<p>ಕೇರಳದ ಕಾಲೇಜು ಶಿಕ್ಷಕರೂ ಸೇರಿದಂತೆ ಖೋಟಾ ಡಾಲರ್ ತಂಡದ ಬಂಧನ</p>.<p><strong>ಬೆಂಗಳೂರು, ಅ. 15– </strong>ನಕಲಿ ಅಮೆರಿಕನ್ ಡಾಲರ್ ಕರೆನ್ಸಿ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತಂದರೆಂಬ ಆಪಾದನೆ ಮೇಲೆ ಗಣ್ಯ ನಾಗರಿಕರು, ವರ್ತಕರು ಇರುವ ಭಾರೀ ತಂಡವೊಂದನ್ನು ರಾಜ್ಯದ ಸಿಐಡಿ ಪೊಲೀಸರು ಬಂಧಿಸಿದ್ದಾರೆ.</p>.<p>ಕೇರಳ ಮತ್ತು ಮೈಸೂರು ರಾಜ್ಯಗಳಿಗೆ ಸೇರಿದ 11 ಮಂದಿ ಇರುವ ತಂಡದಿಂದ 20 ಡಾಲರ್ ಮೌಲ್ಯದ ಒಟ್ಟು 75 ಕರೆನ್ಸಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.</p>.<p>ಕೊಯಮತ್ತೂರಿನ ಟೆಕ್ಸ್ಟೈಲ್ ಉದ್ದಿಮೆದಾರ ರಾಜೇಂದ್ರ ಅವರು ಈ ತಂಡದ ನಾಯಕರೆಂದು ಹೇಳಲಾಗಿದೆ.</p>.<p>ಕಲ್ಲಿಕೋಟೆಯ ಸೈನ್ಸ್ ಮತ್ತು ಆರ್ಟ್ಸ್ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಕೆ. ಜೋಸೆಫ್, ಕೊಟ್ಟಾಯಂ ಜಿಲ್ಲೆಯ ಪಲಾಯಿಯ ಲೆಕ್ಚರರ್ ಜಾರ್ಜ್ ಸಿ. ಮುತಾಲಿ, ರಬ್ಬರ್ ತೋಟಗಳ ಒಡೆಯ ಕೆ. ರವೀಂದ್ರನ್ ಮತ್ತು ಕಂಟ್ರಾಕ್ಟರ್ ಕೆ. ಸುಗಥನ್ ಬಂಧಿತರು.</p>.<p><strong>ಗಾಂಧಿವಾದ ಪಾಲನೆಯಲ್ಲಿ ಚೀನಾದ್ದೇ ಮೇಲುಗೈ</strong></p>.<p><strong>ಅಹಮದಾಬಾದ್, ಅ. 15– </strong>ಗಾಂಧೀಜಿಯವರು ಭಾರತದ ರಾಷ್ಟ್ರಪಿತನಾದರೂ ಅವರ ವಿಚಾರಧಾರೆಗಳನ್ನು ಭಾರತಕ್ಕಿಂತ ಚೀನಾದಲ್ಲಿಯೇ ಹೆಚ್ಚಾಗಿ ಅನುಷ್ಠಾನಕ್ಕೆ ತರಲಾಗಿದೆ ಎಂದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಲಿಯ ಮಾಜಿ ಡೈರೆಕ್ಟರ್ ಡಾ. ಆತ್ಮಾರಾಂ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೇರಳದ ಕಾಲೇಜು ಶಿಕ್ಷಕರೂ ಸೇರಿದಂತೆ ಖೋಟಾ ಡಾಲರ್ ತಂಡದ ಬಂಧನ</p>.<p><strong>ಬೆಂಗಳೂರು, ಅ. 15– </strong>ನಕಲಿ ಅಮೆರಿಕನ್ ಡಾಲರ್ ಕರೆನ್ಸಿ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತಂದರೆಂಬ ಆಪಾದನೆ ಮೇಲೆ ಗಣ್ಯ ನಾಗರಿಕರು, ವರ್ತಕರು ಇರುವ ಭಾರೀ ತಂಡವೊಂದನ್ನು ರಾಜ್ಯದ ಸಿಐಡಿ ಪೊಲೀಸರು ಬಂಧಿಸಿದ್ದಾರೆ.</p>.<p>ಕೇರಳ ಮತ್ತು ಮೈಸೂರು ರಾಜ್ಯಗಳಿಗೆ ಸೇರಿದ 11 ಮಂದಿ ಇರುವ ತಂಡದಿಂದ 20 ಡಾಲರ್ ಮೌಲ್ಯದ ಒಟ್ಟು 75 ಕರೆನ್ಸಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.</p>.<p>ಕೊಯಮತ್ತೂರಿನ ಟೆಕ್ಸ್ಟೈಲ್ ಉದ್ದಿಮೆದಾರ ರಾಜೇಂದ್ರ ಅವರು ಈ ತಂಡದ ನಾಯಕರೆಂದು ಹೇಳಲಾಗಿದೆ.</p>.<p>ಕಲ್ಲಿಕೋಟೆಯ ಸೈನ್ಸ್ ಮತ್ತು ಆರ್ಟ್ಸ್ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಕೆ. ಜೋಸೆಫ್, ಕೊಟ್ಟಾಯಂ ಜಿಲ್ಲೆಯ ಪಲಾಯಿಯ ಲೆಕ್ಚರರ್ ಜಾರ್ಜ್ ಸಿ. ಮುತಾಲಿ, ರಬ್ಬರ್ ತೋಟಗಳ ಒಡೆಯ ಕೆ. ರವೀಂದ್ರನ್ ಮತ್ತು ಕಂಟ್ರಾಕ್ಟರ್ ಕೆ. ಸುಗಥನ್ ಬಂಧಿತರು.</p>.<p><strong>ಗಾಂಧಿವಾದ ಪಾಲನೆಯಲ್ಲಿ ಚೀನಾದ್ದೇ ಮೇಲುಗೈ</strong></p>.<p><strong>ಅಹಮದಾಬಾದ್, ಅ. 15– </strong>ಗಾಂಧೀಜಿಯವರು ಭಾರತದ ರಾಷ್ಟ್ರಪಿತನಾದರೂ ಅವರ ವಿಚಾರಧಾರೆಗಳನ್ನು ಭಾರತಕ್ಕಿಂತ ಚೀನಾದಲ್ಲಿಯೇ ಹೆಚ್ಚಾಗಿ ಅನುಷ್ಠಾನಕ್ಕೆ ತರಲಾಗಿದೆ ಎಂದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಲಿಯ ಮಾಜಿ ಡೈರೆಕ್ಟರ್ ಡಾ. ಆತ್ಮಾರಾಂ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>