ಕಾಂಗೈ ಬೆಂಬಲಕ್ಕೆ ರಾಷ್ಟ್ರೀಯರಂಗ ಯತ್ನ
ನವದೆಹಲಿ, ಮೇ 11 (ಪಿಟಿಐ)– ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚಿಸುವ ನಿಟ್ಟಿನಲ್ಲಿ ಎಡರಂಗ ಮತ್ತು ಜನತಾದಳ ಇಂದು ಗಂಭೀರ ಪ್ರಯತ್ನಗಳನ್ನು ಆರಂಭಿಸಿದವು. ಸಿಪಿಎಂ ಮುಖಂಡರಾದ ಜ್ಯೋತಿ ಬಸು ಮತ್ತು ಹರ್ಕಿಶನ್ಸಿಂಗ್ ಸುರ್ಜಿತ್ ಅವರು ಇಂದು ರಾಷ್ಟ್ರಪತಿಯನ್ನು ಭೇಟಿಯಾಗಿ ಸರ್ಕಾರ ರಚಿಸಲು ಆಹ್ವಾನಿಸುವಂತೆ ಕೋರಿದರು.