<p><strong>ಹುಬ್ಬಳ್ಳಿ– ಧಾರವಾಡ ಕಾರ್ಪೊರೇಷನ್ ರದ್ದಿಗೆ ಷೋಕಾಸ್ ನೋಟಿಸ್</strong></p><p><strong>ಬೆಂಗಳೂರು, ಮೇ 22–</strong> ಹುಬ್ಬಳ್ಳಿ– ಧಾರವಾಡ ನಗರ ಕಾರ್ಪೊರೇಷನ್ ಅನ್ನು ಏಕೆ ರದ್ದು ಮಾಡಬಾರದೆಂದು ವಿವರಣೆ ಕೇಳಿ ಸರ್ಕಾರ ಷೋಕಾಸ್ ನೋಟಿಸ್ ನೀಡಿದೆಯೆಂದು ಅಧಿಕೃತವಾಗಿ ತಿಳಿದುಬಂದಿದೆ.</p><p>ಆಡಳಿತ ನಿರ್ವಹಣೆಯಲ್ಲಿ ನಗರಸಭೆ ಆಡಳಿತ ತನ್ನ ಕರ್ತವ್ಯಲೋಪ ಮಾಡಿದೆಯೆಂದು ಹಲವು ಆಪಾದನೆಗಳನ್ನು ನೋಟಿಸಿನಲ್ಲಿ ಸೇರಿಸಲಾಗಿದೆ ಎಂದು ಗೊತ್ತಾಗಿದೆ.</p><p>ಹುಬ್ಬಳ್ಳಿ– ಧಾರವಾಡ ನಗರಸಭೆಯ ಮಾಜಿ ಮೇಯರ್ ಬೆಂಗಳೂರಿನ ಅವರು ಅಧಿಕಾರದಲ್ಲಿ ಮುಂದುವರೆದ ಪ್ರಸಂಗ ಶಾಸನಸಭೆಯಲ್ಲಿ ವಿಪರೀತ ಟೀಕೆಗಳಿಗೆ ಅವಕಾಶ ನೀಡಿದ ಮೇಲೆ ಚುನಾವಣೆಯನ್ನು ನಡೆಸಲಾಗಿದ್ದು, ವಿರೋಧ ಪಕ್ಷದ ಮಥಿಯಾಸ್ ಅವರು 9 ತಿಂಗಳ ಅವಧಿಗೆ ಮಾತ್ರ ಮೇಯರ್ ಆಗಿ ಆಯ್ಕೆಯಾದರು. ಜೂನ್ 3ರಂದು ಹೊಸ ಮೇಯರ್ ಆಯ್ಕೆ ನಡೆಯಬೇಕಾಗಿದೆ.</p><p>***</p><p><strong>ಸದ್ಯದಲ್ಲೇ ಕೃತಕ ಮಳೆ ಕಾರ್ಯಾರಂಭ</strong></p><p><strong>ಬೆಂಗಳೂರು, ಮೇ 22–</strong> ಲಿಂಗನಮಕ್ಕಿ ಜಲಾಶಯಕ್ಕೆ ನೀರು ಬರುವ ಪ್ರದೇಶದಲ್ಲಿ ಕೃತಕ ಮಳೆ ಬರಿಸುವ ಯತ್ನ ಸದ್ಯದಲ್ಲೇ ಪ್ರಾರಂಭವಾಗಲಿದೆ. </p><p>ಈಗಾಗಲೇ ವಿದ್ಯುತ್ ಮಂಡಳಿಯ ವಿಶೇಷಾಧಿಕಾರಿಗಳು ಸಂಬಂಧಪಟ್ಟವರೊಡನೆ ಮಾತುಕತೆ ನಡೆಸಲು ಮುಂಬಯಿ ಮತ್ತು ಪೂನಾಕ್ಕೆ ತೆರಳಿದ್ದಾರೆ. ಖಾಸಗಿ ವಿಮಾನವನ್ನು ಅದಕ್ಕಾಗಿ ಪಡೆಯುವ ಯತ್ನ ನಡೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ– ಧಾರವಾಡ ಕಾರ್ಪೊರೇಷನ್ ರದ್ದಿಗೆ ಷೋಕಾಸ್ ನೋಟಿಸ್</strong></p><p><strong>ಬೆಂಗಳೂರು, ಮೇ 22–</strong> ಹುಬ್ಬಳ್ಳಿ– ಧಾರವಾಡ ನಗರ ಕಾರ್ಪೊರೇಷನ್ ಅನ್ನು ಏಕೆ ರದ್ದು ಮಾಡಬಾರದೆಂದು ವಿವರಣೆ ಕೇಳಿ ಸರ್ಕಾರ ಷೋಕಾಸ್ ನೋಟಿಸ್ ನೀಡಿದೆಯೆಂದು ಅಧಿಕೃತವಾಗಿ ತಿಳಿದುಬಂದಿದೆ.</p><p>ಆಡಳಿತ ನಿರ್ವಹಣೆಯಲ್ಲಿ ನಗರಸಭೆ ಆಡಳಿತ ತನ್ನ ಕರ್ತವ್ಯಲೋಪ ಮಾಡಿದೆಯೆಂದು ಹಲವು ಆಪಾದನೆಗಳನ್ನು ನೋಟಿಸಿನಲ್ಲಿ ಸೇರಿಸಲಾಗಿದೆ ಎಂದು ಗೊತ್ತಾಗಿದೆ.</p><p>ಹುಬ್ಬಳ್ಳಿ– ಧಾರವಾಡ ನಗರಸಭೆಯ ಮಾಜಿ ಮೇಯರ್ ಬೆಂಗಳೂರಿನ ಅವರು ಅಧಿಕಾರದಲ್ಲಿ ಮುಂದುವರೆದ ಪ್ರಸಂಗ ಶಾಸನಸಭೆಯಲ್ಲಿ ವಿಪರೀತ ಟೀಕೆಗಳಿಗೆ ಅವಕಾಶ ನೀಡಿದ ಮೇಲೆ ಚುನಾವಣೆಯನ್ನು ನಡೆಸಲಾಗಿದ್ದು, ವಿರೋಧ ಪಕ್ಷದ ಮಥಿಯಾಸ್ ಅವರು 9 ತಿಂಗಳ ಅವಧಿಗೆ ಮಾತ್ರ ಮೇಯರ್ ಆಗಿ ಆಯ್ಕೆಯಾದರು. ಜೂನ್ 3ರಂದು ಹೊಸ ಮೇಯರ್ ಆಯ್ಕೆ ನಡೆಯಬೇಕಾಗಿದೆ.</p><p>***</p><p><strong>ಸದ್ಯದಲ್ಲೇ ಕೃತಕ ಮಳೆ ಕಾರ್ಯಾರಂಭ</strong></p><p><strong>ಬೆಂಗಳೂರು, ಮೇ 22–</strong> ಲಿಂಗನಮಕ್ಕಿ ಜಲಾಶಯಕ್ಕೆ ನೀರು ಬರುವ ಪ್ರದೇಶದಲ್ಲಿ ಕೃತಕ ಮಳೆ ಬರಿಸುವ ಯತ್ನ ಸದ್ಯದಲ್ಲೇ ಪ್ರಾರಂಭವಾಗಲಿದೆ. </p><p>ಈಗಾಗಲೇ ವಿದ್ಯುತ್ ಮಂಡಳಿಯ ವಿಶೇಷಾಧಿಕಾರಿಗಳು ಸಂಬಂಧಪಟ್ಟವರೊಡನೆ ಮಾತುಕತೆ ನಡೆಸಲು ಮುಂಬಯಿ ಮತ್ತು ಪೂನಾಕ್ಕೆ ತೆರಳಿದ್ದಾರೆ. ಖಾಸಗಿ ವಿಮಾನವನ್ನು ಅದಕ್ಕಾಗಿ ಪಡೆಯುವ ಯತ್ನ ನಡೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>