ಕಲಬುರ್ಗಿ, ಡಿ. 2– ಹೊಸಪೇಟೆ ರೈಲು ನಿಲ್ದಾಣದ ವಿಶ್ರಾಂತಿ ಕೊಠಡಿಯಿಂದ ಕಳೆದ ತಿಂಗಳು ನಾಪತ್ತೆಯಾಗಿರುವ, ಕೇಂದ್ರ ತನಿಖಾ ವಿಭಾಗದ ವಿಶೇಷ ಪೊಲೀಸ್ ಪಡೆಗೆ ಸೇರಿದ ಸಬ್ ಇನ್ಸ್ಪೆಕ್ಟರ್ ಶ್ರೀ ಸಿಡ್ನಿ ಚಾರ್ಲ್ಸ್ ಅವರ ಪತ್ತೆಗೆ ಸಹಾಯಕವಾದ ಸುದ್ದಿ ಇಲ್ಲವೇ ಸುಳಿವು ನೀಡುವವರಿಗೆ 250 ರೂ. ಬಹುಮಾನ ನೀಡುವುದಾಗಿ ಬಳ್ಳಾರಿ ಪೊಲೀಸ್ ಸೂಪರಿಂಟೆಂಡೆಂಟ್ ಅವರು ಪ್ರಕಟಿಸಿದ್ದಾರೆಂದು ಇಂದು ಇಲ್ಲಿಗೆ ಬಂದ ಸುದ್ದಿ ತಿಳಿಸಿದೆ.