<p><strong>ಕೇಂದ್ರ ಸಚಿವ ಕರಣ್ ಸಿಂಗ್ ರಾಜೀನಾಮೆ<br />ನವದೆಹಲಿ, ಮಾರ್ಚ್ 16– </strong>ಕೇಂದ್ರ ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಖಾತೆ ಸಚಿವ ಡಾ. ಕರಣ್ ಸಿಂಗ್ ಅವರು ಇಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ಹಠಾತ್ತನೆ ಪ್ರಕಟಿಸಿ ಲೋಕಸಭೆಯನ್ನು ಚಕಿತಗೊಳಿಸಿದರು.</p>.<p>ಗುರುವಾರ ಸಿಕಂದರಾಬಾದ್ನಲ್ಲಿ ಸಂಭವಿಸಿದ ಎಚ್.ಎಸ್. 784 ತರಬೇತಿ ವಿಮಾನ ಅಪಘಾತದ ನೈತಿಕ ಹೊಣೆಯನ್ನು ಹೊತ್ತುಕೊಂಡು ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.</p>.<p><strong>ಮುಜೀಬ್ ಪ್ರಮಾಣ ಸ್ವೀಕಾರ<br />ಢಾಕಾ, ಮಾರ್ಚ್ 16– </strong>ಬಾಂಗ್ಲಾ ದೇಶದ ಪ್ರಧಾನಿಯಾಗಿ ಷೇಖ್ ಮುಜೀಬುರ್ ರೆಹಮಾನ್ ಅವರು ಇಂದು ಅಧ್ಯಕ್ಷ ಅಬು ಸಯೀದ್ ಚೌಧುರಿ ಅವರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಅವರ ಸಂಪುಟದ ಇಪ್ಪತ್ತು ಸದಸ್ಯರೂ ಅವರ ಜತೆ ಪ್ರಮಾಣವಚನ ಸ್ವೀಕರಿಸಿದರು.</p>.<p>ಮೊದಲಿದ್ದ ಇಪ್ಪತ್ಮೂರು ಸದಸ್ಯರ ಸಂಪುಟದಲ್ಲಿನ ಮೂವರು ಸಚಿವರನ್ನು ಕೈಬಿಡಲಾಗಿದೆ. ಅವರು: ವಾಣಿಜ್ಯ ಸಚಿವ ಸಿದ್ದಿಕಿ, ಅಂಚೆ ಮತ್ತು ತಂತಿ ಸಚಿವ ಜಲಾಲುದ್ದೀನ್ ಮತ್ತು ಪೌರಾಡಳಿತ ಸಚಿವ ಶಂಸುಲ್ ಹಕ್. ಮನೋರಂಜನ್ ಧರ್ ಹೊಸದಾಗಿ ಸಂಪುಟವನ್ನು ಸೇರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೇಂದ್ರ ಸಚಿವ ಕರಣ್ ಸಿಂಗ್ ರಾಜೀನಾಮೆ<br />ನವದೆಹಲಿ, ಮಾರ್ಚ್ 16– </strong>ಕೇಂದ್ರ ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಖಾತೆ ಸಚಿವ ಡಾ. ಕರಣ್ ಸಿಂಗ್ ಅವರು ಇಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ಹಠಾತ್ತನೆ ಪ್ರಕಟಿಸಿ ಲೋಕಸಭೆಯನ್ನು ಚಕಿತಗೊಳಿಸಿದರು.</p>.<p>ಗುರುವಾರ ಸಿಕಂದರಾಬಾದ್ನಲ್ಲಿ ಸಂಭವಿಸಿದ ಎಚ್.ಎಸ್. 784 ತರಬೇತಿ ವಿಮಾನ ಅಪಘಾತದ ನೈತಿಕ ಹೊಣೆಯನ್ನು ಹೊತ್ತುಕೊಂಡು ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.</p>.<p><strong>ಮುಜೀಬ್ ಪ್ರಮಾಣ ಸ್ವೀಕಾರ<br />ಢಾಕಾ, ಮಾರ್ಚ್ 16– </strong>ಬಾಂಗ್ಲಾ ದೇಶದ ಪ್ರಧಾನಿಯಾಗಿ ಷೇಖ್ ಮುಜೀಬುರ್ ರೆಹಮಾನ್ ಅವರು ಇಂದು ಅಧ್ಯಕ್ಷ ಅಬು ಸಯೀದ್ ಚೌಧುರಿ ಅವರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಅವರ ಸಂಪುಟದ ಇಪ್ಪತ್ತು ಸದಸ್ಯರೂ ಅವರ ಜತೆ ಪ್ರಮಾಣವಚನ ಸ್ವೀಕರಿಸಿದರು.</p>.<p>ಮೊದಲಿದ್ದ ಇಪ್ಪತ್ಮೂರು ಸದಸ್ಯರ ಸಂಪುಟದಲ್ಲಿನ ಮೂವರು ಸಚಿವರನ್ನು ಕೈಬಿಡಲಾಗಿದೆ. ಅವರು: ವಾಣಿಜ್ಯ ಸಚಿವ ಸಿದ್ದಿಕಿ, ಅಂಚೆ ಮತ್ತು ತಂತಿ ಸಚಿವ ಜಲಾಲುದ್ದೀನ್ ಮತ್ತು ಪೌರಾಡಳಿತ ಸಚಿವ ಶಂಸುಲ್ ಹಕ್. ಮನೋರಂಜನ್ ಧರ್ ಹೊಸದಾಗಿ ಸಂಪುಟವನ್ನು ಸೇರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>