<p><u><strong>ಮತ್ತೆ ಅತಂತ್ರ ಸ್ಥಿತಿ: ಸರ್ಕಾರ ರಚನೆಗೆ ಕಾಂಗ್ರೆಸ್– ಬಿಜೆಪಿ ಕಸರತ್ತು</strong></u></p>.<p>ನವದೆಹಲಿ, ಮಾರ್ಚ್ 3– ಹನ್ನೆರಡನೇ ಲೋಕಸಭೆ ಚುನಾವಣೆ ಫಲಿತಾಂಶಗಳು ಬಹುತೇಕ ಪ್ರಕಟಗೊಂಡಿದ್ದು, ಮತ್ತೆ ಅತಂತ್ರ ಲೋಕಸಭೆ ನಿರ್ಮಾಣವಾಗಿದೆ.</p>.<p>ಈ ಹಿನ್ನೆಲೆಯಲ್ಲಿ ಬಹುಮತಕ್ಕೆ ಬೇಕಾದ ಮಾಯಾ ಸಂಖ್ಯೆ 273 ಸದಸ್ಯರ ಬೆಂಬಲ ಗಳಿಸಿಕೊಳ್ಳಲು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಭಾರತೀಯ ಜನತಾ ಪಕ್ಷ, ಕಾಂಗ್ರೆಸ್ ಹಾಗೂ ಸಂಯುಕ್ತರಂಗವು ರಾಜಧಾನಿಯಲ್ಲಿ ತೀವ್ರ ಚಟುವಟಿಕೆ ಆರಂಭಿಸಿವೆ.</p>.<p>ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರುವುದನ್ನು ತಡೆಯಲು ಕಾಂಗ್ರೆಸ್ ಮತ್ತು ಸಂಯುಕ್ತರಂಗ ಮತ್ತೆ ಒಂದಾಗುವ ಲಕ್ಷಣಗಳು ಕಂಡುಬರುತ್ತಿದ್ದು, ತೆರೆಮರೆಯ ಸಂಧಾನ ಆರಂಭವಾಗಿದೆ.</p>.<p>***</p>.<p><u><strong>ಇಂದು ಕೇಶುಭಾಯ್ ಪ್ರಮಾಣವಚನ</strong></u></p>.<p>ನವದೆಹಲಿ, ಮಾರ್ಚ್ 3 (ಪಿಟಿಐ)– ಭಾರತೀಯ ಜನತಾ ಪಕ್ಷವು ಗುಜರಾತ್ ವಿಧಾನಸಭೆಯಲ್ಲಿ ನಿಚ್ಚಳ ಬಹುಮತ ಪಡೆದಿದ್ದರೆ, ಹಿಮಾಚಲ ಪ್ರದೇಶದಲ್ಲಿ ಯಾವ ಪಕ್ಷಕ್ಕೂ ಬಹುಮತ ದೊರೆತಿಲ್ಲ. ತ್ರಿಪುರಾದಲ್ಲಿ ಆಡಳಿತಾರೂಢ ಎಡರಂಗ ಸರಳ ಬಹುಮತ ಗಳಿಸಿದೆ.</p>.<p>ಗುಜರಾತ್ನಲ್ಲಿ ಬಿಜೆಪಿಯು 1995ರಲ್ಲಿ ಮೊದಲ ಬಾರಿಗೆ ಆಡಳಿತಕ್ಕೆ ಬಂದಿತ್ತು. ಗುಜರಾತ್ ಮುಖ್ಯಮಂತ್ರಿಯಾಗಿ 2ನೇ ಬಾರಿಗೆ ಕೇಶುಭಾಯ್ ಪಟೇಲ್ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.</p>.<p>ಹಿಮಾಚಲ ಪ್ರದೇಶ ವಿಧಾನಭೆಯ 65 ಸ್ಥಾನಗಳಲ್ಲಿ ಕಾಂಗ್ರೆಸ್ 31, ಬಿಜೆಪಿ 27 ಹಾಗೂ ಹಿಮಾಚಲ ವಿಕಾಸ ಪಕ್ಷ ನಾಲ್ಕು ಸ್ಥಾನಗಳನ್ನು ಗಳಿಸಿವೆ.</p>.<p>ತ್ರಿಪುರಾ ವಿಧಾನಸಭೆಯಲ್ಲಿ 60 ಸ್ಥಾನಗಳಲ್ಲಿ ಎಡರಂಗ 31 ಸ್ಥಾನ ಗಳಿಸಿ ಮತ್ತೆ ಅಧಿಕಾರಕ್ಕೆ ಬಂದಿದೆ.</p>.<p>***</p>.<p><u><strong>ಎಲ್ಲ ಫಲಿತಾಂಶ ಪ್ರಕಟಣೆನಂತರ ರಾಷ್ಟ್ರಪತಿ ಕ್ರಮ</strong></u></p>.<p>ನವದೆಹಲಿ, ಮಾರ್ಚ್ 3 (ಯುಎನ್ಐ)– ಕೇಂದ್ರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಯಾವುದೇ ಪಕ್ಷ ಅಥವಾ ಗುಂಪು ಹಕ್ಕು ಪ್ರತಿಪಾದನೆ ಮಾಡಿದರೂ ಲೋಕಸಭೆಯ ಎಲ್ಲ ಫಲಿತಾಂಶ ಪ್ರಕಟಗೊಂಡ ನಂತರವೇ ರಾಷ್ಟ್ರಪತಿಕೆ.ಆರ್. ನಾರಾಯಣನ್ ಅವರು ಈ ಬಗ್ಗೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಈಗ ಅವರು ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.</p>.<p>ಮಾರ್ಚ್ 15ರೊಳಗೆ 12ನೇ ಲೋಕಸಭೆ ಅಸ್ತಿತ್ವಕ್ಕೆ ಬರಬೇಕಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><u><strong>ಮತ್ತೆ ಅತಂತ್ರ ಸ್ಥಿತಿ: ಸರ್ಕಾರ ರಚನೆಗೆ ಕಾಂಗ್ರೆಸ್– ಬಿಜೆಪಿ ಕಸರತ್ತು</strong></u></p>.<p>ನವದೆಹಲಿ, ಮಾರ್ಚ್ 3– ಹನ್ನೆರಡನೇ ಲೋಕಸಭೆ ಚುನಾವಣೆ ಫಲಿತಾಂಶಗಳು ಬಹುತೇಕ ಪ್ರಕಟಗೊಂಡಿದ್ದು, ಮತ್ತೆ ಅತಂತ್ರ ಲೋಕಸಭೆ ನಿರ್ಮಾಣವಾಗಿದೆ.</p>.<p>ಈ ಹಿನ್ನೆಲೆಯಲ್ಲಿ ಬಹುಮತಕ್ಕೆ ಬೇಕಾದ ಮಾಯಾ ಸಂಖ್ಯೆ 273 ಸದಸ್ಯರ ಬೆಂಬಲ ಗಳಿಸಿಕೊಳ್ಳಲು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಭಾರತೀಯ ಜನತಾ ಪಕ್ಷ, ಕಾಂಗ್ರೆಸ್ ಹಾಗೂ ಸಂಯುಕ್ತರಂಗವು ರಾಜಧಾನಿಯಲ್ಲಿ ತೀವ್ರ ಚಟುವಟಿಕೆ ಆರಂಭಿಸಿವೆ.</p>.<p>ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರುವುದನ್ನು ತಡೆಯಲು ಕಾಂಗ್ರೆಸ್ ಮತ್ತು ಸಂಯುಕ್ತರಂಗ ಮತ್ತೆ ಒಂದಾಗುವ ಲಕ್ಷಣಗಳು ಕಂಡುಬರುತ್ತಿದ್ದು, ತೆರೆಮರೆಯ ಸಂಧಾನ ಆರಂಭವಾಗಿದೆ.</p>.<p>***</p>.<p><u><strong>ಇಂದು ಕೇಶುಭಾಯ್ ಪ್ರಮಾಣವಚನ</strong></u></p>.<p>ನವದೆಹಲಿ, ಮಾರ್ಚ್ 3 (ಪಿಟಿಐ)– ಭಾರತೀಯ ಜನತಾ ಪಕ್ಷವು ಗುಜರಾತ್ ವಿಧಾನಸಭೆಯಲ್ಲಿ ನಿಚ್ಚಳ ಬಹುಮತ ಪಡೆದಿದ್ದರೆ, ಹಿಮಾಚಲ ಪ್ರದೇಶದಲ್ಲಿ ಯಾವ ಪಕ್ಷಕ್ಕೂ ಬಹುಮತ ದೊರೆತಿಲ್ಲ. ತ್ರಿಪುರಾದಲ್ಲಿ ಆಡಳಿತಾರೂಢ ಎಡರಂಗ ಸರಳ ಬಹುಮತ ಗಳಿಸಿದೆ.</p>.<p>ಗುಜರಾತ್ನಲ್ಲಿ ಬಿಜೆಪಿಯು 1995ರಲ್ಲಿ ಮೊದಲ ಬಾರಿಗೆ ಆಡಳಿತಕ್ಕೆ ಬಂದಿತ್ತು. ಗುಜರಾತ್ ಮುಖ್ಯಮಂತ್ರಿಯಾಗಿ 2ನೇ ಬಾರಿಗೆ ಕೇಶುಭಾಯ್ ಪಟೇಲ್ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.</p>.<p>ಹಿಮಾಚಲ ಪ್ರದೇಶ ವಿಧಾನಭೆಯ 65 ಸ್ಥಾನಗಳಲ್ಲಿ ಕಾಂಗ್ರೆಸ್ 31, ಬಿಜೆಪಿ 27 ಹಾಗೂ ಹಿಮಾಚಲ ವಿಕಾಸ ಪಕ್ಷ ನಾಲ್ಕು ಸ್ಥಾನಗಳನ್ನು ಗಳಿಸಿವೆ.</p>.<p>ತ್ರಿಪುರಾ ವಿಧಾನಸಭೆಯಲ್ಲಿ 60 ಸ್ಥಾನಗಳಲ್ಲಿ ಎಡರಂಗ 31 ಸ್ಥಾನ ಗಳಿಸಿ ಮತ್ತೆ ಅಧಿಕಾರಕ್ಕೆ ಬಂದಿದೆ.</p>.<p>***</p>.<p><u><strong>ಎಲ್ಲ ಫಲಿತಾಂಶ ಪ್ರಕಟಣೆನಂತರ ರಾಷ್ಟ್ರಪತಿ ಕ್ರಮ</strong></u></p>.<p>ನವದೆಹಲಿ, ಮಾರ್ಚ್ 3 (ಯುಎನ್ಐ)– ಕೇಂದ್ರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಯಾವುದೇ ಪಕ್ಷ ಅಥವಾ ಗುಂಪು ಹಕ್ಕು ಪ್ರತಿಪಾದನೆ ಮಾಡಿದರೂ ಲೋಕಸಭೆಯ ಎಲ್ಲ ಫಲಿತಾಂಶ ಪ್ರಕಟಗೊಂಡ ನಂತರವೇ ರಾಷ್ಟ್ರಪತಿಕೆ.ಆರ್. ನಾರಾಯಣನ್ ಅವರು ಈ ಬಗ್ಗೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಈಗ ಅವರು ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.</p>.<p>ಮಾರ್ಚ್ 15ರೊಳಗೆ 12ನೇ ಲೋಕಸಭೆ ಅಸ್ತಿತ್ವಕ್ಕೆ ಬರಬೇಕಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>