<p><strong>ರಾಜ್ಯದಲ್ಲಿ ಶೀಘ್ರವೇ 4 ಹೊಸ ಜಿಲ್ಲೆ: ಪಟೇಲ್</strong></p>.<p>ರಾಯಚೂರು, ಅ. 3– ನಾಲ್ಕು ಹೊಸ ಜಿಲ್ಲೆಗಳನ್ನು ರಚಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಇಂದು ಇಲ್ಲಿ ಹೇಳಿದರು.</p>.<p>ವಿಧಾನಸಭೆ ಉಪಚುನಾವಣೆಗಾಗಿ ಪಕ್ಷದ ಅಭ್ಯರ್ಥಿ ಪರ ಯಲ್ಬುರ್ಗದಲ್ಲಿ ಬಹಿರಂಗ ಸಭೆಯಲ್ಲಿ ಪಾಲ್ಗೊಂಡ ನಂತರ ಮುಖ್ಯ ಮಂತ್ರಿ ಅವರು ಯಲ್ಬುರ್ಗ ತಾಲ್ಲೂಕಿನ ಕುಕನೂರಿನಲ್ಲಿ ವರದಿಗಾರರೊಂದಿಗೆ ಮಾತನಾಡುತ್ತಾ, ಈ ವಿಷಯ ತಿಳಿಸಿದರು. ಆದರೆ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಯಾದೀತು ಎಂಬ ದೃಷ್ಟಿಯಿಂದ ಉದ್ದೇಶಿತ ಈ ಜಿಲ್ಲೆಗಳು ಯಾವುವು ಎಂಬುದನ್ನು ಹೇಳ ಬಯಸಲಿಲ್ಲ.</p>.<p>ಹೊಸ ಜಿಲ್ಲೆಗಳನ್ನು ರಚಿಸುವುದಕ್ಕೆ ಸರ್ಕಾರದ ಕಾಲಮಿತಿ ಏನು ಎಂಬುದನ್ನೂ ಅವರು ತಿಳಿಸಲಿಲ್ಲ. ಕೊಪ್ಪಳ, ಬಾಗಲಕೋಟೆ, ಧಾರವಾಡ ದಕ್ಷಿಣ ಹಾಗೂ ದಾವಣಗೆರೆ ಜಿಲ್ಲೆಗಳನ್ನು ರಚಿಸಬೇಕು ಎಂಬ ಬೇಡಿಕೆ ಹಲವು ದಿನಗಳಿಂದ ಇರುವುದನ್ನು ಇಲ್ಲಿ ಸ್ಮರಿಸಬಹುದು.</p>.<p><strong>ಸಮಸ್ಯೆ ತಂದ ಉತ್ತಮ ಫಸಲು</strong></p>.<p>ಬೆಂಗಳೂರು, ಅ. 3– ರಾಜ್ಯದಲ್ಲಿ ಈ ಬಾರಿ ಭರ್ಜರಿ ಆಲೂಗಡ್ಡೆ ಬೆಳೆ ಬಂದಿದೆ. ಈರುಳ್ಳಿಯೂ ಅಷ್ಟೇ; ಜನಸಾಮಾನ್ಯರು ದಿನವೂ ಬಳಸುವ ಈ ತರಕಾರಿ ಉತ್ತಮ ಫಲಸು ಬಂದದ್ದು ಸಂತೋಷ ಬದಲು ಹಲವು ಸಮಸ್ಯೆಗಳನ್ನೇ ತಂದಿದೆ.</p>.<p>ರಾಜ್ಯ ಕೃಷಿ ಸಚಿವ ಸಿ. ಬೈರೇಗೌಡರ ಪ್ರಕಾರ ಒಟ್ಟು 47,500 ಹೆಕ್ಟೇರುಗಳಲ್ಲಿ 8.50 ಲಕ್ಷ ಟನ್ ಆಲೂಗಡ್ಡೆ ಬೆಳೆದಿದೆ. ಈರುಳ್ಳಿ ಬೆಳೆ 47,000 ಹೆಕ್ಟೇರುಗಳಲ್ಲಿ ಒಟ್ಟು 7 ಲಕ್ಷ ಟನ್ಗಳು.</p>.<p>‘ಭರ್ಜರಿ ಬೆಳೆ ಬಂದ ಕಾರಣ ಬೆಲೆ ಕುಸಿದು ರೈತರಿಗೆ ಅಸಲು ಕೂಡಾ ಹುಟ್ಟುತ್ತಿಲ್ಲ. ಅವರು ಆಲೂಗಡ್ಡೆಯನ್ನು ಕ್ವಿಂಟಲಿಗೆ ₹ 150 ಬೆಲೆಗೆ ಮಾರುವಂತಹ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಆಲೂಗಡ್ಡೆ ರಫ್ತಿಗೆ ಅವಕಾಶ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ. ಅನುಮತಿ ಸದ್ಯವೇ ಬರಲಿದೆ’ ಎಂದು ಅವರು ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜ್ಯದಲ್ಲಿ ಶೀಘ್ರವೇ 4 ಹೊಸ ಜಿಲ್ಲೆ: ಪಟೇಲ್</strong></p>.<p>ರಾಯಚೂರು, ಅ. 3– ನಾಲ್ಕು ಹೊಸ ಜಿಲ್ಲೆಗಳನ್ನು ರಚಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಇಂದು ಇಲ್ಲಿ ಹೇಳಿದರು.</p>.<p>ವಿಧಾನಸಭೆ ಉಪಚುನಾವಣೆಗಾಗಿ ಪಕ್ಷದ ಅಭ್ಯರ್ಥಿ ಪರ ಯಲ್ಬುರ್ಗದಲ್ಲಿ ಬಹಿರಂಗ ಸಭೆಯಲ್ಲಿ ಪಾಲ್ಗೊಂಡ ನಂತರ ಮುಖ್ಯ ಮಂತ್ರಿ ಅವರು ಯಲ್ಬುರ್ಗ ತಾಲ್ಲೂಕಿನ ಕುಕನೂರಿನಲ್ಲಿ ವರದಿಗಾರರೊಂದಿಗೆ ಮಾತನಾಡುತ್ತಾ, ಈ ವಿಷಯ ತಿಳಿಸಿದರು. ಆದರೆ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಯಾದೀತು ಎಂಬ ದೃಷ್ಟಿಯಿಂದ ಉದ್ದೇಶಿತ ಈ ಜಿಲ್ಲೆಗಳು ಯಾವುವು ಎಂಬುದನ್ನು ಹೇಳ ಬಯಸಲಿಲ್ಲ.</p>.<p>ಹೊಸ ಜಿಲ್ಲೆಗಳನ್ನು ರಚಿಸುವುದಕ್ಕೆ ಸರ್ಕಾರದ ಕಾಲಮಿತಿ ಏನು ಎಂಬುದನ್ನೂ ಅವರು ತಿಳಿಸಲಿಲ್ಲ. ಕೊಪ್ಪಳ, ಬಾಗಲಕೋಟೆ, ಧಾರವಾಡ ದಕ್ಷಿಣ ಹಾಗೂ ದಾವಣಗೆರೆ ಜಿಲ್ಲೆಗಳನ್ನು ರಚಿಸಬೇಕು ಎಂಬ ಬೇಡಿಕೆ ಹಲವು ದಿನಗಳಿಂದ ಇರುವುದನ್ನು ಇಲ್ಲಿ ಸ್ಮರಿಸಬಹುದು.</p>.<p><strong>ಸಮಸ್ಯೆ ತಂದ ಉತ್ತಮ ಫಸಲು</strong></p>.<p>ಬೆಂಗಳೂರು, ಅ. 3– ರಾಜ್ಯದಲ್ಲಿ ಈ ಬಾರಿ ಭರ್ಜರಿ ಆಲೂಗಡ್ಡೆ ಬೆಳೆ ಬಂದಿದೆ. ಈರುಳ್ಳಿಯೂ ಅಷ್ಟೇ; ಜನಸಾಮಾನ್ಯರು ದಿನವೂ ಬಳಸುವ ಈ ತರಕಾರಿ ಉತ್ತಮ ಫಲಸು ಬಂದದ್ದು ಸಂತೋಷ ಬದಲು ಹಲವು ಸಮಸ್ಯೆಗಳನ್ನೇ ತಂದಿದೆ.</p>.<p>ರಾಜ್ಯ ಕೃಷಿ ಸಚಿವ ಸಿ. ಬೈರೇಗೌಡರ ಪ್ರಕಾರ ಒಟ್ಟು 47,500 ಹೆಕ್ಟೇರುಗಳಲ್ಲಿ 8.50 ಲಕ್ಷ ಟನ್ ಆಲೂಗಡ್ಡೆ ಬೆಳೆದಿದೆ. ಈರುಳ್ಳಿ ಬೆಳೆ 47,000 ಹೆಕ್ಟೇರುಗಳಲ್ಲಿ ಒಟ್ಟು 7 ಲಕ್ಷ ಟನ್ಗಳು.</p>.<p>‘ಭರ್ಜರಿ ಬೆಳೆ ಬಂದ ಕಾರಣ ಬೆಲೆ ಕುಸಿದು ರೈತರಿಗೆ ಅಸಲು ಕೂಡಾ ಹುಟ್ಟುತ್ತಿಲ್ಲ. ಅವರು ಆಲೂಗಡ್ಡೆಯನ್ನು ಕ್ವಿಂಟಲಿಗೆ ₹ 150 ಬೆಲೆಗೆ ಮಾರುವಂತಹ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಆಲೂಗಡ್ಡೆ ರಫ್ತಿಗೆ ಅವಕಾಶ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ. ಅನುಮತಿ ಸದ್ಯವೇ ಬರಲಿದೆ’ ಎಂದು ಅವರು ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>