ಭಾರತಕ್ಕೆ ನಿರೀಕ್ಷೆಗೂ ಮೀರಿದ ಸುಲಭ ಜಯ ತಂದ ಪುಲಕ
ಬೆಂಗಳೂರು, ಮಾರ್ಚ್ 9– ಸವಾಲೆನ್ನಿಸುವ ಮೊತ್ತಕ್ಕೂ ಪಾಕಿಸ್ತಾನ ತಂಡದವರು ‘ಸೇರಿಗೆ ಸವಾಸೇರು’ ಎನ್ನುವಂತೆ ಹಾಕಿದ ಲಗ್ಗೆಯಿಂದ ತತ್ತರಿಸಿದ್ದ ಭಾರತ ತಂಡದವರು ಶ್ರೀನಾಥ್, ವೆಂಕಟೇಶ್ ಪ್ರಸಾದ್ ಹಾಗೂ ಅನಿಲ್ ಕುಂಬ್ಳೆ ಅವರ ‘ಸೇಡಿನ ಪ್ರತಿದಾಳಿ’ಯ ಮೂಲಕ ಚೇತರಿಸಿಕೊಂಡು, 39 ರನ್ಗಳಿಂದ ಗೆದ್ದು ವಿಲ್ಸ್ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ಷಿಪ್ ಸೆಮಿಫೈನಲ್ ತಲುಪಿದರು.