ಬಿಹಾರದಲ್ಲಿ ಮರುಕಳಿಸಿದ ಹತ್ಯಾಕಾಂಡ– 9 ಸಾವು
ಜೆಹನಾಬಾದ್ (ಬಿಹಾರ), ಜ. 10 (ಪಿಟಿಐ): ಲಕ್ಷ್ಮಣಪುರದಲ್ಲಿ ಈಚೆಗೆ ನಡೆದ ಸಾಮೂಹಿಕ ಹತ್ಯೆಯ ಹಿನ್ನೆಲೆಯಲ್ಲಿ ನಕ್ಸಲೀಯ ಸಂಘಟನೆಗೆ ಸೇರಿದ ಸಿಪಿಎಂಎಲ್ ಕಾರ್ಯಕರ್ತರು ಜೆಹನಾಬಾದ್ ಜಿಲ್ಲೆಯ ರಾಂ ಪುರಾಚುರನ್ ಗ್ರಾಮದಲ್ಲಿ ಶುಕ್ರವಾರ ರಾತ್ರಿ 9 ಮಂದಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಈ ಘಟನೆಯಲ್ಲಿ ಇನ್ನಿಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.