<p><strong>ಸೂಡಾನಿನಿಂದ ಆಮದು ನಿಲ್ಲಿಸಿ ರಾಜ್ಯದಲ್ಲಿ ಹತ್ತಿ ಸಂಗ್ರಹ ಕರಗಿಸಲು ಕೇಂದ್ರಕ್ಕೆ ಸಲಹೆ</strong></p>.<p><strong>ಬೆಂಗಳೂರು, ಜೂನ್ 3–</strong> ಮೈಸೂರು ರಾಜ್ಯದಲ್ಲಿ ವ್ಯಾಪಾರಿಗಳು ಮತ್ತು ಗಿರಣಿ ಗಳು ಕೊಳ್ಳದೆ ರೈತರಲ್ಲಿ ಕೋಟ್ಯಂತರ ರೂ. ಬೆಲೆ ಹತ್ತಿ ದಾಸ್ತಾನು ಉಳಿದಿರುವ ಬಗ್ಗೆ ಶೀಘ್ರ ಪರಿಹಾರ ಸೂಚಿಸುವ ಭರವಸೆ ಯನ್ನು ಕೇಂದ್ರವು ರಾಜ್ಯ ಸರ್ಕಾರಕ್ಕೆ ನೀಡಿದೆಯೆಂದು ತಿಳಿದುಬಂದಿದೆ.</p>.<p>ದೇಶದಲ್ಲಿಯೇ ಗಿರಣಿಗಳು ಕೊಳ್ಳದ ‘ಲಾಂಗ್ ಸ್ಟೇಪಲ್’ ಹತ್ತಿ ರೈತರ ಬಳಿ ಉಳಿದು ಹೋಗಿರುವಾಗ ಸೂಡಾನಿನಿಂದ ಹತ್ತಿ ಆಮದು ಮಾಡಿಕೊಳ್ಳುವ ಔಚಿತ್ಯವನ್ನು ರಾಜ್ಯ ಸರ್ಕಾರದ ವಲಯಗಳಲ್ಲಿ ಪ್ರಶ್ನಿಸಲಾಗುತ್ತಿದೆ.</p>.<p><strong>ಚೀನಾದ ಖಂಡಾಂತರ ಕ್ಷಿಪಣಿ ಪ್ರಯೋಗ ಸಿದ್ಧತೆ: ರಾಜ್ಯಸಭೆ ಕಳವಳ</strong></p>.<p><strong>ನವದೆಹಲಿ, ಜೂನ್ 3– </strong>ಹಿಂದೂ ಮಹಾಸಾಗರದಲ್ಲಿ ಚೀನಾ ಖಂಡಾಂತರ ಕ್ಷಿಪಣಿಯೊಂದರ ಪರೀಕ್ಷಾ ಪ್ರಯೋಗ ನಡೆಸಲಿದೆಯೆಂಬ ವರದಿಗಳ ಬಗೆಗೆ ರಾಜ್ಯಸಭೆಯಲ್ಲಿ ಇಂದು ಸದಸ್ಯರು ಕಳವಳ ವ್ಯಕ್ತಪಡಿಸಿದರು.</p>.<p>ಬೆಳೆಯುತ್ತಿರುವ ಚೀನಾದ ಅಣ್ವಸ್ತ್ರ ಶಕ್ತಿ ಮತ್ತು ಅದರಿಂದ ಭಾರತಕ್ಕಿರುವ ಅಪಾಯವನ್ನು ಸಕಾಲದಲ್ಲಿ ಅರಿತು ಸಣ್ಣದಾಗಿಯಾದರೂ ಅಣುಬಾಂಬ್ ತಯಾ ರಿಸುವ ಪ್ರಯತ್ನಕ್ಕೆ ಕೈ ಹಾಕುವಂತೆ ಅವರು ಸರ್ಕಾರವನ್ನು ಒತ್ತಾಯಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೂಡಾನಿನಿಂದ ಆಮದು ನಿಲ್ಲಿಸಿ ರಾಜ್ಯದಲ್ಲಿ ಹತ್ತಿ ಸಂಗ್ರಹ ಕರಗಿಸಲು ಕೇಂದ್ರಕ್ಕೆ ಸಲಹೆ</strong></p>.<p><strong>ಬೆಂಗಳೂರು, ಜೂನ್ 3–</strong> ಮೈಸೂರು ರಾಜ್ಯದಲ್ಲಿ ವ್ಯಾಪಾರಿಗಳು ಮತ್ತು ಗಿರಣಿ ಗಳು ಕೊಳ್ಳದೆ ರೈತರಲ್ಲಿ ಕೋಟ್ಯಂತರ ರೂ. ಬೆಲೆ ಹತ್ತಿ ದಾಸ್ತಾನು ಉಳಿದಿರುವ ಬಗ್ಗೆ ಶೀಘ್ರ ಪರಿಹಾರ ಸೂಚಿಸುವ ಭರವಸೆ ಯನ್ನು ಕೇಂದ್ರವು ರಾಜ್ಯ ಸರ್ಕಾರಕ್ಕೆ ನೀಡಿದೆಯೆಂದು ತಿಳಿದುಬಂದಿದೆ.</p>.<p>ದೇಶದಲ್ಲಿಯೇ ಗಿರಣಿಗಳು ಕೊಳ್ಳದ ‘ಲಾಂಗ್ ಸ್ಟೇಪಲ್’ ಹತ್ತಿ ರೈತರ ಬಳಿ ಉಳಿದು ಹೋಗಿರುವಾಗ ಸೂಡಾನಿನಿಂದ ಹತ್ತಿ ಆಮದು ಮಾಡಿಕೊಳ್ಳುವ ಔಚಿತ್ಯವನ್ನು ರಾಜ್ಯ ಸರ್ಕಾರದ ವಲಯಗಳಲ್ಲಿ ಪ್ರಶ್ನಿಸಲಾಗುತ್ತಿದೆ.</p>.<p><strong>ಚೀನಾದ ಖಂಡಾಂತರ ಕ್ಷಿಪಣಿ ಪ್ರಯೋಗ ಸಿದ್ಧತೆ: ರಾಜ್ಯಸಭೆ ಕಳವಳ</strong></p>.<p><strong>ನವದೆಹಲಿ, ಜೂನ್ 3– </strong>ಹಿಂದೂ ಮಹಾಸಾಗರದಲ್ಲಿ ಚೀನಾ ಖಂಡಾಂತರ ಕ್ಷಿಪಣಿಯೊಂದರ ಪರೀಕ್ಷಾ ಪ್ರಯೋಗ ನಡೆಸಲಿದೆಯೆಂಬ ವರದಿಗಳ ಬಗೆಗೆ ರಾಜ್ಯಸಭೆಯಲ್ಲಿ ಇಂದು ಸದಸ್ಯರು ಕಳವಳ ವ್ಯಕ್ತಪಡಿಸಿದರು.</p>.<p>ಬೆಳೆಯುತ್ತಿರುವ ಚೀನಾದ ಅಣ್ವಸ್ತ್ರ ಶಕ್ತಿ ಮತ್ತು ಅದರಿಂದ ಭಾರತಕ್ಕಿರುವ ಅಪಾಯವನ್ನು ಸಕಾಲದಲ್ಲಿ ಅರಿತು ಸಣ್ಣದಾಗಿಯಾದರೂ ಅಣುಬಾಂಬ್ ತಯಾ ರಿಸುವ ಪ್ರಯತ್ನಕ್ಕೆ ಕೈ ಹಾಕುವಂತೆ ಅವರು ಸರ್ಕಾರವನ್ನು ಒತ್ತಾಯಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>