<p><strong>ಪೆರೇಸಂದ್ರ ದುರಂತ: ಆರೋಪಿಗಳ ಸೆರೆಗೆ ಪೊಲೀಸ್ ವಾರಂಟ್</strong></p>.<p>ಮುಂಬೈ, ಅ. 5 (ಪಿಟಿಐ)– ಕೋಲಾರ ಜಿಲ್ಲೆಯ ಪೆರೇಸಂದ್ರದಲ್ಲಿ ನಡೆದ ಉಚಿತ ನೇತ್ರ ಚಿಕಿತ್ಸಾ ಶಿಬಿರದಲ್ಲಿ ನೀಡಲಾದ ಕಲಬೆರಕೆ ಮಾತ್ರೆ ತಯಾರಿಕಾ ಸಂಸ್ಥೆಯಾದ ಜರ್ಮನ್ ಬಹುರಾಷ್ಟ್ರೀಯ ಕಂಪನಿ ಬೋಹ್ರಿಂಗರ್ ಮ್ಯಾನ್ಹೆಮ್ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ 12 ಅಧಿಕಾರಿಗಳ ಬಂಧನಕ್ಕೆ ಥಾಣೆ ಪೊಲೀಸರು ಆದೇಶ ಹೊರಡಿಸಿದ್ದಾರೆ.</p>.<p>ಕಲಬೆರಕೆ ಮಾತ್ರೆಗಳಾದ ಕಾಸ್ಮಾಟ್ ಪೋರ್ಟೆಯನ್ನು ಸೇವಿಸಿ ಹಲವಾರು ಮಂದಿ ಅಸ್ವಸ್ಥರಾಗಿ ಇಬ್ಬರು ಮೃತರಾಗಿದ್ದರು. ಕಳಪೆ ಗುಣಮಟ್ಟ ಮತ್ತು ನಿರ್ಲಕ್ಷದ ಆರೋಪದ ಹಿನ್ನೆಲೆಯಲ್ಲಿ ಆಹಾರ ಮತ್ತು ಔಷಧಗಳ ನಿರ್ವಹಣಾ ಮಂಡಳಿಯು ಅ. 3ರಂದು ಪ್ರಥಮ ಮಾಹಿತಿ ವರದಿ ಸಲ್ಲಿಸಿದ್ದರಿಂದ ಪೊಲೀಸರು ಈ ಆದೇಶ ಜಾರಿಗೊಳಿಸಿದ್ದಾರೆ.</p>.<p><strong>ಈರುಳ್ಳಿ, ಆಲೂಗಡ್ಡೆ ಸರ್ಕಾರದಿಂದ ಖರೀದಿ</strong></p>.<p>ಬೆಂಗಳೂರು, ಅ. 5– ರಾಜ್ಯದಲ್ಲಿ ಭರಪೂರ ಬೆಳೆ ಬಂದಿರುವ ಆಲೂಗಡ್ಡೆ ಮತ್ತು ಈರುಳ್ಳಿ ಬೆಳೆದ ರೈತರ ‘ಕಣ್ಣಲ್ಲಿ ನೀರುಕ್ಕುವುದನ್ನು’ ತಡೆಯಲು ತೀರ್ಮಾನಿಸಿರುವ ಸರ್ಕಾರ ಈ ಬೆಳೆಯನ್ನು ಒರಿಸ್ಸಾ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳವೇ ಅಲ್ಲದೆ ಮಲೇಶಿಯಾ ಹಾಗೂ ಶ್ರೀಲಂಕಾಗಳಿಗೆ ರಫ್ತು ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪೆರೇಸಂದ್ರ ದುರಂತ: ಆರೋಪಿಗಳ ಸೆರೆಗೆ ಪೊಲೀಸ್ ವಾರಂಟ್</strong></p>.<p>ಮುಂಬೈ, ಅ. 5 (ಪಿಟಿಐ)– ಕೋಲಾರ ಜಿಲ್ಲೆಯ ಪೆರೇಸಂದ್ರದಲ್ಲಿ ನಡೆದ ಉಚಿತ ನೇತ್ರ ಚಿಕಿತ್ಸಾ ಶಿಬಿರದಲ್ಲಿ ನೀಡಲಾದ ಕಲಬೆರಕೆ ಮಾತ್ರೆ ತಯಾರಿಕಾ ಸಂಸ್ಥೆಯಾದ ಜರ್ಮನ್ ಬಹುರಾಷ್ಟ್ರೀಯ ಕಂಪನಿ ಬೋಹ್ರಿಂಗರ್ ಮ್ಯಾನ್ಹೆಮ್ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ 12 ಅಧಿಕಾರಿಗಳ ಬಂಧನಕ್ಕೆ ಥಾಣೆ ಪೊಲೀಸರು ಆದೇಶ ಹೊರಡಿಸಿದ್ದಾರೆ.</p>.<p>ಕಲಬೆರಕೆ ಮಾತ್ರೆಗಳಾದ ಕಾಸ್ಮಾಟ್ ಪೋರ್ಟೆಯನ್ನು ಸೇವಿಸಿ ಹಲವಾರು ಮಂದಿ ಅಸ್ವಸ್ಥರಾಗಿ ಇಬ್ಬರು ಮೃತರಾಗಿದ್ದರು. ಕಳಪೆ ಗುಣಮಟ್ಟ ಮತ್ತು ನಿರ್ಲಕ್ಷದ ಆರೋಪದ ಹಿನ್ನೆಲೆಯಲ್ಲಿ ಆಹಾರ ಮತ್ತು ಔಷಧಗಳ ನಿರ್ವಹಣಾ ಮಂಡಳಿಯು ಅ. 3ರಂದು ಪ್ರಥಮ ಮಾಹಿತಿ ವರದಿ ಸಲ್ಲಿಸಿದ್ದರಿಂದ ಪೊಲೀಸರು ಈ ಆದೇಶ ಜಾರಿಗೊಳಿಸಿದ್ದಾರೆ.</p>.<p><strong>ಈರುಳ್ಳಿ, ಆಲೂಗಡ್ಡೆ ಸರ್ಕಾರದಿಂದ ಖರೀದಿ</strong></p>.<p>ಬೆಂಗಳೂರು, ಅ. 5– ರಾಜ್ಯದಲ್ಲಿ ಭರಪೂರ ಬೆಳೆ ಬಂದಿರುವ ಆಲೂಗಡ್ಡೆ ಮತ್ತು ಈರುಳ್ಳಿ ಬೆಳೆದ ರೈತರ ‘ಕಣ್ಣಲ್ಲಿ ನೀರುಕ್ಕುವುದನ್ನು’ ತಡೆಯಲು ತೀರ್ಮಾನಿಸಿರುವ ಸರ್ಕಾರ ಈ ಬೆಳೆಯನ್ನು ಒರಿಸ್ಸಾ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳವೇ ಅಲ್ಲದೆ ಮಲೇಶಿಯಾ ಹಾಗೂ ಶ್ರೀಲಂಕಾಗಳಿಗೆ ರಫ್ತು ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>