<p><strong>ಮುಷ್ಕರ ಎದುರಿಸಲು ಸಿದ್ಧತೆ; ಹಲವು ಪ್ರಯಾಣಿಕ ರೈಲುಗಳ ಸಂಚಾರ ವಾರಾಂತ್ಯದಿಂದ ರದ್ದು</strong></p><p><strong>ನವದೆಹಲಿ, ಏ. 24–</strong> ಮೇ 8ರಿಂದ ರೈಲ್ವೆ ನೌಕರರ ‘ಅನಿರ್ದಿಷ್ಟ’ ಮುಷ್ಕರದ ಬೆದರಿಕೆಯನ್ನು ಎದುರಿಸುತ್ತಿರುವ ರೈಲ್ವೆ ಸಚಿವ ಶಾಖೆಯು ಕಲ್ಲಿದ್ದಲು ಉಳಿಸುವ ಕ್ರಮವಾಗಿ ಏಪ್ರಿಲ್ 27ರಿಂದ ಅನೇಕ ಪ್ರಯಾಣಿಕರ ರೈಲುಗಳ ಸಂಚಾರವನ್ನು ರದ್ದುಪಡಿಸಲು ಇಂದು ನಿರ್ಧರಿಸಿತು.</p><p>ಮುಷ್ಕರದ ಬಗೆಗೆ ಬಿಗಿ ನಿಲುವು ತಳೆದಿರುವ ರೈಲ್ವೆ ಸಚಿವ ಖಾತೆಯು ಮುಷ್ಕರ ಹೂಡುವವರಿಗೆ ಭಾರತ ಸಂರಕ್ಷಣಾ ವಿಧಿಯ ಅನ್ವಯ ಮೂರು ವರ್ಷಕ್ಕೂ ಹೆಚ್ಚು ಕಾಲ ಜೈಲುವಾಸದ ಶಿಕ್ಷೆ ವಿಧಿಸಲು ಅವಕಾಶವಿದೆಯೆಂದು ಎಚ್ಚರಿಕೆ ನೀಡಿತು.</p><p>ಆದರೆ ಎಷ್ಟು ಸಂಖ್ಯೆಯ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗುವುದೆಂದು ಹೇಳಲು ಸಚಿವ ಖಾತೆಯ ವಕ್ತಾರರಿಗೆ ಸಾಧ್ಯವಾಗಲಿಲ್ಲ. </p><p>ರಾಷ್ಟ್ರದ ಮುಖ್ಯ ಆರ್ಥಿಕ ಚಟುವಟಿಕೆಗೆ ಧಕ್ಕೆ ಬರದಂತೆ ಎಚ್ಚರಿಕೆ ಕ್ರಮವಾಗಿ ಕಲ್ಲಿದ್ದಲು ಉಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದರು. ದೂರ ಪ್ರಯಾಣದ ಮೇಲ್ ಮತ್ತು ಎಕ್ಸ್ಪ್ರೆಸ್ ರೈಲುಗಳಲ್ಲದೆ ಪ್ಯಾಸೆಂಜರ್ ರೈಲುಗಳ ಸಂಚಾರವನ್ನೂ ರದ್ದುಪಡಿಸಲಾಗುವುದು. ಕನಿಷ್ಠ ಸಂಖ್ಯೆಯಲ್ಲಿ ಮಾತ್ರ ರೈಲುಗಳನ್ನು ಓಡಿಸಲಾಗುವುದು.</p><p><strong>***</strong></p><p><strong>ಎಸ್ಎಸ್ಎಲ್ಸಿ ಮೌಲ್ಯಮಾಪಕರಿಗೆ 2 ರೂ. ವಿಶೇಷ ದಿನಭತ್ಯೆ</strong></p><p><strong>ಬೆಂಗಳೂರು, ಏ. 24–</strong> ಎಸ್ಎಸ್ಎಲ್ಸಿ ಮೌಲ್ಯಮಾಪಕರಿಗೆಲ್ಲ ಎರಡು ರೂಪಾಯಿ ವಿಶೇಷ ದಿನಭತ್ಯೆ ನೀಡುವ ನಿರ್ಧಾರವನ್ನು ಶಿಕ್ಷಣ ಸಚಿವ ಶ್ರೀ ಎಂ. ಮಲ್ಲಿಕಾರ್ಜುನಸ್ವಾಮಿ ಅವರು ಇಂದು ವಿಧಾನಸಭೆಯಲ್ಲಿ ಪ್ರಕಟಿಸಿ, ಅದರಿಂದ ಶಿಕ್ಷಕರು ಕೇಳಿದ್ದ ಮೊತ್ತವನ್ನು ಪೂರ್ಣವಾಗಿ ನೀಡಿದಂತಾಗಿದೆ ಎಂದು ಹೇಳಿದರು.</p><p>ಮುಖ್ಯಮಂತ್ರಿಯವರು ನಿನ್ನೆ ಸಭೆಗೆ ಭರವಸೆ ನೀಡಿದಂತೆ ಪರೀಕ್ಷಾ ಮಂಡಲಿಯ ಜೊತೆ ಮಾತುಕತೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಷ್ಕರ ಎದುರಿಸಲು ಸಿದ್ಧತೆ; ಹಲವು ಪ್ರಯಾಣಿಕ ರೈಲುಗಳ ಸಂಚಾರ ವಾರಾಂತ್ಯದಿಂದ ರದ್ದು</strong></p><p><strong>ನವದೆಹಲಿ, ಏ. 24–</strong> ಮೇ 8ರಿಂದ ರೈಲ್ವೆ ನೌಕರರ ‘ಅನಿರ್ದಿಷ್ಟ’ ಮುಷ್ಕರದ ಬೆದರಿಕೆಯನ್ನು ಎದುರಿಸುತ್ತಿರುವ ರೈಲ್ವೆ ಸಚಿವ ಶಾಖೆಯು ಕಲ್ಲಿದ್ದಲು ಉಳಿಸುವ ಕ್ರಮವಾಗಿ ಏಪ್ರಿಲ್ 27ರಿಂದ ಅನೇಕ ಪ್ರಯಾಣಿಕರ ರೈಲುಗಳ ಸಂಚಾರವನ್ನು ರದ್ದುಪಡಿಸಲು ಇಂದು ನಿರ್ಧರಿಸಿತು.</p><p>ಮುಷ್ಕರದ ಬಗೆಗೆ ಬಿಗಿ ನಿಲುವು ತಳೆದಿರುವ ರೈಲ್ವೆ ಸಚಿವ ಖಾತೆಯು ಮುಷ್ಕರ ಹೂಡುವವರಿಗೆ ಭಾರತ ಸಂರಕ್ಷಣಾ ವಿಧಿಯ ಅನ್ವಯ ಮೂರು ವರ್ಷಕ್ಕೂ ಹೆಚ್ಚು ಕಾಲ ಜೈಲುವಾಸದ ಶಿಕ್ಷೆ ವಿಧಿಸಲು ಅವಕಾಶವಿದೆಯೆಂದು ಎಚ್ಚರಿಕೆ ನೀಡಿತು.</p><p>ಆದರೆ ಎಷ್ಟು ಸಂಖ್ಯೆಯ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗುವುದೆಂದು ಹೇಳಲು ಸಚಿವ ಖಾತೆಯ ವಕ್ತಾರರಿಗೆ ಸಾಧ್ಯವಾಗಲಿಲ್ಲ. </p><p>ರಾಷ್ಟ್ರದ ಮುಖ್ಯ ಆರ್ಥಿಕ ಚಟುವಟಿಕೆಗೆ ಧಕ್ಕೆ ಬರದಂತೆ ಎಚ್ಚರಿಕೆ ಕ್ರಮವಾಗಿ ಕಲ್ಲಿದ್ದಲು ಉಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದರು. ದೂರ ಪ್ರಯಾಣದ ಮೇಲ್ ಮತ್ತು ಎಕ್ಸ್ಪ್ರೆಸ್ ರೈಲುಗಳಲ್ಲದೆ ಪ್ಯಾಸೆಂಜರ್ ರೈಲುಗಳ ಸಂಚಾರವನ್ನೂ ರದ್ದುಪಡಿಸಲಾಗುವುದು. ಕನಿಷ್ಠ ಸಂಖ್ಯೆಯಲ್ಲಿ ಮಾತ್ರ ರೈಲುಗಳನ್ನು ಓಡಿಸಲಾಗುವುದು.</p><p><strong>***</strong></p><p><strong>ಎಸ್ಎಸ್ಎಲ್ಸಿ ಮೌಲ್ಯಮಾಪಕರಿಗೆ 2 ರೂ. ವಿಶೇಷ ದಿನಭತ್ಯೆ</strong></p><p><strong>ಬೆಂಗಳೂರು, ಏ. 24–</strong> ಎಸ್ಎಸ್ಎಲ್ಸಿ ಮೌಲ್ಯಮಾಪಕರಿಗೆಲ್ಲ ಎರಡು ರೂಪಾಯಿ ವಿಶೇಷ ದಿನಭತ್ಯೆ ನೀಡುವ ನಿರ್ಧಾರವನ್ನು ಶಿಕ್ಷಣ ಸಚಿವ ಶ್ರೀ ಎಂ. ಮಲ್ಲಿಕಾರ್ಜುನಸ್ವಾಮಿ ಅವರು ಇಂದು ವಿಧಾನಸಭೆಯಲ್ಲಿ ಪ್ರಕಟಿಸಿ, ಅದರಿಂದ ಶಿಕ್ಷಕರು ಕೇಳಿದ್ದ ಮೊತ್ತವನ್ನು ಪೂರ್ಣವಾಗಿ ನೀಡಿದಂತಾಗಿದೆ ಎಂದು ಹೇಳಿದರು.</p><p>ಮುಖ್ಯಮಂತ್ರಿಯವರು ನಿನ್ನೆ ಸಭೆಗೆ ಭರವಸೆ ನೀಡಿದಂತೆ ಪರೀಕ್ಷಾ ಮಂಡಲಿಯ ಜೊತೆ ಮಾತುಕತೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>