<p><strong>ಭಾರತ ಗಡಿಯನ್ನು ಬಿಡಿ ಪಾಕ್ಗೆ ರಷ್ಯಾ ಸೂಚನೆ</strong></p><p><strong>ಮಾಸ್ಕೊ, ಜೂನ್ 17 (ಪಿಟಿಐ)–</strong> ವಾಸ್ತವ ಹತೋಟಿ ರೇಖೆಯನ್ನು ಬದಲಾಯಿಸುವ ಪಾಕಿಸ್ತಾನದ ಪ್ರಯತ್ನವು ಗಂಭೀರ ಪರಿಣಾಮಗಳಿಗೆ ಕಾರಣವಾದೀತು ಎಂದು ರಷ್ಯಾ ಇಂದು ಪಾಕಿಸ್ತಾನಕ್ಕೆ ಎಚ್ಚರಿಕೆಯನ್ನು ನೀಡಿದ್ದು, ಭಾರತದ ನೆಲದಿಂದ ಶಸ್ತ್ರಧಾರಿ ಅತಿಕ್ರಮಣಕಾರರನ್ನು ವಾಪಸು ಕರೆಸಿಕೊಳ್ಳುವಂತೆ ಕಟ್ಟುನಿಟ್ಟಾಗಿ ಆದೇಶಿಸಿದೆ. ಈ ಮಧ್ಯೆ ಕಾರ್ಗಿಲ್ನಿಂದ ಸೇನೆಯನ್ನು ವಾಪಸು ತೆಗೆಯುವ ಬಗ್ಗೆ ಅಮೆರಿಕದ ಮಾತಿಗೆ ಮನ್ನಣೆ ಸಿಗದೇ ಹೋದರೆ ಪಾಕಿಸ್ತಾನದ ವಿರುದ್ಧ ಕಠಿಣ ಆರ್ಥಿಕ ನಿಷೇಧ ಹೇರುವ ಬಗ್ಗೆ ಅಮೆರಿಕ ಆಲೋಚಿಸುತ್ತಿದೆ ಎಂದು ವಾಷಿಂಗ್ಟನ್ನಿಂದ ವರದಿಯಾಗಿದೆ. </p><p>ಕಾರ್ಗಿಲ್ನ ಇಂದಿನ ಬಿಕ್ಕಟ್ಟಿಗೆ ಪಾಕಿಸ್ತಾನವೇ ಕಾರಣ ಎಂದು ರಷ್ಯಾ ಹೇಳಿದೆ. </p><p><strong>ಕೊಡಗಿನಲ್ಲಿ ವ್ಯಾಪಕ ಮಳೆ ಹಾರಂಗಿ ಜಲಾಶಯಕ್ಕೆ ನೀರು </strong></p><p><strong>ಮಡಿಕೇರಿ, ಜೂನ್ 17–</strong> ಕೊಡಗು ಜಿಲ್ಲೆಯಾದ್ಯಂತ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ಕಳೆದ ಸಾಲಿಗೆ ಹೋಲಿಸಿದಲ್ಲಿ ಈ ಬಾರಿ ಮಳೆ ಪ್ರಮಾಣ ಇಮ್ಮಡಿಸಿದೆ. </p><p>ಕಾವೇರಿ ಜಲಾನಯನ ಪ್ರದೇಶವಾದ ಭಾಗಮಂಡಲದಲ್ಲಿ ಇಂದು 46.8 ಮಿ.ಮೀ. ಮಳೆ ದಾಖಲಾಗಿದೆ. ಇದರೊಂದಿಗೆ ಪ್ರಸಕ್ತ ವರ್ಷಾರಂಭದಿಂದ ಈ ದಿನದವರೆಗೆ ಇಲ್ಲಿ 1068.7 ಮಿ. ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 476.6 ಮಿ.ಮೀ.ನಷ್ಟು ಮಳೆ ಆಗಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾರತ ಗಡಿಯನ್ನು ಬಿಡಿ ಪಾಕ್ಗೆ ರಷ್ಯಾ ಸೂಚನೆ</strong></p><p><strong>ಮಾಸ್ಕೊ, ಜೂನ್ 17 (ಪಿಟಿಐ)–</strong> ವಾಸ್ತವ ಹತೋಟಿ ರೇಖೆಯನ್ನು ಬದಲಾಯಿಸುವ ಪಾಕಿಸ್ತಾನದ ಪ್ರಯತ್ನವು ಗಂಭೀರ ಪರಿಣಾಮಗಳಿಗೆ ಕಾರಣವಾದೀತು ಎಂದು ರಷ್ಯಾ ಇಂದು ಪಾಕಿಸ್ತಾನಕ್ಕೆ ಎಚ್ಚರಿಕೆಯನ್ನು ನೀಡಿದ್ದು, ಭಾರತದ ನೆಲದಿಂದ ಶಸ್ತ್ರಧಾರಿ ಅತಿಕ್ರಮಣಕಾರರನ್ನು ವಾಪಸು ಕರೆಸಿಕೊಳ್ಳುವಂತೆ ಕಟ್ಟುನಿಟ್ಟಾಗಿ ಆದೇಶಿಸಿದೆ. ಈ ಮಧ್ಯೆ ಕಾರ್ಗಿಲ್ನಿಂದ ಸೇನೆಯನ್ನು ವಾಪಸು ತೆಗೆಯುವ ಬಗ್ಗೆ ಅಮೆರಿಕದ ಮಾತಿಗೆ ಮನ್ನಣೆ ಸಿಗದೇ ಹೋದರೆ ಪಾಕಿಸ್ತಾನದ ವಿರುದ್ಧ ಕಠಿಣ ಆರ್ಥಿಕ ನಿಷೇಧ ಹೇರುವ ಬಗ್ಗೆ ಅಮೆರಿಕ ಆಲೋಚಿಸುತ್ತಿದೆ ಎಂದು ವಾಷಿಂಗ್ಟನ್ನಿಂದ ವರದಿಯಾಗಿದೆ. </p><p>ಕಾರ್ಗಿಲ್ನ ಇಂದಿನ ಬಿಕ್ಕಟ್ಟಿಗೆ ಪಾಕಿಸ್ತಾನವೇ ಕಾರಣ ಎಂದು ರಷ್ಯಾ ಹೇಳಿದೆ. </p><p><strong>ಕೊಡಗಿನಲ್ಲಿ ವ್ಯಾಪಕ ಮಳೆ ಹಾರಂಗಿ ಜಲಾಶಯಕ್ಕೆ ನೀರು </strong></p><p><strong>ಮಡಿಕೇರಿ, ಜೂನ್ 17–</strong> ಕೊಡಗು ಜಿಲ್ಲೆಯಾದ್ಯಂತ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ಕಳೆದ ಸಾಲಿಗೆ ಹೋಲಿಸಿದಲ್ಲಿ ಈ ಬಾರಿ ಮಳೆ ಪ್ರಮಾಣ ಇಮ್ಮಡಿಸಿದೆ. </p><p>ಕಾವೇರಿ ಜಲಾನಯನ ಪ್ರದೇಶವಾದ ಭಾಗಮಂಡಲದಲ್ಲಿ ಇಂದು 46.8 ಮಿ.ಮೀ. ಮಳೆ ದಾಖಲಾಗಿದೆ. ಇದರೊಂದಿಗೆ ಪ್ರಸಕ್ತ ವರ್ಷಾರಂಭದಿಂದ ಈ ದಿನದವರೆಗೆ ಇಲ್ಲಿ 1068.7 ಮಿ. ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 476.6 ಮಿ.ಮೀ.ನಷ್ಟು ಮಳೆ ಆಗಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>