ವಿಚ್ಛಿದ್ರ ಶಕ್ತಿಗಳ ನಿಗ್ರಹಕ್ಕೆ ಕರೆ; ಸೋನಿಯಾ ಪ್ರಚಾರ ಆರಂಭ
ಶ್ರೀಪೆರಂಬುದೂರು, ಜನವರಿ 11– ಜಾತಿ, ಮತ, ಧರ್ಮ, ಪ್ರಾಂತ್ಯದ ಹೆಸರಿನಲ್ಲಿ ಸಮಾಜವನ್ನು ಛಿದ್ರಗೊಳಿಸುತ್ತಿರುವ ಶಕ್ತಿಗಳನ್ನು ನಿಗ್ರಹಿಸುವುದು ಕಾಂಗ್ರೆಸ್ ಪಕ್ಷಕ್ಕೆ ಸವಾಲು ಆಗಿದೆ ಎಂದು ಸೋನಿಯಾ ಗಾಂಧಿಯವರು ಇಂದು ಇಲ್ಲಿ ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.