<h2>ಭಾರತದ ಜತೆ ಮಾತುಕತೆ ಪುನರ್ ಆರಂಭಿಸಲು ಪಾಕ್ಗೆ ಬ್ರಿಟನ್ ಸಲಹೆ</h2>.<p><strong>ನವದೆಹಲಿ, ಜೂನ್ 12–</strong> ಉಪಖಂಡದಲ್ಲಿ ಬಾಂಧವ್ಯವನ್ನು ಮಾಮೂಲು ಸ್ಥಿತಿಗೆ ತರಲು ಭಾರತದ ಜತೆ ಮಾತುಕತೆ ಪುನರಾರಂಭಿಸುವುದರ ಅಗತ್ಯವನ್ನು ಬ್ರಿಟನ್ ಸರ್ಕಾರವು ಪಾಕಿಸ್ತಾನಕ್ಕೆ ಮನವರಿಕೆ ಮಾಡಿಕೊಟ್ಟಿದೆ.</p>.<p>ಲಂಡನ್ನಿನಲ್ಲಿ ಬ್ರಿಟನ್ನಿನ ಸಚಿವರ ಜತೆ ಪಾಕಿಸ್ತಾನದ ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗಳ ಸ್ಟೇಟ್ ಸಚಿವ ಅಜೀಜ್ ಅಹ್ಮದ್ ಅವರು ಮಾತುಕತೆ ನಡೆಸಿದ ವೇಳೆ ಅವರಿಗೆ ಬ್ರಿಟನ್ ಸರ್ಕಾರದ ಈ ಅಭಿಪ್ರಾಯ ತಿಳಿಸಲಾಯಿತು ಎಂದು ಬಿಬಿಸಿ ಇಂದು ಉದ್ಧರಿಸಿತು.</p>.<p>ಪಾಕಿಸ್ತಾನದ ಸ್ಟೇಟ್ ಸಚಿವ ಅಜೀಜ್ ಅಹ್ಮದ್ ಅವರು ಬ್ರಿಟನ್ನಿನ ಸಚಿವರ ಜತೆ ಎರಡು ದಿನ ಮಾತುಕತೆ ನಡೆಸಿದರು.</p>.<h2>ಸಂಸ್ಥಾ ಕಾಂಗ್ರೆಸ್ಸಿಗೆ ತಾರಕೇಶ್ವರಿ ರಾಜೀನಾಮೆ</h2>.<p><strong>ಪಟನಾ, ಜೂನ್ 12–</strong> ಸಂಸ್ಥಾ ಕಾಂಗ್ರೆಸ್ ನಾಯಕಿ ಶ್ರೀಮತಿ ತಾರಕೇಶ್ವರಿ ಸಿನ್ಹ ಅವರು ಇಂದು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.</p>.<p>ಅವರು ಸದ್ಯದಲ್ಲೇ ಆಡಳಿತ ಕಾಂಗ್ರೆಸ್ ಪಕ್ಷ ಸೇರುವ ನಿರೀಕ್ಷೆಯಿದೆ ಎಂದು ಬಲ್ಲವೃತ್ತಗಳು ತಿಳಿಸಿವೆ.</p>.<p>ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಮೆಹ್ತಾ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಶ್ರೀಮತಿ ತಾರಕೇಶ್ವರಿ ಸಿನ್ಹ ಅವರು ‘ರಾಷ್ಟ್ರದ ಎರಡೂ ಪಕ್ಷಗಳು ಒಗ್ಗೂಡುವಂಥ ಪರಿಸ್ಥಿತಿಯನ್ನುಂಟು ಮಾಡಿ’ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>ಭಾರತದ ಜತೆ ಮಾತುಕತೆ ಪುನರ್ ಆರಂಭಿಸಲು ಪಾಕ್ಗೆ ಬ್ರಿಟನ್ ಸಲಹೆ</h2>.<p><strong>ನವದೆಹಲಿ, ಜೂನ್ 12–</strong> ಉಪಖಂಡದಲ್ಲಿ ಬಾಂಧವ್ಯವನ್ನು ಮಾಮೂಲು ಸ್ಥಿತಿಗೆ ತರಲು ಭಾರತದ ಜತೆ ಮಾತುಕತೆ ಪುನರಾರಂಭಿಸುವುದರ ಅಗತ್ಯವನ್ನು ಬ್ರಿಟನ್ ಸರ್ಕಾರವು ಪಾಕಿಸ್ತಾನಕ್ಕೆ ಮನವರಿಕೆ ಮಾಡಿಕೊಟ್ಟಿದೆ.</p>.<p>ಲಂಡನ್ನಿನಲ್ಲಿ ಬ್ರಿಟನ್ನಿನ ಸಚಿವರ ಜತೆ ಪಾಕಿಸ್ತಾನದ ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗಳ ಸ್ಟೇಟ್ ಸಚಿವ ಅಜೀಜ್ ಅಹ್ಮದ್ ಅವರು ಮಾತುಕತೆ ನಡೆಸಿದ ವೇಳೆ ಅವರಿಗೆ ಬ್ರಿಟನ್ ಸರ್ಕಾರದ ಈ ಅಭಿಪ್ರಾಯ ತಿಳಿಸಲಾಯಿತು ಎಂದು ಬಿಬಿಸಿ ಇಂದು ಉದ್ಧರಿಸಿತು.</p>.<p>ಪಾಕಿಸ್ತಾನದ ಸ್ಟೇಟ್ ಸಚಿವ ಅಜೀಜ್ ಅಹ್ಮದ್ ಅವರು ಬ್ರಿಟನ್ನಿನ ಸಚಿವರ ಜತೆ ಎರಡು ದಿನ ಮಾತುಕತೆ ನಡೆಸಿದರು.</p>.<h2>ಸಂಸ್ಥಾ ಕಾಂಗ್ರೆಸ್ಸಿಗೆ ತಾರಕೇಶ್ವರಿ ರಾಜೀನಾಮೆ</h2>.<p><strong>ಪಟನಾ, ಜೂನ್ 12–</strong> ಸಂಸ್ಥಾ ಕಾಂಗ್ರೆಸ್ ನಾಯಕಿ ಶ್ರೀಮತಿ ತಾರಕೇಶ್ವರಿ ಸಿನ್ಹ ಅವರು ಇಂದು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.</p>.<p>ಅವರು ಸದ್ಯದಲ್ಲೇ ಆಡಳಿತ ಕಾಂಗ್ರೆಸ್ ಪಕ್ಷ ಸೇರುವ ನಿರೀಕ್ಷೆಯಿದೆ ಎಂದು ಬಲ್ಲವೃತ್ತಗಳು ತಿಳಿಸಿವೆ.</p>.<p>ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಮೆಹ್ತಾ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಶ್ರೀಮತಿ ತಾರಕೇಶ್ವರಿ ಸಿನ್ಹ ಅವರು ‘ರಾಷ್ಟ್ರದ ಎರಡೂ ಪಕ್ಷಗಳು ಒಗ್ಗೂಡುವಂಥ ಪರಿಸ್ಥಿತಿಯನ್ನುಂಟು ಮಾಡಿ’ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>