ಚಂಡೀಗಢ, ಜೂನ್ 9– ಅಪರಾಧಾತ್ಮಕ ಚಿತ್ರಗಳು ಕೊಲೆ ನಡೆಸಲು ಅಪ್ರಬುದ್ಧ ಮನಸ್ಸುಗಳನ್ನು ಪ್ರೇರೇಪಿಸಬಹುದೇ?
ಜೂನ್ ನಾಲ್ಕರಂದು ತಮ್ಮ ನಿವಾಸದಲ್ಲಿ ಮರಣಕ್ಕೀಡಾದ ಹರಿಯಾಣ ಜೈಲುಗಳ ಡಿ.ಐ.ಜಿ. ಈಶ್ವರಸಿಂಗ್ ಕದನ್ ಅವರ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಈ ಪ್ರಶ್ನೆಯನ್ನು ವಿಶ್ಲೇಷಿಸಿದರೆ ಇದು ಸತ್ಯವೇನೋ ಅನ್ನಿಸದಿರದು.
ಅವರ ಮನೆ ಸೇವಕ, ಹತ್ತೊಂಬತ್ತು ವರ್ಷದ ಲೀಲಾರಾಮ್ ಕುಚ್ನನ್ನು ಪ್ರಶ್ನಿಸಿದಾಗ ಹೊರಬಂದ ಸಂಗತಿಗಳಲ್ಲಿ ಈ ಅಂಶ ಸಾಬೀತಾಗಿದೆ. ಅಪರಾಧವನ್ನು ತೋರುವ ಹಿಂದಿ ಚಿತ್ರವೊಂದರಿಂದತನಗೆ ಈ ಕೊಲೆಗೆ ಪ್ರೇರಣೆ ದೊರೆಯಿತೆಂದು ಆತ ಒಪ್ಪಿಕೊಂಡಿದ್ದಾನೆ.