ತಮಿಳುನಾಡು ವಿಧಾನಸಭೆಯಲ್ಲಿ ಇಂದು ಈ ವಿಷಯವನ್ನು ತಿಳಿಸಿದ ಮುಖ್ಯಮಂತ್ರಿ ಶ್ರೀ ಕರುಣಾನಿಧಿ ಅವರು, ‘ಪಾನ ನಿರೋಧವನ್ನು ದೇಶದಾದ್ಯಂತ ರಾಷ್ಟ್ರೀಯ ನೀತಿಯಾಗಿ ಕೇಂದ್ರ ಸರ್ಕಾರ ಜಾರಿಗೆ ತರುವವರೆಗೆ ಅದು ರಾಜ್ಯದಲ್ಲಿ ರದ್ದಾಗಿರುವುದು. ಪಾನ ನಿರೋಧ ಜಾರಿಯಿಂದ ಆದಾಯದಲ್ಲಿ ಬಹಳ ನಷ್ಟ ಉಂಟಾಗಿದೆ’ ಎಂದೂ ಹೇಳಿದರು.