<p><strong>ಕಾವೇರಿ: ತುಮಕೂರು, ಶಿವಮೊಗ್ಗಕ್ಕೂ ಹಬ್ಬಿದ ಚಳವಳಿ</strong></p>.<p><strong>ಬೆಂಗಳೂರು, ಜ. 5- </strong>ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವುದನ್ನು ಪ್ರತಿಭಟಿಸಿ ಮೈಸೂರು, ಮಂಡ್ಯ ಜಿಲ್ಲೆಯ ಕೆಲವೆಡೆ ಯಶಸ್ವಿ ಬಂದ್ ಆಚರಿಸಲಾಗಿದೆ. ಬಹುತೇಕ ಮೈಸೂರು, ಮಂಡ್ಯ ಜಿಲ್ಲೆಗೆ ಮೀಸಲಾಗಿದ್ದ ಕಾವೇರಿ ಚಳವಳಿ ಇಂದು ಶಿವಮೊಗ್ಗ, ಭದ್ರಾವತಿ ಹಾಗೂ ತುಮಕೂರಿಗೂ ವ್ಯಾಪಿಸಿದೆ.</p>.<p>ಮೈಸೂರು ನಗರದಲ್ಲಿ ಅಂಗಡಿ–ಮುಂಗಟ್ಟು, ಚಿತ್ರಮಂದಿರಗಳು ಸಂಪೂರ್ಣ ಮುಚ್ಚಿದ್ದವು. ನಗರ ಹಾಗೂ ಗ್ರಾಮಾಂತರ ಬಸ್ಸುಗಳ ಸಂಚಾರ ಸ್ಥಗಿತಗೊಂಡಿತ್ತು. ಮಂಡ್ಯ ಜಿಲ್ಲೆಯ ಕೆ.ಎಂ. ದೊಡ್ಡಿ, ಮಳವಳ್ಳಿ, ಶ್ರೀರಂಗಪಟ್ಟಣ ಮತ್ತು ಕೆರಗೋಡಿನಲ್ಲಿ ಬಂದ್ ಯಶಸ್ವಿಯಾಯಿತು.</p>.<p><strong>ಬೆಂಗಳೂರು ಪಾಲಿಕೆ ಚುನಾವಣೆ ಅನಿಶ್ಚಿತ</strong></p>.<p><strong>ಬೆಂಗಳೂರು, ಜ. 5– </strong>ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ಅನಿಶ್ಚಿತವಾಗಿದ್ದು, ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗದ ನಡುವೆ ಶೀತಲ ಸಮರ ನಡೆಯುತ್ತಿದೆ.</p>.<p>ತಮಿಳುನಾಡಿಗೆ ನೀರು ಬಿಟ್ಟಿರುವುದರಿಂದ ಕಾನೂನು ಸುವ್ಯವಸ್ಥೆ ಹದಗೆಡಬಹುದು ಎಂಬ ಕಾರಣ ನೀಡಿ ಚುನಾವಣೆ ಮುಂದೂಡುವುದು ಸೂಕ್ತ ಎಂಬ ನಿಲುವು ಸರ್ಕಾರದ್ದು. ಚುನಾವಣೆಗೆ ಇನ್ನೂ ಹನ್ನೆರಡು ದಿನಗಳಿರುವಾಗ ಇಲ್ಲದ ಪರಿಸ್ಥಿತಿ ಊಹಿಸಿ ಆತುರದ ಕ್ರಮ ಸಮಂಜಸವಲ್ಲ ಎಂಬುದು ಆಯೋಗದ ಬಿಗಿಪಟ್ಟು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾವೇರಿ: ತುಮಕೂರು, ಶಿವಮೊಗ್ಗಕ್ಕೂ ಹಬ್ಬಿದ ಚಳವಳಿ</strong></p>.<p><strong>ಬೆಂಗಳೂರು, ಜ. 5- </strong>ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವುದನ್ನು ಪ್ರತಿಭಟಿಸಿ ಮೈಸೂರು, ಮಂಡ್ಯ ಜಿಲ್ಲೆಯ ಕೆಲವೆಡೆ ಯಶಸ್ವಿ ಬಂದ್ ಆಚರಿಸಲಾಗಿದೆ. ಬಹುತೇಕ ಮೈಸೂರು, ಮಂಡ್ಯ ಜಿಲ್ಲೆಗೆ ಮೀಸಲಾಗಿದ್ದ ಕಾವೇರಿ ಚಳವಳಿ ಇಂದು ಶಿವಮೊಗ್ಗ, ಭದ್ರಾವತಿ ಹಾಗೂ ತುಮಕೂರಿಗೂ ವ್ಯಾಪಿಸಿದೆ.</p>.<p>ಮೈಸೂರು ನಗರದಲ್ಲಿ ಅಂಗಡಿ–ಮುಂಗಟ್ಟು, ಚಿತ್ರಮಂದಿರಗಳು ಸಂಪೂರ್ಣ ಮುಚ್ಚಿದ್ದವು. ನಗರ ಹಾಗೂ ಗ್ರಾಮಾಂತರ ಬಸ್ಸುಗಳ ಸಂಚಾರ ಸ್ಥಗಿತಗೊಂಡಿತ್ತು. ಮಂಡ್ಯ ಜಿಲ್ಲೆಯ ಕೆ.ಎಂ. ದೊಡ್ಡಿ, ಮಳವಳ್ಳಿ, ಶ್ರೀರಂಗಪಟ್ಟಣ ಮತ್ತು ಕೆರಗೋಡಿನಲ್ಲಿ ಬಂದ್ ಯಶಸ್ವಿಯಾಯಿತು.</p>.<p><strong>ಬೆಂಗಳೂರು ಪಾಲಿಕೆ ಚುನಾವಣೆ ಅನಿಶ್ಚಿತ</strong></p>.<p><strong>ಬೆಂಗಳೂರು, ಜ. 5– </strong>ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ಅನಿಶ್ಚಿತವಾಗಿದ್ದು, ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗದ ನಡುವೆ ಶೀತಲ ಸಮರ ನಡೆಯುತ್ತಿದೆ.</p>.<p>ತಮಿಳುನಾಡಿಗೆ ನೀರು ಬಿಟ್ಟಿರುವುದರಿಂದ ಕಾನೂನು ಸುವ್ಯವಸ್ಥೆ ಹದಗೆಡಬಹುದು ಎಂಬ ಕಾರಣ ನೀಡಿ ಚುನಾವಣೆ ಮುಂದೂಡುವುದು ಸೂಕ್ತ ಎಂಬ ನಿಲುವು ಸರ್ಕಾರದ್ದು. ಚುನಾವಣೆಗೆ ಇನ್ನೂ ಹನ್ನೆರಡು ದಿನಗಳಿರುವಾಗ ಇಲ್ಲದ ಪರಿಸ್ಥಿತಿ ಊಹಿಸಿ ಆತುರದ ಕ್ರಮ ಸಮಂಜಸವಲ್ಲ ಎಂಬುದು ಆಯೋಗದ ಬಿಗಿಪಟ್ಟು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>