<p><strong>ಸಿಂಧ್ಯಾಗೆ ಸಾರಿಗೆ, ಬಸವಣ್ಣೆಪ್ಪ ಆಹಾರ, ಲೀಲಾದೇವಿ ಪ್ರವಾಸ, ರೇವಣ್ಣ ವಸತಿ</strong></p>.<p><strong>ಬೆಂಗಳೂರು, ಜೂನ್ 6–</strong> ಕುತೂಹಲ ಕೆರಳಿಸಿದ್ದ ಸಚಿವ ಖಾತೆ ಹಂಚಿಕೆಯಲ್ಲಿ ಪಿ.ಜಿ.ಆರ್. ಸಿಂಧ್ಯಾ ಅವರಿಂದ ಗೃಹ ಖಾತೆ ಕಸಿದುಕೊಂಡು ಅವರಿಗೆ ಪ್ರಿಯವಾದ ಸಾರಿಗೆ ಇಲಾಖೆ ನೀಡಿರುವ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರು ವಿದ್ಯುತ್ ಖಾತೆಯನ್ನು ತಮ್ಮಲ್ಲೇ ಉಳಿಸಿಕೊಂಡು ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಣಕಾಸು ಇಲಾಖೆಯನ್ನೇ ಕೊಟ್ಟಿದ್ದಾರೆ.</p>.<p>ಎಂ.ಪಿ. ಪ್ರಕಾಶ್ಗೆ ಗ್ರಾಮೀಣಾಭಿವೃದ್ಧಿ– ಪಂಚಾಯತ್ ರಾಜ್, ಮಧ್ಯಮ ಹಾಗೂ ಭಾರಿ ಕೈಗಾರಿಕೆಯನ್ನು ಆರ್.ವಿ.ದೇಶಪಾಂಡೆ, ಕೃಷಿಯನ್ನು ಸಿ.ಬೈರೇಗೌಡ ಅವರಿಗೆ ನೀಡುವ ಮೂಲಕ ನೂತನ ಸಚಿವ ಸಂಪುಟ ಮಹತ್ತರ ಬದಲಾವಣೆಗಳನ್ನು ತೋರದಿದ್ದರೂ ಲೇಪನವನ್ನು ಪಡೆದಿದೆ.</p>.<p>ರಾಜ್ಯದಲ್ಲಿ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಬಗ್ಗೆ ಸರ್ಕಾರ ಬದ್ಧವಾಗಿದೆ ಎಂಬುದನ್ನು ತೋರಲು ಇದಕ್ಕಾಗಿಯೇ ಪ್ರತ್ಯೇಕ ಖಾತೆ ಸೃಷ್ಟಿಸಿರುವುದು ವಿಶೇಷವಾಗಿದೆ.</p>.<p><strong>ಸಂಪುಟ ವಿಸ್ತರಣೆ ಅತೃಪ್ತಿ; 16 ಶಾಸಕರ ರಾಜೀನಾಮೆ</strong></p>.<p><strong>ಬೆಂಗಳೂರು, ಜೂನ್ 6–</strong> ಜೆ.ಎಚ್.ಪಟೇಲ್ ನೇತೃತ್ವದ ಸಚಿವ ಸಂಪುಟ ಪ್ರಾತಿನಿಧಿಕವಲ್ಲ ಮತ್ತು ಅಸಮತೋಲನದಿಂದ ಕೂಡಿದೆ ಎಂದು ಆರೋಪಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವವರ ಸಂಖ್ಯೆ 16ಕ್ಕೆ ಏರಿದೆ. ಆದರೆ ಈ ರಾಜೀನಾಮೆ ಪತ್ರಗಳು ನಿಯಮ ಪ್ರಕಾರ ಇಲ್ಲದಿರುವುದರಿಂದ ಅವುಗಳ ಅಂಗೀಕಾರ ಸಾಧ್ಯವಿಲ್ಲ ಎಂದು ವಿಧಾನಸಭೆ ಅಧ್ಯಕ್ಷ ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.</p>.<p>ಈ ಪೈಕಿ ಐವರು ಶಾಸಕರು ತಾವು ರಾಜೀನಾಮೆ ನೀಡುತ್ತಿರುವುದಾಗಿ ಟೆಲಿಫೋನ್ ಮೂಲಕ ಹೇಳಿದ್ದಾರೆ. ಉಳಿದವರು ಬರೆದು ಕಳಿಸಿದ್ದರಾದರೂ ಅದು ಇರಬೇಕಾದ ರೀತಿಯಲ್ಲಿ ಇಲ್ಲ ಎಂದು ತಮ್ಮನ್ನು ಭೇಟಿಯಾದ ವರದಿಗಾರರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂಧ್ಯಾಗೆ ಸಾರಿಗೆ, ಬಸವಣ್ಣೆಪ್ಪ ಆಹಾರ, ಲೀಲಾದೇವಿ ಪ್ರವಾಸ, ರೇವಣ್ಣ ವಸತಿ</strong></p>.<p><strong>ಬೆಂಗಳೂರು, ಜೂನ್ 6–</strong> ಕುತೂಹಲ ಕೆರಳಿಸಿದ್ದ ಸಚಿವ ಖಾತೆ ಹಂಚಿಕೆಯಲ್ಲಿ ಪಿ.ಜಿ.ಆರ್. ಸಿಂಧ್ಯಾ ಅವರಿಂದ ಗೃಹ ಖಾತೆ ಕಸಿದುಕೊಂಡು ಅವರಿಗೆ ಪ್ರಿಯವಾದ ಸಾರಿಗೆ ಇಲಾಖೆ ನೀಡಿರುವ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರು ವಿದ್ಯುತ್ ಖಾತೆಯನ್ನು ತಮ್ಮಲ್ಲೇ ಉಳಿಸಿಕೊಂಡು ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಣಕಾಸು ಇಲಾಖೆಯನ್ನೇ ಕೊಟ್ಟಿದ್ದಾರೆ.</p>.<p>ಎಂ.ಪಿ. ಪ್ರಕಾಶ್ಗೆ ಗ್ರಾಮೀಣಾಭಿವೃದ್ಧಿ– ಪಂಚಾಯತ್ ರಾಜ್, ಮಧ್ಯಮ ಹಾಗೂ ಭಾರಿ ಕೈಗಾರಿಕೆಯನ್ನು ಆರ್.ವಿ.ದೇಶಪಾಂಡೆ, ಕೃಷಿಯನ್ನು ಸಿ.ಬೈರೇಗೌಡ ಅವರಿಗೆ ನೀಡುವ ಮೂಲಕ ನೂತನ ಸಚಿವ ಸಂಪುಟ ಮಹತ್ತರ ಬದಲಾವಣೆಗಳನ್ನು ತೋರದಿದ್ದರೂ ಲೇಪನವನ್ನು ಪಡೆದಿದೆ.</p>.<p>ರಾಜ್ಯದಲ್ಲಿ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಬಗ್ಗೆ ಸರ್ಕಾರ ಬದ್ಧವಾಗಿದೆ ಎಂಬುದನ್ನು ತೋರಲು ಇದಕ್ಕಾಗಿಯೇ ಪ್ರತ್ಯೇಕ ಖಾತೆ ಸೃಷ್ಟಿಸಿರುವುದು ವಿಶೇಷವಾಗಿದೆ.</p>.<p><strong>ಸಂಪುಟ ವಿಸ್ತರಣೆ ಅತೃಪ್ತಿ; 16 ಶಾಸಕರ ರಾಜೀನಾಮೆ</strong></p>.<p><strong>ಬೆಂಗಳೂರು, ಜೂನ್ 6–</strong> ಜೆ.ಎಚ್.ಪಟೇಲ್ ನೇತೃತ್ವದ ಸಚಿವ ಸಂಪುಟ ಪ್ರಾತಿನಿಧಿಕವಲ್ಲ ಮತ್ತು ಅಸಮತೋಲನದಿಂದ ಕೂಡಿದೆ ಎಂದು ಆರೋಪಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವವರ ಸಂಖ್ಯೆ 16ಕ್ಕೆ ಏರಿದೆ. ಆದರೆ ಈ ರಾಜೀನಾಮೆ ಪತ್ರಗಳು ನಿಯಮ ಪ್ರಕಾರ ಇಲ್ಲದಿರುವುದರಿಂದ ಅವುಗಳ ಅಂಗೀಕಾರ ಸಾಧ್ಯವಿಲ್ಲ ಎಂದು ವಿಧಾನಸಭೆ ಅಧ್ಯಕ್ಷ ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.</p>.<p>ಈ ಪೈಕಿ ಐವರು ಶಾಸಕರು ತಾವು ರಾಜೀನಾಮೆ ನೀಡುತ್ತಿರುವುದಾಗಿ ಟೆಲಿಫೋನ್ ಮೂಲಕ ಹೇಳಿದ್ದಾರೆ. ಉಳಿದವರು ಬರೆದು ಕಳಿಸಿದ್ದರಾದರೂ ಅದು ಇರಬೇಕಾದ ರೀತಿಯಲ್ಲಿ ಇಲ್ಲ ಎಂದು ತಮ್ಮನ್ನು ಭೇಟಿಯಾದ ವರದಿಗಾರರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>