<p><strong>ಮನೆಗೇ ನೇರ ಟಿವಿ ಪ್ರಸಾರಕ್ಕೆ ಸಂಪುಟ ಒಪ್ಪಿಗೆ</strong></p>.<p>ನವದೆಹಲಿ, ನ. 2 (ಪಿಟಿಐ)– ದೇಶದ ಟಿವಿ ಪ್ರಸಾರದಲ್ಲಿ ಕ್ರಾಂತಿ ಮಾಡಬಹುದಾದ ‘ಮನೆಗೇ ನೇರವಾಗಿ ಪ್ರಸಾರ’ ಮಾಡುವ (ಡೈರೆಕ್ಟ್ ಟು ಹೋಮ್ ಅಥವಾ ಡಿಟಿಎಚ್) ಟೆಲಿವಿಷನ್ ಸೌಲಭ್ಯಕ್ಕೆ ಕೇಂದ್ರ ಸಚಿವ ಸಂಪುಟ ಇಂದು ಒಪ್ಪಿಗೆ ನೀಡಿತು.</p>.<p>ಈ ಅನುಮತಿಯ ಜತೆಗೆ ಈ ಕ್ಷೇತ್ರಕ್ಕೆ ಆಕರ್ಷಿಸಬಹುದಾದ ವಿದೇಶಿ ನೇರ ಬಂಡವಾಳದ ಮಿತಿಯನ್ನು ಶೇ 49ಕ್ಕೆ ನಿಗದಿ ಮಾಡಲಾಗಿದೆ. ಮಾತ್ರವಲ್ಲದೆ, ರಾಷ್ಟ್ರದ ಭದ್ರತೆ ಮತ್ತು ನೈತಿಕತೆಯನ್ನು ಕಾಪಾಡುವ ರೀತಿಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಟೆಲಿವಿಷನ್ ಸೌಲಭ್ಯಗಳ ವಿತರಣೆಯಲ್ಲಿ ಏಕಸ್ವಾಮ್ಯ ತಡೆಯಲು ಕೂಡ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.</p>.<p><strong>ಸಿದ್ಧ ಉಡುಪು: ನಿರ್ಬಂಧ ರದ್ದು– ಹೊಸ ಜವಳಿ ನೀತಿ</strong></p>.<p>ನವದೆಹಲಿ, ನ. 2– ಕೇಂದ್ರ ಸರ್ಕಾರ ಇಂದು ಪ್ರಕಟಿಸಿದ ಮಹತ್ವದ ಹೊಸ ಜವಳಿ ನೀತಿಯಲ್ಲಿ, ಸಿದ್ಧ ಉಡುಪುಗಳ ಉದ್ಯಮವನ್ನು ಸಣ್ಣ ಕೈಗಾರಿಕಾ ಕ್ಷೇತ್ರಕ್ಕಷ್ಟೇ ಸೀಮಿತಗೊಳಿಸಿ ಹೇರಲಾಗಿದ್ದ ನಿರ್ಬಂಧ ಮತ್ತು <br>ಆ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ವಿಧಿಸಲಾಗಿದ್ದ ಶೇ 24ರ ಮಿತಿಯನ್ನು ತೆಗೆದು ಹಾಕಲಾಗಿದೆ.</p>.<p>ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟದ ಸಭೆ ಈ ಹೊಸ ಜವಳಿ ನೀತಿಗೆ ಅಂಗೀಕಾರ ನೀಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮನೆಗೇ ನೇರ ಟಿವಿ ಪ್ರಸಾರಕ್ಕೆ ಸಂಪುಟ ಒಪ್ಪಿಗೆ</strong></p>.<p>ನವದೆಹಲಿ, ನ. 2 (ಪಿಟಿಐ)– ದೇಶದ ಟಿವಿ ಪ್ರಸಾರದಲ್ಲಿ ಕ್ರಾಂತಿ ಮಾಡಬಹುದಾದ ‘ಮನೆಗೇ ನೇರವಾಗಿ ಪ್ರಸಾರ’ ಮಾಡುವ (ಡೈರೆಕ್ಟ್ ಟು ಹೋಮ್ ಅಥವಾ ಡಿಟಿಎಚ್) ಟೆಲಿವಿಷನ್ ಸೌಲಭ್ಯಕ್ಕೆ ಕೇಂದ್ರ ಸಚಿವ ಸಂಪುಟ ಇಂದು ಒಪ್ಪಿಗೆ ನೀಡಿತು.</p>.<p>ಈ ಅನುಮತಿಯ ಜತೆಗೆ ಈ ಕ್ಷೇತ್ರಕ್ಕೆ ಆಕರ್ಷಿಸಬಹುದಾದ ವಿದೇಶಿ ನೇರ ಬಂಡವಾಳದ ಮಿತಿಯನ್ನು ಶೇ 49ಕ್ಕೆ ನಿಗದಿ ಮಾಡಲಾಗಿದೆ. ಮಾತ್ರವಲ್ಲದೆ, ರಾಷ್ಟ್ರದ ಭದ್ರತೆ ಮತ್ತು ನೈತಿಕತೆಯನ್ನು ಕಾಪಾಡುವ ರೀತಿಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಟೆಲಿವಿಷನ್ ಸೌಲಭ್ಯಗಳ ವಿತರಣೆಯಲ್ಲಿ ಏಕಸ್ವಾಮ್ಯ ತಡೆಯಲು ಕೂಡ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.</p>.<p><strong>ಸಿದ್ಧ ಉಡುಪು: ನಿರ್ಬಂಧ ರದ್ದು– ಹೊಸ ಜವಳಿ ನೀತಿ</strong></p>.<p>ನವದೆಹಲಿ, ನ. 2– ಕೇಂದ್ರ ಸರ್ಕಾರ ಇಂದು ಪ್ರಕಟಿಸಿದ ಮಹತ್ವದ ಹೊಸ ಜವಳಿ ನೀತಿಯಲ್ಲಿ, ಸಿದ್ಧ ಉಡುಪುಗಳ ಉದ್ಯಮವನ್ನು ಸಣ್ಣ ಕೈಗಾರಿಕಾ ಕ್ಷೇತ್ರಕ್ಕಷ್ಟೇ ಸೀಮಿತಗೊಳಿಸಿ ಹೇರಲಾಗಿದ್ದ ನಿರ್ಬಂಧ ಮತ್ತು <br>ಆ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ವಿಧಿಸಲಾಗಿದ್ದ ಶೇ 24ರ ಮಿತಿಯನ್ನು ತೆಗೆದು ಹಾಕಲಾಗಿದೆ.</p>.<p>ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟದ ಸಭೆ ಈ ಹೊಸ ಜವಳಿ ನೀತಿಗೆ ಅಂಗೀಕಾರ ನೀಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>