<p><strong>ಜಯಚಾಮರಾಜ ಒಡೆಯರ್ ನಿಧನ</strong></p>.<p>ಬೆಂಗಳೂರು, ಸೆ. 23– ಐದೂವರೆ ಶತಕಗಳ ಕಾಲ, ಇಪ್ಪತ್ತೈದು ತಲೆಮಾರುಗಳಲ್ಲಿ, ಮೈಸೂರನ್ನು ಆಳಿದ ಯದುವಂಶದ ಕಡೆಯ ಅರಸು ಮಾಜಿ ಮಹಾರಾಜ ಜಯಚಾಮರಾಜ ಒಡೆಯರ್ ಅವರು ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ನಿಧನ ಹೊಂದಿದರೆಂದು ವರದಿ ಮಾಡಲು ವಿಷಾದಿಸುತ್ತೇವೆ.</p>.<p>ಮೂರು ದಿನಗಳಿಂದ ತುಸು ಅಸ್ವಸ್ಥರಾಗಿದ್ದ 55ರ ಹರೆಯದ ಒಡೆಯರ್ ಅವರಿಗೆ ನಿನ್ನೆ ರಾತ್ರಿಯಿಂದ ಶ್ವಾಸಕೋಶದ ನ್ಯುಮೋನಿಯಾ ಉಲ್ಬಣಿಸಿ, ಇಂದು ಬೆಳಿಗ್ಗೆ 9.20ಕ್ಕೆ ಅಂತ್ಯದ ಗಳಿಗೆ ಪ್ರಾಪ್ತವಾಯಿತು.</p>.<p>ಜನತೆ ಸುರಿಸಿತು ಅಶ್ರುಧಾರೆ: ಇಂದು ಬೆಳಿಗ್ಗೆ 11.30ಕ್ಕೆ ಬೆಂಗಳೂರು ಅರಮನೆಯಿಂದ ಮರಳಿ ಬಾರದ ಜಾಗ ಸೇರಲು ಹೊರಟ ಮೈಸೂರಿನ ಮಾಜಿ ಆತ್ಮೀಯ ಆಳರಸ ಜಯಚಾಮರಾಜ ಒಡೆಯರ್ ಅವರಿಗೆ, ಧಾವಿಸಿಬಂದ ಜನತೆ ಸುರಿಸಿದ ಕಂಬನಿ ಬಹುಕಾಲ ಸ್ಮರಣೀಯ.</p>.<p>ಅರಮನೆಯ ಅಂಗಣದಿಂದ ಹಿಡಿದು, ಮೈಸೂರುವರೆಗಿನ 87 ಮೈಲಿ ದೂರದ ಮಾರ್ಗದುದ್ದಕ್ಕೂ ಹಲವರು ಗೊಳೋ ಎಂದು ಅತ್ತರು; ಆ ಅಳು ಧ್ವನಿಯಲ್ಲೇ ‘ಗೋವಿಂದಾ ಗೋವಿಂದಾ’ ಎಂದು ಕರೆದರು. ‘ಜಯಚಾಮರಾಜ ಒಡೆಯರಿಗೆ ಜಯವಾಗಲಿ’ ಎಂದು ಕೂಗಿದರು.</p>.<p>ತಂದೆಗೂ ಮಗನಿಗೂ ಒಂದೇ ಬಗೆ ಸಾವು</p>.<p>ಬೆಂಗಳೂರು, ಸೆ. 23– ತಂದೆಗೂ ಮಗನಿಗೂ ಒಂದೇ ಕಾಯಿಲೆಯಿಂದ ಮೃತ್ಯು. ಇದೊಂದು ವಿಧಿ ವೈಚಿತ್ರ್ಯ.</p>.<p>36 ವರ್ಷದ ಹಿಂದೆ, ಸಂಸಾರಸಮೇತ<br>ರಾಗಿ ವಿಶ್ವಪರ್ಯಟನೆಗೆ ಹೊರಟ ಕಂಠೀರವ ನರಸಿಂಹರಾಜ ಒಡೆಯರ್ ಅವರು, ಮುಂಬೈ<br>ಯಲ್ಲಿ ನ್ಯುಮೋನಿಯಾಕ್ಕೆ ಬಲಿಯಾದರು.</p>.<p>ಮೊನ್ನೆ ಶುಕ್ರವಾರ ತಾನೇ ಶೃಂಗೇರಿಯಿಂದ ತೀರ್ಥಯಾತ್ರೆ ಮುಗಿಸಿ ಬಂದ ಜಯಚಾಮರಾಜ ಒಡೆಯರ್, ದಾರಿಯಲ್ಲೇ ಅಸ್ವಸ್ಥರಾಗಿದ್ದರು. ವೈದ್ಯರು ಅವರ ಸಾವಿಗೆ ಕೊಟ್ಟ ಕಾರಣ ನ್ಯುಮೋನಿಯಾ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಯಚಾಮರಾಜ ಒಡೆಯರ್ ನಿಧನ</strong></p>.<p>ಬೆಂಗಳೂರು, ಸೆ. 23– ಐದೂವರೆ ಶತಕಗಳ ಕಾಲ, ಇಪ್ಪತ್ತೈದು ತಲೆಮಾರುಗಳಲ್ಲಿ, ಮೈಸೂರನ್ನು ಆಳಿದ ಯದುವಂಶದ ಕಡೆಯ ಅರಸು ಮಾಜಿ ಮಹಾರಾಜ ಜಯಚಾಮರಾಜ ಒಡೆಯರ್ ಅವರು ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ನಿಧನ ಹೊಂದಿದರೆಂದು ವರದಿ ಮಾಡಲು ವಿಷಾದಿಸುತ್ತೇವೆ.</p>.<p>ಮೂರು ದಿನಗಳಿಂದ ತುಸು ಅಸ್ವಸ್ಥರಾಗಿದ್ದ 55ರ ಹರೆಯದ ಒಡೆಯರ್ ಅವರಿಗೆ ನಿನ್ನೆ ರಾತ್ರಿಯಿಂದ ಶ್ವಾಸಕೋಶದ ನ್ಯುಮೋನಿಯಾ ಉಲ್ಬಣಿಸಿ, ಇಂದು ಬೆಳಿಗ್ಗೆ 9.20ಕ್ಕೆ ಅಂತ್ಯದ ಗಳಿಗೆ ಪ್ರಾಪ್ತವಾಯಿತು.</p>.<p>ಜನತೆ ಸುರಿಸಿತು ಅಶ್ರುಧಾರೆ: ಇಂದು ಬೆಳಿಗ್ಗೆ 11.30ಕ್ಕೆ ಬೆಂಗಳೂರು ಅರಮನೆಯಿಂದ ಮರಳಿ ಬಾರದ ಜಾಗ ಸೇರಲು ಹೊರಟ ಮೈಸೂರಿನ ಮಾಜಿ ಆತ್ಮೀಯ ಆಳರಸ ಜಯಚಾಮರಾಜ ಒಡೆಯರ್ ಅವರಿಗೆ, ಧಾವಿಸಿಬಂದ ಜನತೆ ಸುರಿಸಿದ ಕಂಬನಿ ಬಹುಕಾಲ ಸ್ಮರಣೀಯ.</p>.<p>ಅರಮನೆಯ ಅಂಗಣದಿಂದ ಹಿಡಿದು, ಮೈಸೂರುವರೆಗಿನ 87 ಮೈಲಿ ದೂರದ ಮಾರ್ಗದುದ್ದಕ್ಕೂ ಹಲವರು ಗೊಳೋ ಎಂದು ಅತ್ತರು; ಆ ಅಳು ಧ್ವನಿಯಲ್ಲೇ ‘ಗೋವಿಂದಾ ಗೋವಿಂದಾ’ ಎಂದು ಕರೆದರು. ‘ಜಯಚಾಮರಾಜ ಒಡೆಯರಿಗೆ ಜಯವಾಗಲಿ’ ಎಂದು ಕೂಗಿದರು.</p>.<p>ತಂದೆಗೂ ಮಗನಿಗೂ ಒಂದೇ ಬಗೆ ಸಾವು</p>.<p>ಬೆಂಗಳೂರು, ಸೆ. 23– ತಂದೆಗೂ ಮಗನಿಗೂ ಒಂದೇ ಕಾಯಿಲೆಯಿಂದ ಮೃತ್ಯು. ಇದೊಂದು ವಿಧಿ ವೈಚಿತ್ರ್ಯ.</p>.<p>36 ವರ್ಷದ ಹಿಂದೆ, ಸಂಸಾರಸಮೇತ<br>ರಾಗಿ ವಿಶ್ವಪರ್ಯಟನೆಗೆ ಹೊರಟ ಕಂಠೀರವ ನರಸಿಂಹರಾಜ ಒಡೆಯರ್ ಅವರು, ಮುಂಬೈ<br>ಯಲ್ಲಿ ನ್ಯುಮೋನಿಯಾಕ್ಕೆ ಬಲಿಯಾದರು.</p>.<p>ಮೊನ್ನೆ ಶುಕ್ರವಾರ ತಾನೇ ಶೃಂಗೇರಿಯಿಂದ ತೀರ್ಥಯಾತ್ರೆ ಮುಗಿಸಿ ಬಂದ ಜಯಚಾಮರಾಜ ಒಡೆಯರ್, ದಾರಿಯಲ್ಲೇ ಅಸ್ವಸ್ಥರಾಗಿದ್ದರು. ವೈದ್ಯರು ಅವರ ಸಾವಿಗೆ ಕೊಟ್ಟ ಕಾರಣ ನ್ಯುಮೋನಿಯಾ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>