<p><strong>ಭಯಾನಕ ಅಭಾವ ಸ್ಥಿತಿ ಎದುರಿಸಲು ಉಚಿತ ಗೋದಿ ಹಂಚಲು ನಿರ್ಧಾರ</strong></p>.<p>ಬೆಂಗಳೂರು, ಅ. 24– ರಾಜ್ಯದ ಕೆಲವು ಜಿಲ್ಲೆಗಳಲ್ಲಿನ ಅಭಾವ ‘ಭಯಾನಕ’ವಾಗಿರುವು ದನ್ನು ಎದುರಿಸಲು ಅರಣ್ಯ ಪ್ರದೇಶಗಳಿಗೆ ಜಾನುವಾರಿನ ಸಾಕಾಣಿಕೆ ಹಾಗೂ ದುರ್ಬಲರಿಗೆ ಉಚಿತವಾಗಿ ಗೋದಿ ಹಂಚಿಕೆ ಕ್ರಮಗಳನ್ನು ಇಂದು ಮಂತ್ರಿಮಂಡಲದ ಸಭೆ ತೀರ್ಮಾನಿಸಿತು.</p>.<p>ದುರ್ಬಲರಿಗಾಗಿ ಗಂಜಿ ಕೇಂದ್ರಗಳನ್ನು ಸ್ಥಾಪಿಸುವ ಬದಲು ಉಚಿತವಾಗಿ ಗೋದಿ ಒದಗಿಸುವುದು ಸೂಕ್ತ ಎಂಬುದು ಸರ್ಕಾರದ ಅಭಿಪ್ರಾಯವಾಗಿದೆ.</p>.<p><strong>ನೂರು ಜನ ಹಸಿವಿಗೆ ಬಲಿ</strong></p>.<p>ಬೆಂಗಳೂರು, ಅ. 24– ಹೈದ್ರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಲ್ಲಿ ಸುಮಾರು ನೂರು ಮಂದಿ ಬಡವರು ಹಸಿವಿನಿಂದ ಪ್ರಾಣನೀಗಿದ್ದಾರೆಂದು ಇಂದು ಇಲ್ಲಿ ತಿಳಿಸಿದ ಕಮ್ಯುನಿಸ್ಟ್ ಶಾಸಕ ಎ.ಎನ್.ಪಾಟೀಲ್ ಅವರು, ಜನರಲ್ಲಿ ಗಾಬರಿ ಹುಟ್ಟಿಸದಿರಲು ಈ ಸುದ್ದಿಯನ್ನು ಸರ್ಕಾರ ಮರೆಮಾಚುತ್ತಿದೆ ಎಂದಿದ್ದಾರೆ.</p>.<p>ಗುಲ್ಬರ್ಗ ಜಿಲ್ಲೆಯಲ್ಲಿ 11 ಸಾವಿನ ಪ್ರಕರಣಗಳಿವೆ, ಇತರ ಪ್ರದೇಶಗಳಲ್ಲೂ ಸುಮಾರು ನೂರು ಮಂದಿ ಸಾವಿಗೀಡಾಗಿರುವ ಅನಧಿಕೃತ ಸುದ್ದಿಗಳಿವೆ’ ಎಂದು ಪಾಟೀಲರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಯಾನಕ ಅಭಾವ ಸ್ಥಿತಿ ಎದುರಿಸಲು ಉಚಿತ ಗೋದಿ ಹಂಚಲು ನಿರ್ಧಾರ</strong></p>.<p>ಬೆಂಗಳೂರು, ಅ. 24– ರಾಜ್ಯದ ಕೆಲವು ಜಿಲ್ಲೆಗಳಲ್ಲಿನ ಅಭಾವ ‘ಭಯಾನಕ’ವಾಗಿರುವು ದನ್ನು ಎದುರಿಸಲು ಅರಣ್ಯ ಪ್ರದೇಶಗಳಿಗೆ ಜಾನುವಾರಿನ ಸಾಕಾಣಿಕೆ ಹಾಗೂ ದುರ್ಬಲರಿಗೆ ಉಚಿತವಾಗಿ ಗೋದಿ ಹಂಚಿಕೆ ಕ್ರಮಗಳನ್ನು ಇಂದು ಮಂತ್ರಿಮಂಡಲದ ಸಭೆ ತೀರ್ಮಾನಿಸಿತು.</p>.<p>ದುರ್ಬಲರಿಗಾಗಿ ಗಂಜಿ ಕೇಂದ್ರಗಳನ್ನು ಸ್ಥಾಪಿಸುವ ಬದಲು ಉಚಿತವಾಗಿ ಗೋದಿ ಒದಗಿಸುವುದು ಸೂಕ್ತ ಎಂಬುದು ಸರ್ಕಾರದ ಅಭಿಪ್ರಾಯವಾಗಿದೆ.</p>.<p><strong>ನೂರು ಜನ ಹಸಿವಿಗೆ ಬಲಿ</strong></p>.<p>ಬೆಂಗಳೂರು, ಅ. 24– ಹೈದ್ರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಲ್ಲಿ ಸುಮಾರು ನೂರು ಮಂದಿ ಬಡವರು ಹಸಿವಿನಿಂದ ಪ್ರಾಣನೀಗಿದ್ದಾರೆಂದು ಇಂದು ಇಲ್ಲಿ ತಿಳಿಸಿದ ಕಮ್ಯುನಿಸ್ಟ್ ಶಾಸಕ ಎ.ಎನ್.ಪಾಟೀಲ್ ಅವರು, ಜನರಲ್ಲಿ ಗಾಬರಿ ಹುಟ್ಟಿಸದಿರಲು ಈ ಸುದ್ದಿಯನ್ನು ಸರ್ಕಾರ ಮರೆಮಾಚುತ್ತಿದೆ ಎಂದಿದ್ದಾರೆ.</p>.<p>ಗುಲ್ಬರ್ಗ ಜಿಲ್ಲೆಯಲ್ಲಿ 11 ಸಾವಿನ ಪ್ರಕರಣಗಳಿವೆ, ಇತರ ಪ್ರದೇಶಗಳಲ್ಲೂ ಸುಮಾರು ನೂರು ಮಂದಿ ಸಾವಿಗೀಡಾಗಿರುವ ಅನಧಿಕೃತ ಸುದ್ದಿಗಳಿವೆ’ ಎಂದು ಪಾಟೀಲರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>