<h2><strong>ಆಂಧ್ರ: ಟಿಡಿಪಿ ಶಾಸಕ, ಮೂವರು ಅಂಗರಕ್ಷಕರ ಹತ್ಯೆ</strong></h2>.<p><strong>ಹೈದರಾಬಾದ್, ಸೆ. 15–</strong> ಶಾಸಕ ಹಾಗೂ ಸಿರ್ಪೂರ್ ವಿಧಾನಸಭಾ ಕ್ಷೇತ್ರದ ಆಡಳಿತಾರೂಢ ತೆಲುಗು ದೇಶಂ ಪಕ್ಷದ ಅಭ್ಯರ್ಥಿ ಪಿ. ಪುರುಷೋತ್ತಮ ರಾವ್ ಹಾಗೂ ಅವರ ಮೂವರು ಅಂಗರಕ್ಷಕರನ್ನು ನಕ್ಸಲೀಯರು ಆಂಧ್ರದ ಅದಿಲಾಬಾದ್ ಜಿಲ್ಲೆಯ ಸಿರ್ಪೂರ್ ಕಾಗದ ನಗರದಲ್ಲಿ ಇಂದು ಮುಂಜಾನೆ ಗುಂಡಿಟ್ಟು ಕೊಂದಿದ್ದಾರೆ.</p>.<p>ಈ ಹತ್ಯೆಯ ಹಿನ್ನೆಲೆಯಲ್ಲಿ ಸಿರ್ಪೂರ್ ಕ್ಷೇತ್ರದಲ್ಲಿ ಸೆ. 18ರಂದು ನಡೆಯಬೇಕಾಗಿದ್ದ ಮತದಾನ ರದ್ದಾಗಿದೆ ಎಂದು ಚುನಾವಣಾ ಆಯೋಗದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.</p>.<h2>ಅಧಿಕಾರದಾಹಿ ಕಾಂಗ್ರೆಸ್: ವಾಜಪೇಯಿ ಟೀಕೆ</h2>.<p><strong>ನವದೆಹಲಿ, ಸೆ. 15–</strong> ‘ಸಮ್ಮಿಶ್ರ ಸರ್ಕಾರ ಸ್ಥಿರತೆ ನೀಡಲಾರದು ಎಂದು ಹೇಳುವ ಕಾಂಗ್ರೆಸ್ ಪಕ್ಷವು ಅಧಿಕಾರದಾಹಿ ಪಕ್ಷ’ ಎಂದು ಬಣ್ಣಿಸಿರುವ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಸಮ್ಮಿಶ್ರ ಸರ್ಕಾರಗಳು ಪೂರ್ಣಾವಧಿ ಬಾಳಲಾರವು ಎಂಬ ಕಾಂಗ್ರೆಸ್ ನಿಲುವಿಗೆ ತಮ್ಮ ಅಸಮ್ಮತಿ ಸೂಚಿಸಿದ್ದಾರೆ.</p>.<p>‘ವಿಶ್ವದ ಹಲವಾರು ದೇಶಗಳಲ್ಲಿ ಸಮ್ಮಿಶ್ರ ಸರ್ಕಾರಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಭಾರತದಲ್ಲಿಯೂ ಕೆಲವು ರಾಜ್ಯಗಳಲ್ಲಿ ಈ ಪ್ರಯೋಗ ಯಶಸ್ವಿಯಾಗಿ ಸ್ಥಿರ ಸರ್ಕಾರ ಒದಗಿಸಿದೆ’ ಎಂದು ಅವರು ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2><strong>ಆಂಧ್ರ: ಟಿಡಿಪಿ ಶಾಸಕ, ಮೂವರು ಅಂಗರಕ್ಷಕರ ಹತ್ಯೆ</strong></h2>.<p><strong>ಹೈದರಾಬಾದ್, ಸೆ. 15–</strong> ಶಾಸಕ ಹಾಗೂ ಸಿರ್ಪೂರ್ ವಿಧಾನಸಭಾ ಕ್ಷೇತ್ರದ ಆಡಳಿತಾರೂಢ ತೆಲುಗು ದೇಶಂ ಪಕ್ಷದ ಅಭ್ಯರ್ಥಿ ಪಿ. ಪುರುಷೋತ್ತಮ ರಾವ್ ಹಾಗೂ ಅವರ ಮೂವರು ಅಂಗರಕ್ಷಕರನ್ನು ನಕ್ಸಲೀಯರು ಆಂಧ್ರದ ಅದಿಲಾಬಾದ್ ಜಿಲ್ಲೆಯ ಸಿರ್ಪೂರ್ ಕಾಗದ ನಗರದಲ್ಲಿ ಇಂದು ಮುಂಜಾನೆ ಗುಂಡಿಟ್ಟು ಕೊಂದಿದ್ದಾರೆ.</p>.<p>ಈ ಹತ್ಯೆಯ ಹಿನ್ನೆಲೆಯಲ್ಲಿ ಸಿರ್ಪೂರ್ ಕ್ಷೇತ್ರದಲ್ಲಿ ಸೆ. 18ರಂದು ನಡೆಯಬೇಕಾಗಿದ್ದ ಮತದಾನ ರದ್ದಾಗಿದೆ ಎಂದು ಚುನಾವಣಾ ಆಯೋಗದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.</p>.<h2>ಅಧಿಕಾರದಾಹಿ ಕಾಂಗ್ರೆಸ್: ವಾಜಪೇಯಿ ಟೀಕೆ</h2>.<p><strong>ನವದೆಹಲಿ, ಸೆ. 15–</strong> ‘ಸಮ್ಮಿಶ್ರ ಸರ್ಕಾರ ಸ್ಥಿರತೆ ನೀಡಲಾರದು ಎಂದು ಹೇಳುವ ಕಾಂಗ್ರೆಸ್ ಪಕ್ಷವು ಅಧಿಕಾರದಾಹಿ ಪಕ್ಷ’ ಎಂದು ಬಣ್ಣಿಸಿರುವ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಸಮ್ಮಿಶ್ರ ಸರ್ಕಾರಗಳು ಪೂರ್ಣಾವಧಿ ಬಾಳಲಾರವು ಎಂಬ ಕಾಂಗ್ರೆಸ್ ನಿಲುವಿಗೆ ತಮ್ಮ ಅಸಮ್ಮತಿ ಸೂಚಿಸಿದ್ದಾರೆ.</p>.<p>‘ವಿಶ್ವದ ಹಲವಾರು ದೇಶಗಳಲ್ಲಿ ಸಮ್ಮಿಶ್ರ ಸರ್ಕಾರಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಭಾರತದಲ್ಲಿಯೂ ಕೆಲವು ರಾಜ್ಯಗಳಲ್ಲಿ ಈ ಪ್ರಯೋಗ ಯಶಸ್ವಿಯಾಗಿ ಸ್ಥಿರ ಸರ್ಕಾರ ಒದಗಿಸಿದೆ’ ಎಂದು ಅವರು ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>