<p><strong>ಸಮಾಜವಾದದಲ್ಲಿ ನಂಬಿಕೆ ಇಲ್ಲದವರಉಚ್ಚಾಟನೆಗೆ ಚಂದ್ರಶೇಖರ್ ಕರೆ</strong><br /><strong>ಮದ್ರಾಸ್, ಮೇ 2–</strong> ಸಮಾಜವಾದದ ಆದರ್ಶಗಳು ಮತ್ತು ಗುರಿಗಳಲ್ಲಿ ನಂಬಿಕೆ ಇಲ್ಲದವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಗೊಳಿಸಬೇಕೆಂದು ಸಂಸತ್ ಸದಸ್ಯ ಹಾಗೂ ವಾಮಪಂಥೀಯ ಕಾಂಗ್ರೆಸ್ ನಾಯಕ ಶ್ರೀ ಚಂದ್ರಶೇಖರ್ ಅವರು ಇಂದು ಇಲ್ಲಿ ತಿಳಿಸಿದರು.</p>.<p>ಪಕ್ಷವನ್ನು ಹೆಚ್ಚು ಪ್ರಗತಿಶೀಲ ಹಾಗೂ ಕ್ರಿಯಾಶಾಲಿಯನ್ನಾಗಿ ಮಾಡಲು ಇಂತಹ ಉಚ್ಚಾಟನೆ ಅಗತ್ಯವೆಂದು ಅವರು ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.</p>.<p>ಪಕ್ಷದಲ್ಲಿ ತಾತ್ವಿಕ ಭಿನ್ನಾಭಿಪ್ರಾಯಗಳ ಘರ್ಷಣೆ ಅನಿವಾರ್ಯ. ಏಕೆಂದರೆ ರಾಷ್ಟ್ರೀಯ ಚಳವಳಿಗೆ ಸೇರಿದವರೆಲ್ಲರೂ ಪಕ್ಷದ ಆದರ್ಶಗಳಲ್ಲಿ ನಂಬಿಕೆ ಉಳ್ಳವರಲ್ಲ. ಹಾಗೆಂದ ಮಾತ್ರಕ್ಕೆ ಕಾಂಗ್ರೆಸ್ ಸಂಸ್ಥೆ ಕುಸಿಯುತ್ತಿದೆಯೆಂಬ ಅರ್ಥವಾಗದು ಎಂದೂ ಅವರು ನುಡಿದರು.</p>.<p><strong>‘ರೈಲ್ವೆ ಪ್ಲಾಟ್ಫಾರ್ಮ್ಗಿಂತ ಹೊಲಸು’</strong><br /><strong>ಪಲನಪುರ, ಮೇ 2–</strong> ‘ಕಾಂಗ್ರೆಸ್ ಈಗ ಒಂದು ಪಕ್ಷವೇ ಅಲ್ಲ. ಅದಕ್ಕೆ ಏಕರೂಪತೆಯನ್ನು ನೀಡಲು ಅದನ್ನು ‘ವಿಭಜಿಸ’ ಬೇಕಾದುದು ಅತ್ಯಗತ್ಯ. ಆ ಬಗ್ಗೆ ಸ್ಪಷ್ಟ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಶ್ರೀ ಎಸ್.ಕೆ. ಪಾಟೀಲ್ ಅವರು ಇಂದು ಇಲ್ಲಿ ಹೇಳಿದರು.</p>.<p>ತಾವು ಯಾವ ದಿಕ್ಕಿನಲ್ಲಿ ಹೋಗುತ್ತಿದ್ದೇವೆಂಬುದನ್ನರಿಯದ ಜನರ ಕೂಟ ಕಾಂಗ್ರೆಸ್ ಪಕ್ಷ. ಈಗ ಕಾಂಗ್ರೆಸ್ ಪಕ್ಷವು ರೈಲ್ವೆ ಪ್ಲಾಟ್ಫಾರ್ಮ್ಗಿಂತ ಹೊಲಸಾಗಿದೆ. ಪ್ಲಾಟ್ಫಾರ್ಮ್ನಲ್ಲಿರುವ ಜನಗಳಿಗಾದರೂ ತಾವು ಎಲ್ಲಿ ಹೋಗುತ್ತೇವೆನ್ನುವುದು ಗೊತ್ತಿರುತ್ತದೆ. ಆದರೆ ಕಾಂಗ್ರೆಸ್ನಲ್ಲಿರುವವರಿಗೆ ಅದೂ ತಿಳಿಯದು ಎಂದು<br />ಶ್ರೀ ಪಾಟೀಲ್ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಮಾಜವಾದದಲ್ಲಿ ನಂಬಿಕೆ ಇಲ್ಲದವರಉಚ್ಚಾಟನೆಗೆ ಚಂದ್ರಶೇಖರ್ ಕರೆ</strong><br /><strong>ಮದ್ರಾಸ್, ಮೇ 2–</strong> ಸಮಾಜವಾದದ ಆದರ್ಶಗಳು ಮತ್ತು ಗುರಿಗಳಲ್ಲಿ ನಂಬಿಕೆ ಇಲ್ಲದವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಗೊಳಿಸಬೇಕೆಂದು ಸಂಸತ್ ಸದಸ್ಯ ಹಾಗೂ ವಾಮಪಂಥೀಯ ಕಾಂಗ್ರೆಸ್ ನಾಯಕ ಶ್ರೀ ಚಂದ್ರಶೇಖರ್ ಅವರು ಇಂದು ಇಲ್ಲಿ ತಿಳಿಸಿದರು.</p>.<p>ಪಕ್ಷವನ್ನು ಹೆಚ್ಚು ಪ್ರಗತಿಶೀಲ ಹಾಗೂ ಕ್ರಿಯಾಶಾಲಿಯನ್ನಾಗಿ ಮಾಡಲು ಇಂತಹ ಉಚ್ಚಾಟನೆ ಅಗತ್ಯವೆಂದು ಅವರು ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.</p>.<p>ಪಕ್ಷದಲ್ಲಿ ತಾತ್ವಿಕ ಭಿನ್ನಾಭಿಪ್ರಾಯಗಳ ಘರ್ಷಣೆ ಅನಿವಾರ್ಯ. ಏಕೆಂದರೆ ರಾಷ್ಟ್ರೀಯ ಚಳವಳಿಗೆ ಸೇರಿದವರೆಲ್ಲರೂ ಪಕ್ಷದ ಆದರ್ಶಗಳಲ್ಲಿ ನಂಬಿಕೆ ಉಳ್ಳವರಲ್ಲ. ಹಾಗೆಂದ ಮಾತ್ರಕ್ಕೆ ಕಾಂಗ್ರೆಸ್ ಸಂಸ್ಥೆ ಕುಸಿಯುತ್ತಿದೆಯೆಂಬ ಅರ್ಥವಾಗದು ಎಂದೂ ಅವರು ನುಡಿದರು.</p>.<p><strong>‘ರೈಲ್ವೆ ಪ್ಲಾಟ್ಫಾರ್ಮ್ಗಿಂತ ಹೊಲಸು’</strong><br /><strong>ಪಲನಪುರ, ಮೇ 2–</strong> ‘ಕಾಂಗ್ರೆಸ್ ಈಗ ಒಂದು ಪಕ್ಷವೇ ಅಲ್ಲ. ಅದಕ್ಕೆ ಏಕರೂಪತೆಯನ್ನು ನೀಡಲು ಅದನ್ನು ‘ವಿಭಜಿಸ’ ಬೇಕಾದುದು ಅತ್ಯಗತ್ಯ. ಆ ಬಗ್ಗೆ ಸ್ಪಷ್ಟ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಶ್ರೀ ಎಸ್.ಕೆ. ಪಾಟೀಲ್ ಅವರು ಇಂದು ಇಲ್ಲಿ ಹೇಳಿದರು.</p>.<p>ತಾವು ಯಾವ ದಿಕ್ಕಿನಲ್ಲಿ ಹೋಗುತ್ತಿದ್ದೇವೆಂಬುದನ್ನರಿಯದ ಜನರ ಕೂಟ ಕಾಂಗ್ರೆಸ್ ಪಕ್ಷ. ಈಗ ಕಾಂಗ್ರೆಸ್ ಪಕ್ಷವು ರೈಲ್ವೆ ಪ್ಲಾಟ್ಫಾರ್ಮ್ಗಿಂತ ಹೊಲಸಾಗಿದೆ. ಪ್ಲಾಟ್ಫಾರ್ಮ್ನಲ್ಲಿರುವ ಜನಗಳಿಗಾದರೂ ತಾವು ಎಲ್ಲಿ ಹೋಗುತ್ತೇವೆನ್ನುವುದು ಗೊತ್ತಿರುತ್ತದೆ. ಆದರೆ ಕಾಂಗ್ರೆಸ್ನಲ್ಲಿರುವವರಿಗೆ ಅದೂ ತಿಳಿಯದು ಎಂದು<br />ಶ್ರೀ ಪಾಟೀಲ್ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>