗೆ ಮೀಸಲಾಗಿದ್ದ ಕಾವೇರಿ ಚಳವಳಿ ಇಂದು ಶಿವಮೊಗ್ಗ, ಭದ್ರಾವತಿ ಹಾಗೂ ತುಮಕೂರಿಗೂ ವ್ಯಾಪಿಸಿದೆ.

ಮೈಸೂರು ನಗರದಲ್ಲಿ ಅಂಗಡಿ–ಮುಂಗಟ್ಟು, ಚಿತ್ರಮಂದಿರಗಳು ಸಂಪೂರ್ಣ ಮುಚ್ಚಿದ್ದವು. ನಗರ ಹಾಗೂ ಗ್ರಾಮಾಂತರ ಬಸ್ಸುಗಳ ಸಂಚಾರ ಸ್ಥಗಿತಗೊಂಡಿತ್ತು. ಮಂಡ್ಯ ಜಿಲ್ಲೆಯ ಕೆ.ಎಂ. ದೊಡ್ಡಿ, ಮಳವಳ್ಳಿ, ಶ್ರೀರಂಗಪಟ್ಟಣ ಮತ್ತು ಕೆರಗೋಡಿನಲ್ಲಿ ಬಂದ್‌ ಯಶಸ್ವಿಯಾಯಿತು.

ಬೆಂಗಳೂರು ಪಾಲಿಕೆ ಚುನಾವಣೆ ಅನಿಶ್ಚಿತ

ಬೆಂಗಳೂರು, ಜ. 5– ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ಅನಿಶ್ಚಿತವಾಗಿದ್ದು, ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗದ ನಡುವೆ ಶೀತಲ ಸಮರ ನಡೆಯುತ್ತಿದೆ.

ತಮಿಳುನಾಡಿಗೆ ನೀರು ಬಿಟ್ಟಿರುವುದರಿಂದ ಕಾನೂನು ಸುವ್ಯವಸ್ಥೆ ಹದಗೆಡಬಹುದು ಎಂಬ ಕಾರಣ ನೀಡಿ ಚುನಾವಣೆ ಮುಂದೂಡುವುದು ಸೂಕ್ತ ಎಂಬ ನಿಲುವು ಸರ್ಕಾರದ್ದು. ಚುನಾವಣೆಗೆ ಇನ್ನೂ ಹನ್ನೆರಡು ದಿನಗಳಿರುವಾಗ ಇಲ್ಲದ ಪರಿಸ್ಥಿತಿ ಊಹಿಸಿ ಆತುರದ ಕ್ರಮ ಸಮಂಜಸವಲ್ಲ ಎಂಬುದು ಆಯೋಗದ ಬಿಗಿಪಟ್ಟು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT