ಮಂಗಳೂರು, ಅ. 2– ‘ಈ ವರ್ಷದ ಅಂತ್ಯದೊಳಗಾಗಿ ದೇಶದಲ್ಲಿ ಅಸ್ಪೃಶ್ಯತೆ ನಿವಾರಣೆ ಆಗಬೇಕೆಂದು ಕಾಂಗ್ರೆಸ್ ಸಂಕಲ್ಪ ಮಾಡಿದೆ. ಒಂದೇ ಹಂತದಲ್ಲಿ ಇದು ಸಾಧ್ಯವಾಗದಿದ್ದರೂ ದೇವಸ್ಥಾನಗಳು, ಹೋಟೆಲ್ಗಳು ಮತ್ತು ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸಲು ಹರಿಜನರಿಗೆ ಯಾವ ಆತಂಕವೂ ಇಲ್ಲದಂತೆ ಮಾಡಲು ತೀವ್ರ ಯತ್ನ ಮಾಡುತ್ತೇವೆ’ ಎಂದು ಸಹಕಾರ ಸಚಿವ ಶ್ರೀ ಎ.ಶಂಕರ ಆಳ್ವ ಅವರು ಇಂದು ಇಲ್ಲಿ ಹೇಳಿದರು.