<p><strong>ದುಬಾರಿಯಾದ ಸ್ನಾತಕೋತ್ತರ ಮಾಹಿತಿ ತಂತ್ರಜ್ಞಾನ ಶಿಕ್ಷಣ</strong></p>.<p>ಮಂಗಳೂರು, ಸೆಪ್ಟೆಂಬರ್ 12– ವಿಶ್ವವಿದ್ಯಾಲಯಗಳಲ್ಲಿ ಲಭ್ಯವಾಗುವ ಮಾಹಿತಿ ತಂತ್ರಜ್ಞಾನ ಕುರಿತ ಅಧ್ಯಯನ ಸಾಮಾನ್ಯ ಆದಾಯ ವರ್ಗಕ್ಕೆ ಎಟುಕದ ರೀತಿಯಲ್ಲಿ ಶುಲ್ಕ ನಿಗದಿಪಡಿಸಿ ಆದೇಶ ಹೊರಡಿಸುವ ಮೂಲಕ ಸ್ನಾತಕೋತ್ತರ ಶಿಕ್ಷಣ ಎಲ್ಲರಿಗೂ ಸಲ್ಲ ಎಂಬಂಥ ಸ್ಥಿತಿಯನ್ನು ರಾಜ್ಯ ಸರ್ಕಾರ ಸೃಷ್ಟಿಸಿದೆ.</p>.<p>ಮಂಗಳೂರು ವಿಶ್ವವಿದ್ಯಾಲಯದ ಎಂಬಿಎ ಮತ್ತು ಕಂಪ್ಯೂಟರ್ ಅನ್ವಯ ಕುರಿತ ಎಂಸಿಎ ಪದವಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ನಿಗದಿಪಡಿಸಿದ ಶುಲ್ಕ ಯಾವ ವೃತ್ತಿಶಿಕ್ಷಣ ಕೋರ್ಸ್ಗೂ ಕಡಿಮೆ ಇಲ್ಲದಷ್ಟು ದುಬಾರಿಯಾಗಿದೆ.</p>.<p><strong>ಕಪಿಲ್ ರಾಜೀನಾಮೆ</strong></p>.<p>ನವದೆಹಲಿ, ಸೆಪ್ಟೆಂಬರ್ 12– ಕಪಿಲ್ದೇವ್ ಅವರು, ಭಾರತ ಕ್ರಿಕೆಟ್ ತಂಡದ ಕೋಚ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.</p>.<p>ಚೆನ್ನೈನಲ್ಲಿರುವ ಭಾರತ ಸಂಭವನೀಯರ ತಂಡಕ್ಕೆ ತರಬೇತಿ ನೀಡಲು ತೆರಳಬೇಕೆಂದು ಬಿಸಿಸಿಐ ಅಧ್ಯಕ್ಷ ವಿ.ಸಿ. ಮುತ್ತಯ್ಯ, ಕಪಿಲ್ದೇವ್ಗೆ ಸೂಚನೆ ನೀಡಿದ ಬೆನ್ನಲ್ಲಿಯೇ ಕಪಿಲ್ ತಮ್ಮ ರಾಜೀನಾಮೆ ಪತ್ರವನ್ನು ಮುತ್ತಯ್ಯ ಅವರಿಗೆ ಕಳುಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದುಬಾರಿಯಾದ ಸ್ನಾತಕೋತ್ತರ ಮಾಹಿತಿ ತಂತ್ರಜ್ಞಾನ ಶಿಕ್ಷಣ</strong></p>.<p>ಮಂಗಳೂರು, ಸೆಪ್ಟೆಂಬರ್ 12– ವಿಶ್ವವಿದ್ಯಾಲಯಗಳಲ್ಲಿ ಲಭ್ಯವಾಗುವ ಮಾಹಿತಿ ತಂತ್ರಜ್ಞಾನ ಕುರಿತ ಅಧ್ಯಯನ ಸಾಮಾನ್ಯ ಆದಾಯ ವರ್ಗಕ್ಕೆ ಎಟುಕದ ರೀತಿಯಲ್ಲಿ ಶುಲ್ಕ ನಿಗದಿಪಡಿಸಿ ಆದೇಶ ಹೊರಡಿಸುವ ಮೂಲಕ ಸ್ನಾತಕೋತ್ತರ ಶಿಕ್ಷಣ ಎಲ್ಲರಿಗೂ ಸಲ್ಲ ಎಂಬಂಥ ಸ್ಥಿತಿಯನ್ನು ರಾಜ್ಯ ಸರ್ಕಾರ ಸೃಷ್ಟಿಸಿದೆ.</p>.<p>ಮಂಗಳೂರು ವಿಶ್ವವಿದ್ಯಾಲಯದ ಎಂಬಿಎ ಮತ್ತು ಕಂಪ್ಯೂಟರ್ ಅನ್ವಯ ಕುರಿತ ಎಂಸಿಎ ಪದವಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ನಿಗದಿಪಡಿಸಿದ ಶುಲ್ಕ ಯಾವ ವೃತ್ತಿಶಿಕ್ಷಣ ಕೋರ್ಸ್ಗೂ ಕಡಿಮೆ ಇಲ್ಲದಷ್ಟು ದುಬಾರಿಯಾಗಿದೆ.</p>.<p><strong>ಕಪಿಲ್ ರಾಜೀನಾಮೆ</strong></p>.<p>ನವದೆಹಲಿ, ಸೆಪ್ಟೆಂಬರ್ 12– ಕಪಿಲ್ದೇವ್ ಅವರು, ಭಾರತ ಕ್ರಿಕೆಟ್ ತಂಡದ ಕೋಚ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.</p>.<p>ಚೆನ್ನೈನಲ್ಲಿರುವ ಭಾರತ ಸಂಭವನೀಯರ ತಂಡಕ್ಕೆ ತರಬೇತಿ ನೀಡಲು ತೆರಳಬೇಕೆಂದು ಬಿಸಿಸಿಐ ಅಧ್ಯಕ್ಷ ವಿ.ಸಿ. ಮುತ್ತಯ್ಯ, ಕಪಿಲ್ದೇವ್ಗೆ ಸೂಚನೆ ನೀಡಿದ ಬೆನ್ನಲ್ಲಿಯೇ ಕಪಿಲ್ ತಮ್ಮ ರಾಜೀನಾಮೆ ಪತ್ರವನ್ನು ಮುತ್ತಯ್ಯ ಅವರಿಗೆ ಕಳುಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>