<p><strong>ಕೇರಳ ಸಂಯುಕ್ತ ರಂಗ ಬಿಕ್ಕಟ್ಟು ಇನ್ನಷ್ಟು ಉಲ್ಬಣ</strong><br /><strong>ತಿರುವನಂತಪುರ, ಮೇ 11</strong>: ಹಣಕಾಸು ಮಂತ್ರಿ ಶ್ರೀ ಸಿ.ಕೆ. ಕುಂಜು ಅವರ ವಿರುದ್ಧ ಮುಖ್ಯಮಂತ್ರಿ ಶ್ರೀ ಇ.ಎಂ.ಎಸ್. ನಂಬೂದಿರಿಪಾಡ್ ಅವರು ಕೈಗೊಂಡ ಕ್ರಮದ ಪರಿಣಾಮವಾಗಿ ಕೇರಳ ಸಂಯುಕ್ತ ರಂಗದಲ್ಲಿ ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸಿ ಸಂಯುಕ್ತ ರಂಗ ಸರ್ಕಾರವು ಅನಿಶ್ಚಿತ ಪರಿಸ್ಥಿತಿಯಲ್ಲಿ ಸಿಲುಕಿದೆ.</p>.<p>ಜಿ.ನಾರಾಯಣ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರು</p>.<p><strong>ಬೆಂಗಳೂರು, ಮೇ 11:</strong> ನಗರದ ಮಾಜಿ ಮೇಯರ್ ಹಾಗೂ ‘ವಿನೋದ್’ ಪತ್ರಿಕೆಯ ಸಂಪಾದಕ ಶ್ರೀ.ಜಿ. ನಾರಾಯಣ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಇಲ್ಲಿ 620 ಮತಗಳ ಬಹುಮತದಿಂದ ಚುನಾಯಿತರಾದರು.</p>.<p>ಅಧ್ಯಕ್ಷ ಪದವಿ ಅವಧಿ ಮೂರು ವರ್ಷಗಳು.</p>.<p><strong>ಇನ್ನೆರಡು ಉಕ್ಕು ಕಾರ್ಖಾನೆ</strong><br /><strong>ನವದೆಹಲಿ, ಮೇ 11:</strong> ಐದನೇ ಯೋಜನೆಯಲ್ಲಿ ಒಂದೆರಡು ಸಂಪೂರ್ಣ ಸ್ವದೇಶಿ ಉಕ್ಕು ಕಾರ್ಖಾನೆಗಳನ್ನು ಸ್ಥಾಪಿಸಲಾಗುವುದು ಎಂದು ಉಕ್ಕು ಸಚಿವ ಎಂ. ಪೂಣಚ್ಚ ಇಂದು ಇಲ್ಲಿ ಸೂಚನೆ ಇತ್ತರು.</p>.<p>ಅಂದಾಜು ಮಾಡಲಾಗಿರುವ ಮೂವತ್ತು ಲಕ್ಷ ಟನ್ ಉಕ್ಕು ಉತ್ಪನ್ನಗಳ ಕೊರತೆಯನ್ನು ತುಂಬಲು ಈ ಕಾರ್ಖಾನೆಗಳ ಸ್ಥಾಪನೆ.</p>.<p>ಕೊರತೆಯನ್ನು ನೀಗಲು ಈ ಹೊಸ ಸಾಮರ್ಥ್ಯಗಳ ಸೃಷ್ಟಿಯನ್ನು ಯೋಜನಾ ಆಯೋಗ ಪರಿಶೀಲಿಸುತ್ತಿದೆ. ಒಪ್ಪಿಗೆ ದೊರೆತ ಕೂಡಲೇ ಈಗಲಿಂದಲೇ ಮುಂಗಡ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.</p>.<p><strong>ಸಿಂಹಳದಲ್ಲಿ ತಮಿಳು ಚಲನ ಚಿತ್ರಗಳ ವಿರುದ್ಧ ಶೀಘ್ರವೇ ನಿಷೇಧಾಜ್ಞೆ?</strong><br /><strong>ಕೊಲಂಬೊ ಮೇ11:</strong> ಭಾರತೀಯ ಚಲನಚಿತ್ರಗಳು ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತೀಯ ಚಲನಚಿತ್ರಗಳ ಪ್ರದರ್ಶನವನ್ನು ಸಿಂಹಳದಲ್ಲಿ ಸರ್ಕಾರ ಶೀಘ್ರವೇ ನಿಷೇಧಿಸಬೇಕೆಂದು ಸಿಂಹಳ ಗೃಹ ಮಂತ್ರಿ ಡಾ. ಡಬ್ಲ್ಯೂ ಧನನಾಯಕ ಅವರು ಸಚಿವ ಸಂಪುಟಕ್ಕೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಪ್ರಾರ್ಥಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೇರಳ ಸಂಯುಕ್ತ ರಂಗ ಬಿಕ್ಕಟ್ಟು ಇನ್ನಷ್ಟು ಉಲ್ಬಣ</strong><br /><strong>ತಿರುವನಂತಪುರ, ಮೇ 11</strong>: ಹಣಕಾಸು ಮಂತ್ರಿ ಶ್ರೀ ಸಿ.ಕೆ. ಕುಂಜು ಅವರ ವಿರುದ್ಧ ಮುಖ್ಯಮಂತ್ರಿ ಶ್ರೀ ಇ.ಎಂ.ಎಸ್. ನಂಬೂದಿರಿಪಾಡ್ ಅವರು ಕೈಗೊಂಡ ಕ್ರಮದ ಪರಿಣಾಮವಾಗಿ ಕೇರಳ ಸಂಯುಕ್ತ ರಂಗದಲ್ಲಿ ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸಿ ಸಂಯುಕ್ತ ರಂಗ ಸರ್ಕಾರವು ಅನಿಶ್ಚಿತ ಪರಿಸ್ಥಿತಿಯಲ್ಲಿ ಸಿಲುಕಿದೆ.</p>.<p>ಜಿ.ನಾರಾಯಣ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರು</p>.<p><strong>ಬೆಂಗಳೂರು, ಮೇ 11:</strong> ನಗರದ ಮಾಜಿ ಮೇಯರ್ ಹಾಗೂ ‘ವಿನೋದ್’ ಪತ್ರಿಕೆಯ ಸಂಪಾದಕ ಶ್ರೀ.ಜಿ. ನಾರಾಯಣ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಇಲ್ಲಿ 620 ಮತಗಳ ಬಹುಮತದಿಂದ ಚುನಾಯಿತರಾದರು.</p>.<p>ಅಧ್ಯಕ್ಷ ಪದವಿ ಅವಧಿ ಮೂರು ವರ್ಷಗಳು.</p>.<p><strong>ಇನ್ನೆರಡು ಉಕ್ಕು ಕಾರ್ಖಾನೆ</strong><br /><strong>ನವದೆಹಲಿ, ಮೇ 11:</strong> ಐದನೇ ಯೋಜನೆಯಲ್ಲಿ ಒಂದೆರಡು ಸಂಪೂರ್ಣ ಸ್ವದೇಶಿ ಉಕ್ಕು ಕಾರ್ಖಾನೆಗಳನ್ನು ಸ್ಥಾಪಿಸಲಾಗುವುದು ಎಂದು ಉಕ್ಕು ಸಚಿವ ಎಂ. ಪೂಣಚ್ಚ ಇಂದು ಇಲ್ಲಿ ಸೂಚನೆ ಇತ್ತರು.</p>.<p>ಅಂದಾಜು ಮಾಡಲಾಗಿರುವ ಮೂವತ್ತು ಲಕ್ಷ ಟನ್ ಉಕ್ಕು ಉತ್ಪನ್ನಗಳ ಕೊರತೆಯನ್ನು ತುಂಬಲು ಈ ಕಾರ್ಖಾನೆಗಳ ಸ್ಥಾಪನೆ.</p>.<p>ಕೊರತೆಯನ್ನು ನೀಗಲು ಈ ಹೊಸ ಸಾಮರ್ಥ್ಯಗಳ ಸೃಷ್ಟಿಯನ್ನು ಯೋಜನಾ ಆಯೋಗ ಪರಿಶೀಲಿಸುತ್ತಿದೆ. ಒಪ್ಪಿಗೆ ದೊರೆತ ಕೂಡಲೇ ಈಗಲಿಂದಲೇ ಮುಂಗಡ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.</p>.<p><strong>ಸಿಂಹಳದಲ್ಲಿ ತಮಿಳು ಚಲನ ಚಿತ್ರಗಳ ವಿರುದ್ಧ ಶೀಘ್ರವೇ ನಿಷೇಧಾಜ್ಞೆ?</strong><br /><strong>ಕೊಲಂಬೊ ಮೇ11:</strong> ಭಾರತೀಯ ಚಲನಚಿತ್ರಗಳು ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತೀಯ ಚಲನಚಿತ್ರಗಳ ಪ್ರದರ್ಶನವನ್ನು ಸಿಂಹಳದಲ್ಲಿ ಸರ್ಕಾರ ಶೀಘ್ರವೇ ನಿಷೇಧಿಸಬೇಕೆಂದು ಸಿಂಹಳ ಗೃಹ ಮಂತ್ರಿ ಡಾ. ಡಬ್ಲ್ಯೂ ಧನನಾಯಕ ಅವರು ಸಚಿವ ಸಂಪುಟಕ್ಕೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಪ್ರಾರ್ಥಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>