ಧಾರವಾಡ, ಮಾರ್ಚ್ 1– ಗೆಲ್ಲಲೇಬೇಕೆಂಬ ವಿಶ್ವಪ್ರಯತ್ನ– ಸೋಲಿಸಲೇಬೇಕೆಂಬ ಜಿದ್ದಿನ ನಡುವೆ ಹೋರಾಟ ನಡೆಯುತ್ತಿರುವ ಧಾರವಾಡ ಉತ್ತರ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಪ್ರಮಾಣದಲ್ಲಿನ ಮತದಾನವು ಆಡಳಿತ ಕಾಂಗ್ರೆಸ್ ಅಭ್ಯರ್ಥಿಯಜಯಕ್ಕೆ ಕಾರಣವಾಗುವ ಸಂಭವವಿದೆ.
ಕೇಂದ್ರ ಸರ್ಕಾರದ ಉಪಸಚಿವೆಡಾ. ಸರೋಜಿನಿ ಮಹಿಷಿ ಹಾಗೂಸಂಸ್ಥಾ ಕಾಂಗ್ರೆಸ್ಸಿನ ಶ್ರೀ ಆರ್.ಜಿ.ವಾಲಿ ಅವರುಗಳ ನಡುವೆ ಸ್ಪರ್ಧೆಯಿರುವ ಕ್ಷೇತ್ರದಲ್ಲಿ ಆಡಳಿತ ಕಾಂಗ್ರೆಸ್ಸಿಗರುಈ ನಿರೀಕ್ಷೆಯಿಂದ ಪ್ರಯತ್ನ ಮಾಡುತ್ತಿದ್ದಾರೆ.
ಏಳು ರಾಜ್ಯಗಳಲ್ಲಿಶಾಂತಿಯುತ ಮತದಾನ
ನವದೆಹಲಿ, ಮಾರ್ಚ್ 1– ಲೋಕಸಭೆಯ 101 ಕ್ಷೇತ್ರಗಳಲ್ಲಿ ಸಂಪೂರ್ಣವಾಗಿಮತ್ತು ಇತರೆ 79 ಕ್ಷೇತ್ರಗಳ ಕೆಲವೆಡೆ ಮೊದಲ ಹಂತದ ಚುನಾವಣೆಯಲ್ಲಿಇಂದು ಮತದಾನ ಮುಕ್ತಾಯವಾಯಿತು.
ಬಿಹಾರದಲ್ಲಿ ಕೆಲವೆಡೆ ಘರ್ಷಣೆ, ಮತಪೆಟ್ಟಿಗೆ ಕಳವು, ಎರಡು ಸಾವು; ಭೋಪಾಲ್ನಲ್ಲಿ ನಡೆದ ಘರ್ಷಣೆಯಲ್ಲಿ ನಾಲ್ವರಿಗೆ ಗಾಯ ಮುಂತಾದ ಸಣ್ಣಪುಟ್ಟ ಘಟನೆಗಳ ವಿನಾ ಉಳಿದೆಡೆ ಸಾಮಾನ್ಯವಾಗಿ ಶಾಂತಿಯುತವಾಗಿಯೇ ನಡೆಯಿತು.