<p><strong>ಬೆಂಗಳೂರು, ಜೂನ್ 6–</strong> ಬಂಡವಾಳ ಆಕರ್ಷಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದ ‘ವಿಶ್ವ ಬಂಡವಾಳ ಹೂಡಿಕೆದಾರರ ಸಮ್ಮೇಳನ’ದಿಂದ ಇಂದಿನವರೆಗೆ ಒಟ್ಟು ಎಂಟು ಸಾವಿರ ಕೋಟಿ ರೂಪಾಯಿಗಳ ಬಂಡವಾಳ ರಾಜ್ಯದ ವಿವಿಧ ವಲಯಕ್ಕೆ ಹರಿದುಬರಲಿದೆ.</p><p>ಇದರ ಜೊತೆಯಲ್ಲಿ ಮಾಹಿತಿ ತಂತ್ರಜ್ಞಾನ, ಬೃಹತ್ ಹಾಗೂ ಸಣ್ಣ ಕೈಗಾರಿಕೆ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಆಸಕ್ತರಾದ ಹಲವು ಉದ್ಯಮಿಗಳು ತಮ್ಮ ಪ್ರಸ್ತಾವಗಳನ್ನು ಎರಡು ದಿನಗಳ ಅವಧಿಯಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಮುಂದೆ ಸಲ್ಲಿಸಿದ್ದಾರೆ.</p><p>ಈ ಬಗ್ಗೆ ರಾಜ್ಯ ಸರ್ಕಾರವು ದೇಶ– ವಿದೇಶದ ಸುಮಾರು 15 ಉದ್ಯಮಿಗಳ ಜತೆ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದೆ.</p><p><strong>ಬಾರ್ಜ್ ಮೌಂಟೆಡ್ ಸ್ಥಾವರದ ಕಾಮಗಾರಿ ಚುರುಕು</strong></p><p><strong>ಮಂಗಳೂರು, ಜೂನ್ 6–</strong> ರಾಜ್ಯದ ವಿದ್ಯುತ್ ಬರ ನೀಗಿಸಲು ದಕ್ಷಿಣ ಕನ್ನಡ ಜಿಲ್ಲೆಯನ್ನು ಮುಖ್ಯವಾಗಿ ಆಯ್ಕೆ ಮಾಡಿಕೊಂಡ ಸರ್ಕಾರ ಹಮ್ಮಿಕೊಂಡ ಯೋಜನೆಗಳಲ್ಲಿ ಮೊದಲ ತೇಲುತೆಪ್ಪ ವಿದ್ಯುತ್ ಸ್ಥಾವರದ (ಬಾರ್ಜ್ ಮೌಂಟೆಡ್ ವಿದ್ಯುತ್ ಸ್ಥಾವರ) ಕಾಮಗಾರಿ ಮುಂಗಾರಿನ ಬಿರು ಮಳೆಯ ನಡುವೆಯೂ ಚುರುಕಾಗಿ ನಡೆಯುತ್ತಿದೆ.</p><p>ಮುಂದಿನ ಜನವರಿ ವೇಳೆಗೆ ದೇಶದ ಮೊದಲ 220 ಮೆ.ವಾ ಸಾಮರ್ಥ್ಯದ ತಣ್ಣೀರುಬಾವಿ ಬಾರ್ಜ್ ಮೌಂಟೆಡ್ ವಿದ್ಯುತ್ ಸ್ಥಾವರ ಯೋಜನೆ ತನ್ನ ವಿದ್ಯುತ್ ಉತ್ಪಾದನೆ ಆರಂಭಿಸುವ ಎಲ್ಲ ಸೂಚನೆಗಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು, ಜೂನ್ 6–</strong> ಬಂಡವಾಳ ಆಕರ್ಷಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದ ‘ವಿಶ್ವ ಬಂಡವಾಳ ಹೂಡಿಕೆದಾರರ ಸಮ್ಮೇಳನ’ದಿಂದ ಇಂದಿನವರೆಗೆ ಒಟ್ಟು ಎಂಟು ಸಾವಿರ ಕೋಟಿ ರೂಪಾಯಿಗಳ ಬಂಡವಾಳ ರಾಜ್ಯದ ವಿವಿಧ ವಲಯಕ್ಕೆ ಹರಿದುಬರಲಿದೆ.</p><p>ಇದರ ಜೊತೆಯಲ್ಲಿ ಮಾಹಿತಿ ತಂತ್ರಜ್ಞಾನ, ಬೃಹತ್ ಹಾಗೂ ಸಣ್ಣ ಕೈಗಾರಿಕೆ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಆಸಕ್ತರಾದ ಹಲವು ಉದ್ಯಮಿಗಳು ತಮ್ಮ ಪ್ರಸ್ತಾವಗಳನ್ನು ಎರಡು ದಿನಗಳ ಅವಧಿಯಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಮುಂದೆ ಸಲ್ಲಿಸಿದ್ದಾರೆ.</p><p>ಈ ಬಗ್ಗೆ ರಾಜ್ಯ ಸರ್ಕಾರವು ದೇಶ– ವಿದೇಶದ ಸುಮಾರು 15 ಉದ್ಯಮಿಗಳ ಜತೆ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದೆ.</p><p><strong>ಬಾರ್ಜ್ ಮೌಂಟೆಡ್ ಸ್ಥಾವರದ ಕಾಮಗಾರಿ ಚುರುಕು</strong></p><p><strong>ಮಂಗಳೂರು, ಜೂನ್ 6–</strong> ರಾಜ್ಯದ ವಿದ್ಯುತ್ ಬರ ನೀಗಿಸಲು ದಕ್ಷಿಣ ಕನ್ನಡ ಜಿಲ್ಲೆಯನ್ನು ಮುಖ್ಯವಾಗಿ ಆಯ್ಕೆ ಮಾಡಿಕೊಂಡ ಸರ್ಕಾರ ಹಮ್ಮಿಕೊಂಡ ಯೋಜನೆಗಳಲ್ಲಿ ಮೊದಲ ತೇಲುತೆಪ್ಪ ವಿದ್ಯುತ್ ಸ್ಥಾವರದ (ಬಾರ್ಜ್ ಮೌಂಟೆಡ್ ವಿದ್ಯುತ್ ಸ್ಥಾವರ) ಕಾಮಗಾರಿ ಮುಂಗಾರಿನ ಬಿರು ಮಳೆಯ ನಡುವೆಯೂ ಚುರುಕಾಗಿ ನಡೆಯುತ್ತಿದೆ.</p><p>ಮುಂದಿನ ಜನವರಿ ವೇಳೆಗೆ ದೇಶದ ಮೊದಲ 220 ಮೆ.ವಾ ಸಾಮರ್ಥ್ಯದ ತಣ್ಣೀರುಬಾವಿ ಬಾರ್ಜ್ ಮೌಂಟೆಡ್ ವಿದ್ಯುತ್ ಸ್ಥಾವರ ಯೋಜನೆ ತನ್ನ ವಿದ್ಯುತ್ ಉತ್ಪಾದನೆ ಆರಂಭಿಸುವ ಎಲ್ಲ ಸೂಚನೆಗಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>